Krishna Janmashtami 2021: ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ, ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳು ರೆಡಿ, ಲಕ್ಷ ಲಕ್ಷ ಉಂಡೆ-ಚಕ್ಕುಲಿ ಹೇಗಿದೆ ನೋಡಿ!

Krishna Janmashtami 2021: ಕೃಷ್ಣನ ನಗರ ಉಡುಪಿಯಲ್ಲಿ ಕೊರೊನಾ ಆತಂಕದ ನಡುವೆಯೇ ಸರಳವಾಗಿ ಕೃಷ್ಣಾಷ್ಟಮಿ ಆಚರಿಸಲು ಮಠಗಳು ಸಜ್ಜಾಗಿವೆ. ಲಕ್ಷಾಂತರ ಉಂಡೆ-ಚಕ್ಕುಲಿಗಳು ಕೃಷ್ಣನ ನೈವೇದ್ಯಕ್ಕೆ, ನಂತರ ಭಕ್ತರಿಗೆ ಪ್ರಸಾದ ನೀಡಲು ಸಜ್ಜಾಗಿವೆ. ಅದೆಷ್ಟು ಬಗೆಯ ಖಾದ್ಯಗಳನ್ನು ಕೃಷ್ಣನಿಗಾಗಿ ಮಾಡುತ್ತಾರೆ, ಉಡುಪಿಯ ಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆ ಹೇಗಿರುತ್ತದೆ? ಈ ಬಗ್ಗೆ ಪೂರ್ಣ ವಿವರ ಇಲ್ಲಿದೆ.

First published:

  • 111

    Krishna Janmashtami 2021: ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ, ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳು ರೆಡಿ, ಲಕ್ಷ ಲಕ್ಷ ಉಂಡೆ-ಚಕ್ಕುಲಿ ಹೇಗಿದೆ ನೋಡಿ!

    ಕೋಡುಬಳೆ: ಅನೇಕರ ನೆಚ್ಚಿನ ಕುರುಕಲು ತಿಂಡಿ..ಶ್ರೀಕೃಷ್ಣನಿಗೂ ಇಷ್ಟವಂತೆ. ಉಡುಪಿಯಲ್ಲಿ ಈ ಬಾರಿ ಸರಳ ಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಸೋಮವಾರ ದಿನವಿಡೀ ಉಪವಾಸ ವ್ರತದಲ್ಲಿರುವ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ರಾತ್ರಿ 12ಗಂಟೆ 17ನಿಮಿಷಕ್ಕೆ ಹಾಲು ಹಾಗೂ ನೀರಿನಿಂದ ಚಂದ್ರನಿಗೆ ಅರ್ಘ್ಯ ಸಲ್ಲಿಸಿದ ಬಳಿಕ ಕೃಷ್ಣನಿಗೆ ಅರ್ಘ್ಯ ಸಮರ್ಪಣೆ ನಡೆಯುತ್ತೆ.

    MORE
    GALLERIES

  • 211

    Krishna Janmashtami 2021: ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ, ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳು ರೆಡಿ, ಲಕ್ಷ ಲಕ್ಷ ಉಂಡೆ-ಚಕ್ಕುಲಿ ಹೇಗಿದೆ ನೋಡಿ!

    ಅರಳಿನ ಉಂಡೆ: ಅರಳು ಮತ್ತು ಎಳ್ಳು ಬೆರೆಸಿ ಮಾಡುವ ಈ ರುಚಿಯಾದ ಉಂಡೆ ಉಡುಪಿಯ ಶ್ರೀಕೃಷ್ಣ ನೆಚ್ಚಿನ ಸಿಹಿಗಳಲ್ಲೊಂದು. ಉಂಡೆ ಹಾಗೂ ಚಕ್ಕುಲಿ ಕೃಷ್ಣನಿಗೆ ಬಲು ಪ್ರಿಯ. ಹೀಗಾಗಿ ಶ್ರೀಕೃಷ್ಣ ಮಠ ಭಕ್ತರಿಗೆ ವಿತರಿಸಲು 80ಸಾವಿರ ಉಂಡೆ ಹಾಗೂ 40 ಸಾವಿರ ಚಕ್ಕುಲಿ ತಯಾರು ಮಾಡಿದೆ. ಈ ಮೂಲಕ ಜನ್ಮಾಷ್ಟಮಿಗೆ ಉಡುಪಿ ಸಕಲ ರೀತಿಯಲ್ಲಿ ಸನ್ನದ್ದವಾಗಿದ್ದು. ತಂಬಿಟ್ಟು, ಬಿಳಿ ಹಾಗೂ ಕಪ್ಪು ಎಳ್ಳು,ಅರಳು, ನೆಲಕಡಲೆ, ಬೂಂದಿಯಲ್ಲಿ ಮಾಡಿರುವ ಒಟ್ಟು 80 ಸಾವಿರ ಲಾಡು ರೆಡಿಯಾಗಿದೆ.

    MORE
    GALLERIES

  • 311

    Krishna Janmashtami 2021: ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ, ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳು ರೆಡಿ, ಲಕ್ಷ ಲಕ್ಷ ಉಂಡೆ-ಚಕ್ಕುಲಿ ಹೇಗಿದೆ ನೋಡಿ!

    ಹಲಸಿನ ಎಲೆಯ ಕೊಟ್ಟೆ ಕಡುಬು: ಇದಿಲ್ಲದೇ ಅಷ್ಟಮಿಯ ಆಚರಣೆ ಕಳೆಗಟ್ಟುವುದೇ ಇಲ್ಲ. ಕರಾವಳಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂದ್ರೆ ಕಡುಬು, ಉಂಡೆ-ಚಕ್ಕುಲಿಯದ್ದೇ ಘಮಘಮ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ಮನೆ ಮನೆಯಲ್ಲಿ ಕಡುಬು ಸಾಮಾನ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಲಿ ಎಂಬ ಎಲೆಯಲ್ಲಿ ಮಾಡುವ ಕಡುಬು (ತುಳು ಭಾಷೆಯಲ್ಲಿ ಕೊಟ್ಟಿಗೆ) ವಿಶೇಷವಾದರೆ ಉಡುಪಿ ಜಿಲ್ಲೆಯಲ್ಲಿ ಹಲಸಿನ ಎಲೆಯಲ್ಲಿ ಮಾಡುವ ಕಡುಬು(ತುಳು ಭಾಷೆಯಲ್ಲಿ ಗುಂಡ) ವಿಶೇಷ.. ಉದ್ದು ಹಾಗೂ ಅಕ್ಕಿಯಲ್ಲಿ ಮಾಡುವ ಕಡುಬು ಮಕ್ಕಳಿಗೂ ಪ್ರಿಯ. ಕರಾವಳಿಯಲ್ಲಷ್ಟೇ ಕಡುಬು ಕಾಣಬಹುದು..

    MORE
    GALLERIES

  • 411

    Krishna Janmashtami 2021: ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ, ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳು ರೆಡಿ, ಲಕ್ಷ ಲಕ್ಷ ಉಂಡೆ-ಚಕ್ಕುಲಿ ಹೇಗಿದೆ ನೋಡಿ!

    ಜೊತೆಗೆ ಅಕ್ಕಿಯಿಂದ ಮಾಡಿರುವ 40ಸಾವಿರ ಚಕ್ಕುಲಿ ತಯಾರಾಗಿದೆ. ಈ ಉಂಡೆ ಚಕ್ಕುಲಿಯನ್ನ ಅಷ್ಟಮಿ ಮುಗಿದ ಬಳಿಕ ಕೃಷ್ಣ ದರ್ಶನಕ್ಕೆ ಬರುವ ಭಕ್ತರಿಗೆ ನೀಡಲಾಗುತ್ತೆ. ಕುರುಕಲು ತಿಂಡಿಗಳೇ ಇಲ್ಲಿ ಹೆಚ್ಚು ಪ್ರಧಾನ

    MORE
    GALLERIES

  • 511

    Krishna Janmashtami 2021: ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ, ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳು ರೆಡಿ, ಲಕ್ಷ ಲಕ್ಷ ಉಂಡೆ-ಚಕ್ಕುಲಿ ಹೇಗಿದೆ ನೋಡಿ!

    ಮೂಡೆ ಕೊಟ್ಟಿಗೆ- ಕರಾವಳಿಗೆ ವಿಶಿಷ್ಟವಾದ ಈ ಕಡುಬು ಕೃಷ್ಣ ಜನ್ಮಾಷ್ಟಮಿಯಲ್ಲಿ ಮತ್ತೂ ವಿಶೇಷ. ಜನ್ಮಾಷ್ಣಮಿ ದಿನದಂದು ಪ್ರಧಾನ ಘಟ್ಟವಾದ ರಾತ್ರಿ ನಡೆಯುವ ಅರ್ಘ್ಯ ಸಮರ್ಪಣೆ ಬಳಿಕ ಮರುದಿನ ಶ್ರೀಕೃಷ್ಣ ಲೀಲೋತ್ಸವ ಸಂಭ್ರಮ. ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ಭಕ್ತರಿಗೆ ಅವಕಾಶ ನೀಡಲಾಗಿಲ್ಲ. ಕೇವಲ. ಮಠದ ಸಿಬ್ಬಂದಿಗಳು, ಅಷ್ಟಮಠದ ಯತಿಗಳು ಪಾಲ್ಗೊಳ್ಳುತ್ತಾರೆ. ಆಗಸ್ಟ್ 31ರಂದು ಮಧ್ಯಾಹ್ನ 3:30ಕ್ಕೆ ಗೊಲ್ಲರು ಮಠದ ಮುಖ್ಯದ್ವಾರದ ಎದುರಿರುವ ಮೊಸರು ಕುಡಿಕೆ ಒಡೆಯುವ ಮೂಲಕ ಲೀಲೋತ್ಸವಕ್ಕೆ ಚಾಲನೆ ನೀಡುತ್ತಾರೆ.

    MORE
    GALLERIES

  • 611

    Krishna Janmashtami 2021: ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ, ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳು ರೆಡಿ, ಲಕ್ಷ ಲಕ್ಷ ಉಂಡೆ-ಚಕ್ಕುಲಿ ಹೇಗಿದೆ ನೋಡಿ!

    ಹಾಲಿನ ಪಾಯಸ- ಹಾಲು ಮತ್ತು ಅದರ ಎಲ್ಲಾ ಉತ್ಪನ್ನಗಳು, ಖಾದ್ಯಗಳು ಶ್ರೀಕಷ್ಣನಿಗೆ ಬಹಳ ಪ್ರಿಯವಾದದ್ದು. ಇನ್ನು ಅಷ್ಟಮಿಗೆ ಕಡುಬು, ಉಂಡೆ, ಚಕ್ಕುಲಿ ಜೊತೆಗೆ ಕೋಡುಬಳೆ, ಉದ್ದಿನ ದೋಸೆ, ಮೊಸರು -ಅವಲಕ್ಕಿ, ಹಾಲಿನ ಪಾಯಸ, ಅತ್ರಸ, ಕೋಡುಬಳೆ, ಗರಿ ವಡೆ ಕೂಡ ತಯಾರಾಗುತ್ತೆ. ಒಟ್ಟಾರೆ ಶ್ರೀ ಕೃಷ್ಣ ಜನ್ಮಾಷ್ಟಮಿ ಈ ಬಾರಿಯೂ ಮನೆ ಮನದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತೆ. ಕೃಷ್ಣ ಮಠದಲ್ಲಿ ಕೂಡ ಅಷ್ಟಮಿ ಮುಗಿದ ಬಳಿಕ ಕೃಷ್ಣನಿಗೆ ಸಮರ್ಪಿಸಲಾದ ಉಂಡೆ ಚಕ್ಕುಲಿಯನ್ನ ಭಕ್ತರು ಸವಿಯಬಹುದು.. ಜೊತೆಗೆ ಕೋವಿಡ್ ಆತಂಕವನ್ನೂ ಭಕ್ತರು ಮೈಮರೆಯುವಂತಿಲ್ಲ.

    MORE
    GALLERIES

  • 711

    Krishna Janmashtami 2021: ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ, ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳು ರೆಡಿ, ಲಕ್ಷ ಲಕ್ಷ ಉಂಡೆ-ಚಕ್ಕುಲಿ ಹೇಗಿದೆ ನೋಡಿ!

    ಉಡುಪಿ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿಗಾಗಿ ಬಗೆಬಗೆಯ ಖಾದ್ಯಗಳನ್ನು ತಯಾರಿಸಲಾಗ್ತಿದೆ. ಅರ್ಘ್ಯ ಸಮರ್ಪಣೆ ಬಳಿಕ ಕೃಷ್ಣನಿಗೆ ಶ್ರೀಗಳೇ ಕೈಯಿಂದ ಮಾಡಿರುವ ಉಂಡೆ, ಚಕ್ಕುಲಿ ನೈವೇಧ್ಯ ಮಾಡುತ್ತಾರೆ. ಇದಾದ ಬಳಿಕ ಭಕ್ತರಿಗೂ ಕೃಷ್ಣ ಮಠದ ಒಳಗಿರುವ ನವಗ್ರಹ ಕಿಂಡಿ ಎದುರು ಶಂಕದ ಮೂಲಕ ಕೃಷ್ಣನಿಗೆ ಅರ್ಘ್ಯ ಸಮರ್ಪಿಸುವ ಅವಕಾಶ ನೀಡಲಾಗುತ್ತೆ. ಈ ಮೂಲಕ ಜನ್ಮಾಷ್ಟಮಿ ಉಪವಾಸ ಮುಗಿದ ಹಾಗೆ..

    MORE
    GALLERIES

  • 811

    Krishna Janmashtami 2021: ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ, ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳು ರೆಡಿ, ಲಕ್ಷ ಲಕ್ಷ ಉಂಡೆ-ಚಕ್ಕುಲಿ ಹೇಗಿದೆ ನೋಡಿ!

    ದೊಡ್ಡ ಕಡಾಯಿಯಲ್ಲಿ ಅರಳಿನ ಉಂಡೆ ಮಾಡುತ್ತಿರುವ ಮಠದ ಸಿಬ್ಬಂದಿ. ಆ ಬಳಿಕ ಕೃಷ್ಣನ ಮೃಣ್ಮಯ ಮೂರ್ತಿಯನ್ನ ರಥದಲ್ಲಿಟ್ಟು ಆರತಿ ಎತ್ತಿದ ನಂತರ ರಥೋತ್ಸವ ನಡೆಸಲಾಗುತ್ತೆ. ರಥಬೀದಿಯ ಸುತ್ತಲೂ ಗುರ್ಜಿಯಲ್ಲಿ ಹಾಕಲಾಗಿರುವ ಮೊಸರು ಕುಡಿಕೆಯನ್ನ ಗೊಲ್ಲರು ಆಟವಾಡುತ್ತಾ ಮಡಿಕೆಯನ್ನ ಒಡೆಯುತ್ತಾ ಮುಂದೆ ಸಾಗುತ್ತಾರೆ.

    MORE
    GALLERIES

  • 911

    Krishna Janmashtami 2021: ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ, ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳು ರೆಡಿ, ಲಕ್ಷ ಲಕ್ಷ ಉಂಡೆ-ಚಕ್ಕುಲಿ ಹೇಗಿದೆ ನೋಡಿ!

    ಚಕ್ಕುಲಿ ತಯಾರಿಯಲ್ಲಿ ತೊಡಗಿರುವ ಉಡುಪಿ ಶ್ರೀಕೃಷ್ಣ ಮಠದ ಸಿಬ್ಬಂದಿ. ರಥಬೀದಿಯ ಸುತ್ತಲೂ ಮೂರು ಸುತ್ತು ರಥೋತ್ಸವ ನಡೆದ ಬಳಿಕ ರಥದಲ್ಲಿರುವ ಮೃಣ್ಮಯ ಮೂರ್ತಿಯನ್ನು ಶ್ರೀ ಗಳು ಮಧ್ವಸರೋವರದಲ್ಲಿ ಮೂರ್ತಿ ಸಹಿತ ಸರೋವರಕ್ಕೆ ಹಾರಿ ಮೂರ್ತಿಯ ಅವಭೃತ ಸ್ನಾನ ನಡೆಸಲಾಗುತ್ತೆ. ಈ ಮೂಲಕ ಜನ್ಮಾಷ್ಟಮಿ ಸಂಪನ್ನ ಗೊಳ್ಳುತ್ತೆ.

    MORE
    GALLERIES

  • 1011

    Krishna Janmashtami 2021: ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ, ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳು ರೆಡಿ, ಲಕ್ಷ ಲಕ್ಷ ಉಂಡೆ-ಚಕ್ಕುಲಿ ಹೇಗಿದೆ ನೋಡಿ!

    ಈ ವರ್ಷ ಕೋವಿಡ್ ಹಿನ್ನಲೆಯಲ್ಲಿ ಭಕ್ತರಿಗೆ ಲೀಲೋತ್ಸವದಲ್ಲಿ ಭಕ್ತರಿಗೆ ಪಾಲ್ಗೊಳ್ಳಲುಅವಕಾಶ ಇಲ್ಲ. ಜೊತೆಗೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಹುಲಿ ವೇಷ ಸೇರಿದಂತೆ ಯಾವುದೇ ವೇಷಕ್ಕೆ ಜಿಲ್ಲಾಡಳಿತ ಅವಕಾಶ ನೀಡಿಲ್ಲ.

    MORE
    GALLERIES

  • 1111

    Krishna Janmashtami 2021: ಜನ್ಮಾಷ್ಟಮಿಗೆ ಸಜ್ಜಾದ ಉಡುಪಿ, ಕೃಷ್ಣನಿಗಾಗಿ ಬಗೆಬಗೆಯ ಖಾದ್ಯಗಳು ರೆಡಿ, ಲಕ್ಷ ಲಕ್ಷ ಉಂಡೆ-ಚಕ್ಕುಲಿ ಹೇಗಿದೆ ನೋಡಿ!

    ಪ್ರಸಾದದ ಪೊಟ್ಟಣಗಳನ್ನು ಮಾಡುವುದರಲ್ಲಿ ನಿರತರಾದ ಭಕ್ತರು. ಕೃಷ್ಣಾಷ್ಟಮಿಯಂದ್ರೆ ಮಕ್ಕಳಿಗೆ ವಿಶೇಷ ದಿನ. ಈದಿನ ಮುದ್ದು ಕೃಷ್ಣನಂತೆ ತಯಾರಾಗ್ತಾರೆ. ಪ್ರತೀ ಮನೆಯಲ್ಲೂ ಮುದ್ದು ಕೃಷ್ಣ ಮಕ್ಕಳ ರೂಪದಲ್ಲಿ ಒಲಿದು ಬರುತ್ತಾರೆ. ಆದ್ರೆ ಈ ಬಾರಿ ಶ್ರೀ ಕೃಷ್ಣ ಮಠದಲ್ಲಿ ಮುದ್ದುಮಕ್ಕಳ ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಿಲ್ಲ. ಕೊರೋನಾ ಅಪಾಯ ಇರುವ ಕಾರಣ ಈ ಬಾರಿ ಕೃಷ್ಣಮಠದ ಆವರಣ ಮುದ್ದು ಕೃಷ್ಣರಿಲ್ಲದೆ ಕಳೆಗುಂದಲಿದೆ.

    MORE
    GALLERIES