ಹೊಸ ಅವತಾರದಲ್ಲಿ ಕಾಶಿ ವಿಶ್ವನಾಥ ದೇಗುಲ; ಉದ್ಘಾಟನೆಗೆ ಸಜ್ಜಾದ ಪ್ರಧಾನಿ ಕನಸಿನ ಯೋಜನೆ
ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಪ್ರದೇಶದಲ್ಲಿ (uttar Pradesh) ಈ ಬಾರಿ ಕಾಶಿ ವಿಶ್ವನಾಥ ಮಂದಿರ (Kashi Vishwanath Temple ಎಲ್ಲರ ಗಮನಸೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕನಸಿನ ಯೋಜನೆಯಾದ ಕಾಶಿ ವಿಶ್ವನಾಥ್ ಕಾರಿಡಾರ್ (Kashi Vishwanath Corridor) ಉದ್ಘಾಟನೆಗೆ ಸಿದ್ದತೆ ನಡೆಯುತ್ತಿದೆ. ಈ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಅಡಿ ವಿಶ್ವನಾಥ ಮಂದಿರ ಹೊಸ ಅವತಾರ ಭಕ್ತರ ಗಮನ ಸೆಳೆದಿದೆ.
ಕಾಶಿ ವಿಶ್ವನಾಥ ಮಂದಿರದ ಜೀರ್ಣೋದ್ಧಾರಕ್ಕೆ ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರ ಇದಕ್ಕಾಗಿ ಶ್ರೀ ಕಾಶಿ ವಿಶ್ವನಾಥ ವಿಶೇಷ ಪ್ರದೇಶಾಭಿವೃದ್ಧಿ ಮಂಡಳಿಯನ್ನು ನಿರ್ಮಿಸಿತ್ತು. ಈ ಮೂಲಕ ದೇಗುಲದ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು.
2/ 10
ಪೌರಣಿಕ ಐತಿಹಾಸಿಕ ಮಹತ್ವ ಹೊಂದಿರುವ ಕಾಶಿ ವಿಶ್ವನಾಥ ಮಂದಿರ ಇದೀಗೆ ಹೊಸ ರೂಪದಲ್ಲಿ ಭಕ್ತರ ಸೆಳೆಯಲಿದೆ. ದೇಗುಲದ ಕಟ್ಟಡಗಳಿಗೆ ಪುನರ್ಜ್ಜೀವನ ಕಾರ್ಯ ನಡೆಸಲಾಗಿದೆ.
3/ 10
ಕಾಶಿ ವಿಶ್ವನಾಥ ಧಾಮವು ಕಲಾತ್ಮಕ ಅದ್ಭುತಗಳ 40 ಕ್ಕೂ ಹೆಚ್ಚು ಪುರಾತನ ದೇವಾಲಯಗಳ ಧಾರ್ಮಿಕ ಸಂಯೋಜನೆಯಾಗಿದ್ದು. ವಿಶ್ವನಾಥ ದೇಗುಲ ಪ್ರಮುಖ ಆಕರ್ಷಣೆಯಾಗಿದೆ.
4/ 10
ಕಾಶಿ ದೇವಾಲಯವನ್ನು ಅನೇಕ ಆಕ್ರಮಣಕಾರರು ಹೊಡೆದುರುಳಿಸಿದ್ದು, ಅನೇಕ ಬಾರಿ ಈ ದೇಗುಲವನ್ನು ಮರು ನಿರ್ಮಾಣ ಮಾಡಲಾಗಿದೆ, 1194ರಿಂದ 1777ರವರೆಗೆ ಹಲವಾರು ಬಾರಿ ದೇಗುಲವನ್ನು ಪುನರ್ ನಿರ್ಮಿಸಲಾಗಿದೆ
5/ 10
ಇಂದೋರ್ನ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು 1777 ರಲ್ಲಿ ದೇವಾಲಯವನ್ನು ಪುನರ್ನಿರ್ಮಿಸಿದರು. ನಂತರ ಮಹಾರಾಜ ರಂಜಿತ್ ಸಿಂಗ್ 1835 ರಲ್ಲಿ ದೇಗುಲದ ಗುಮ್ಮಟಕ್ಕೆ ಚಿನ್ನದ ಲೇಪನ ಮಾಡಿದರು. ಇದಕ್ಕಾಗಿ 1,000 ಕೆಜಿ ಚಿನ್ನವನ್ನು ನೀಡಿದರು.
6/ 10
1490 ರಲ್ಲಿ, ಸಿಕಂದರ್ ಲೋಧಿ ಬನಾರಸ್ನ ಪ್ರಮುಖ ದೇವಾಲಯಗಳನ್ನು ಕೆಡವಿದನು. ಇದರಿಂದ ಇಲ್ಲಿನ ಅವಿಮುಕ್ತೇಶ್ವರನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು.
7/ 10
ಬನಾರಸ್ನ ರಘುನಾಥ ಪಂಡಿತ್ ನೆರವಿನಿಂದಾಗಿ 1585 ರಲ್ಲಿ ಹೊಸ ದೇಗುಲ ನಿರ್ಮಿಸಲಾಯಿತು. ಇದನ್ನು 1669 ರಲ್ಲಿ ಔರಂಗಜೇಬ ಕೆಡವಿ ಮಸೀದಿಯಾಗಿ ಪರಿವರ್ತಿಸಿದ್ದ
8/ 10
ಇಂದಿಗೂ ಕೂಡ ಇಲ್ಲಿ ಎರಡು ಹಳೆಯ ವಿಶ್ವನಾಥ ದೇವಾಲಯಗಳ ಅವಶೇಷಗಳ ಮೇಲೆ ಎರಡು ಮಸೀದಿಗಳಿವೆ, ಒಂದನ್ನು ರಜಿಯಾ ಮತ್ತು ಇನ್ನೊಂದು ಔರಂಗಜೇಬ್ ನಿರ್ಮಿಸಿದ. ನಂತರ 1776-77 ರಲ್ಲಿ ಅಹಲ್ಯಾಬಾಯಿ ಹೋಳ್ಕರ್ ಈ ದೇಗುಲಗಳ ಜೀರ್ಣೋದ್ಧರ ನಡೆಸಿದ್ದರು. ಇದೇ ದೇಗುಲ ಪ್ರಸ್ತುತ ಅಸ್ತಿತ್ವದಲ್ಲಿದೆ.
9/ 10
ಇನ್ನು ಈ ಕಾಶಿ ವಿಶ್ವನಾಥ ಆಗಮಿಸುವ ಭಕ್ತರು ಮತ್ತು ಯಾತ್ರಾರ್ಥಿಗಳಿಗೆ ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ವಿಸ್ತರಣೆ ಮತ್ತು ದೇಗುಲವನ್ನು ಸುಂದರೀಕರಣಗೊಳಿಸಲು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ಮಾಡಿದ್ದರು.
10/ 10
ಈಗಾಗಲೇ ಪ್ರಧಾನಿ ಕನಸಿನಂತೆ ಕಾಶಿ ವಿಶ್ವನಾಥ ಕಾರಿಡಾರ್ ರೂಪುಗೊಂಡಿದ್ದು, ಈ ವರ್ಷಾಂತ್ಯದೊಳಗೆ ಪ್ರಧಾನಿಗಳು ಈ ನವೀಕರಿಸಿದ ದೇವಾಲಯದ ಆವರಣವನ್ನು ಉದ್ಘಾಟಿಸಲಿದ್ದಾರೆ