Kumbha Sankranti 2023: ಕುಂಭ ಸಂಕ್ರಾಂತಿ ದಿನ ಈ ಒಂದು ಕೆಲಸ ಮಾಡಿದ್ರೆ ಸಾಕು ಸಾಡೇಸಾತಿ ಕಾಟ ಇರಲ್ಲ

Kumbha Sankranti 2023: ಸಂಕ್ರಾಂತಿ ಎಂದರೆ ಸಂಪ್ರದಾಯದ ಪ್ರಕಾರ ಬಹಳ ವಿಶೇಷವಾದ ದಿನ. ಸಾಮಾನ್ಯವಾಗಿ ಮಕರ ಸಂಕ್ರಾಂತಿಯನ್ನು ಎಲ್ಲರೂ ಆಚರಿಸುತ್ತಾರೆ. ಆದರೆ ಕುಂಭ ಸಂಕ್ರಾಂತಿಯ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಈ ಕುಂಭ ಸಂಕ್ರಾಂತಿ ಎಂದರೇನು, ಈ ಸಮಯದಲ್ಲಿ ಯಾವ ಕೆಲಸ ಮಾಡಬೇಕು ಎಂಬುದು ಇಲ್ಲಿದೆ.

First published:

  • 18

    Kumbha Sankranti 2023: ಕುಂಭ ಸಂಕ್ರಾಂತಿ ದಿನ ಈ ಒಂದು ಕೆಲಸ ಮಾಡಿದ್ರೆ ಸಾಕು ಸಾಡೇಸಾತಿ ಕಾಟ ಇರಲ್ಲ

    ಸಂಕ್ರಾಂತಿ ಎಂದರೆ ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವ ದಿನ. ಈ ದಿನ ನದಿಯಲ್ಲಿ ಸ್ನಾನ ಮಾಡಿ ವಿಶೇಷ ಪೂಜೆ ಮಾಡುವುದರಿಂದ ಜೀವನದ ಅನೇಕ ಕಷ್ಟಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ, ಕುಂಭ ಸಂಕ್ರಾಂತಿಯ ದಿನ ಸಹ ಕೆಲ ವಿಶೇಷ ಕೆಲಸಗಳನ್ನು ಮಾಡಬೇಕು.

    MORE
    GALLERIES

  • 28

    Kumbha Sankranti 2023: ಕುಂಭ ಸಂಕ್ರಾಂತಿ ದಿನ ಈ ಒಂದು ಕೆಲಸ ಮಾಡಿದ್ರೆ ಸಾಕು ಸಾಡೇಸಾತಿ ಕಾಟ ಇರಲ್ಲ

    ಕುಂಭ ಸಂಕ್ರಾಂತಿ ದಿನಾಂಕ: ಈ ವರ್ಷ ಕುಂಭ ಸಂಕ್ರಾಂತಿ ಫೆಬ್ರವರಿ 13 ರಂದು ಬಂದಿದ್ದು, ಈ ದಿನ ಬೆಳಗ್ಗೆ 7:02 ರಿಂದ 9:57 ರವರೆಗೆ ಪೂಜೆಗೆ ಶುಭ ಸಮಯ ಎನ್ನಲಾಗುತ್ತದೆ. ಈ ದಿನ ಸೂರ್ಯ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸುತ್ತಾನೆ.

    MORE
    GALLERIES

  • 38

    Kumbha Sankranti 2023: ಕುಂಭ ಸಂಕ್ರಾಂತಿ ದಿನ ಈ ಒಂದು ಕೆಲಸ ಮಾಡಿದ್ರೆ ಸಾಕು ಸಾಡೇಸಾತಿ ಕಾಟ ಇರಲ್ಲ

    ಇನ್ನು ಕುಂಭ ಸಂಕ್ರಾಂತಿಯ ದಿನ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶನಿಯ ಕಾಟದಿಂದ ಮುಕ್ತಿ ಸಿಗುತ್ತದೆ. ಅಲ್ಲದೇ, ಸಾಡೇಸಾತಿ ಸಮಸ್ಯೆ ಇದ್ದರೆ ಅದರ ಸಮಸ್ಯೆಗಳು ಕಡಿಮೆ ಆಗಬೇಕು ಎಂದರೆ ಕೆಲ ಪರಿಹಾರವನ್ನು ಈ ದಿನ ಮಾಡಬೇಕು.

    MORE
    GALLERIES

  • 48

    Kumbha Sankranti 2023: ಕುಂಭ ಸಂಕ್ರಾಂತಿ ದಿನ ಈ ಒಂದು ಕೆಲಸ ಮಾಡಿದ್ರೆ ಸಾಕು ಸಾಡೇಸಾತಿ ಕಾಟ ಇರಲ್ಲ

    ಇನ್ನು ಕುಂಭ ಸಂಕ್ರಾಂತಿಯ ದಿನ ಕಪ್ಪು ಎಳ್ಳನ್ನು ದಾನ ಮಾಡಬೇಕು ಎನ್ನಲಾಗುತ್ತದೆ. ಕಪ್ಪು ಎಳ್ಳು ಶನಿಯ ನೆಚ್ಚಿನ ವಸ್ತು. ಹಾಗಾಗಿ ಇದನ್ನು ದಾನ ಮಾಡುವುದರಿಂದ ಸಾಡೇಸಾತಿ ದೋಷ ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 58

    Kumbha Sankranti 2023: ಕುಂಭ ಸಂಕ್ರಾಂತಿ ದಿನ ಈ ಒಂದು ಕೆಲಸ ಮಾಡಿದ್ರೆ ಸಾಕು ಸಾಡೇಸಾತಿ ಕಾಟ ಇರಲ್ಲ

    ಈ ಕುಂಭ ಸಂಕ್ರಾಂತಿಯ ದಿನ ಬಡವರು ಮತ್ತು ನಿರ್ಗತಿಕರಿಗೆ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ದಾನ ಮಾಡುವುದು ಬಹಳ ಪ್ರಯೋಜನ ನೀಡುತ್ತದೆ. ಈ ರೀತಿಯ ವಸ್ತುಗಳನ್ನು ದಾನ ಮಾಡುವುದರಿಂದ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೇ, ಈ ದಿನ ಬಡವರಿಗೆ ಅನ್ನದಾನ ಮಾಡಿ.

    MORE
    GALLERIES

  • 68

    Kumbha Sankranti 2023: ಕುಂಭ ಸಂಕ್ರಾಂತಿ ದಿನ ಈ ಒಂದು ಕೆಲಸ ಮಾಡಿದ್ರೆ ಸಾಕು ಸಾಡೇಸಾತಿ ಕಾಟ ಇರಲ್ಲ

    ಇನ್ನು ಈ ದಿನ ಸ್ನಾನ ಮಾಡಿದ ನಂತರ ಕಪ್ಪು ಎಳ್ಳು ಅಥವಾ ಕುಂಕುಮವನ್ನು ನೀರಿನಲ್ಲಿ ಮಿಶ್ರಣ ಮಾಡಿ, ಏಹಿ ಸೂರ್ಯ ಸಹಸ್ತ್ರಾಂಶೋ ತೇಜೋರಾಶೇ ಜಗತ್ಪತೇ , ಕರುಣಾಮಯ ಮಾತೃ ದೇವತೆ ಗೃಹನಾರ್ಘ್ಯ ದಿವಾಕರ ಈ ಮಂತ್ರವನ್ನು ಪಠಿಸುತ್ತಾ ಸೂರ್ಯನಿಗೆ ಈ ನೀರನ್ನು ಅರ್ಪಿಸಬೇಕು.

    MORE
    GALLERIES

  • 78

    Kumbha Sankranti 2023: ಕುಂಭ ಸಂಕ್ರಾಂತಿ ದಿನ ಈ ಒಂದು ಕೆಲಸ ಮಾಡಿದ್ರೆ ಸಾಕು ಸಾಡೇಸಾತಿ ಕಾಟ ಇರಲ್ಲ

    ಕುಂಭ ಸಂಕ್ರಾಂತಿಯ ದಿನ ಹಳದಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ಅಲ್ಲದೇ, ಮನೆಯಲ್ಲಿ ಪೂಜೆ ಮಾಡಿದ ನಂತರ ಕಪ್ಪು ಎಳ್ಳು ಮತ್ತು ತೆಂಗಿನಕಾಯಿಯನ್ನು ಹರಿಯುವ ನೀರಿನಲ್ಲಿ ತೇಲಿ ಬಿಡಬೇಕು. ಈ ದಿನ ಸಂಜೆ ಹಾಗೂ ಬೆಳಗ್ಗೆ ಮನೆಯ ಮೊದಲ ಬಾಗಿಲಿನ ಬಲ ಹಾಗೂ ಎಡ ಬದಿಯಲ್ಲಿ ತುಪ್ಪದ ದೀಪ ಹಚ್ಚಬೇಕು.

    MORE
    GALLERIES

  • 88

    Kumbha Sankranti 2023: ಕುಂಭ ಸಂಕ್ರಾಂತಿ ದಿನ ಈ ಒಂದು ಕೆಲಸ ಮಾಡಿದ್ರೆ ಸಾಕು ಸಾಡೇಸಾತಿ ಕಾಟ ಇರಲ್ಲ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES