Jyeshtha Maas 2023: ಒಂದು ತಿಂಗಳು ಈ ಕೆಲಸಗಳನ್ನು ಮಾಡಿದ್ರೆ ಗ್ರಹದೋಷದಿಂದ ಮುಕ್ತಿ ಸಿಗುತ್ತೆ

Jyeshtha Maas 2023: ಹಿಂದೂ ಪಂಚಾಂಗದ ಪ್ರಕಾರ ಜ್ಯೇಷ್ಟ ಮಾಸ ವಿಶೇಷವಾಗಿದೆ. ಜೇಷ್ಠ ಮಾಸವು ಬ್ರಹ್ಮ ದೇವರಿಗೆ ಅತ್ಯಂತ ಪ್ರಿಯವಾದ ಮಾಸ ಎನ್ನಲಾಗುತ್ತದೆ. ಈ ಸಮಯದಲ್ಲಿ ಮುಖ್ಯವಾಗಿ ಕೆಲ ಕೆಲಸಗಳನ್ನು ಮಾಡುವುದರಿಂದ ಗ್ರಹದೋಷದಿಂದ ಮುಕ್ತಿ ಸಿಗುತ್ತದೆ. ಯಾವ ರೀತಿಯ ಕೆಲಸ ಮಾಡಬೇಕು ಎಂಬುದು ಇಲ್ಲಿದೆ.

First published:

  • 17

    Jyeshtha Maas 2023: ಒಂದು ತಿಂಗಳು ಈ ಕೆಲಸಗಳನ್ನು ಮಾಡಿದ್ರೆ ಗ್ರಹದೋಷದಿಂದ ಮುಕ್ತಿ ಸಿಗುತ್ತೆ

    ಮೇ 6ರಿಂದ ಜೇಷ್ಠ ಮಾಸ ಆರಂಭವಾಗಿದೆ. ಜ್ಯೇಷ್ಠ ಮಾಸ ಪಂಚಾಂಗದ ಪ್ರಕಾರ ಮೂರನೇ ತಿಂಗಳು. ಈ ಮಾಸದ ಹುಣ್ಣಿಮೆಯಂದು ಚಂದ್ರ ಜ್ಯೇಷ್ಠ ನಕ್ಷತ್ರಕ್ಕೆ ಪ್ರವೇಶ ಮಾಡುವುದರಿಂದ ಇದನ್ನು ಜ್ಯೇಷ್ಠ ಮಾಸ ಎನ್ನಲಾಗುತ್ತದೆ.

    MORE
    GALLERIES

  • 27

    Jyeshtha Maas 2023: ಒಂದು ತಿಂಗಳು ಈ ಕೆಲಸಗಳನ್ನು ಮಾಡಿದ್ರೆ ಗ್ರಹದೋಷದಿಂದ ಮುಕ್ತಿ ಸಿಗುತ್ತೆ

    ನಂಬಿಕೆಗಳ ಪ್ರಕಾರ, ಜ್ಯೇಷ್ಠ ಮಾಸದಲ್ಲಿ ಹನುಮಾನ್, ಸೂರ್ಯ ಮತ್ತು ವರುಣನಿಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ ವಿಶೇಷ ಪೂಜೆಗಳನ್ನು ಮಾಡುವುದರಿಂದ ಬಹಳ ಪ್ರಯೋಜನ ಸಿಗಲಿದೆ. ಮುಖ್ಯವಾಗಿ ಹನುಮಂತ ಆರಾಧನೆ ಮಾಡುವುದು ಗ್ರಹದೋಷದಿಂದ ಮುಕ್ತಿ ಸಿಗುತ್ತದೆ.

    MORE
    GALLERIES

  • 37

    Jyeshtha Maas 2023: ಒಂದು ತಿಂಗಳು ಈ ಕೆಲಸಗಳನ್ನು ಮಾಡಿದ್ರೆ ಗ್ರಹದೋಷದಿಂದ ಮುಕ್ತಿ ಸಿಗುತ್ತೆ

    ಅಯೋಧ್ಯೆ ಜ್ಯೋತಿಶಾಚಾರ್ಯ ಪಂಡಿತ್ ಕಲ್ಕಿ ರಾಮ್ ಅವರ ಪ್ರಕಾರ ಮುಂದಿನ ತಿಂಗಳು 4 ರಂದು ಜ್ಯೇಷ್ಠ ಮಾಸ ಕೊನೆಗೊಳ್ಳಲಿದ್ದು, ಈ ತಿಂಗಳಿಗೆ ತನ್ನದೇ ಆದ ಮಹತ್ವವಿದೆ. ಈ ಮಾಸದಲ್ಲಿ ಯಾವ ಪೂಜೆ, ದಾನ ಮಾಡುವುದರಿಂದ ಗ್ರಹದೋಷ ದೂರವಾಗುತ್ತದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Jyeshtha Maas 2023: ಒಂದು ತಿಂಗಳು ಈ ಕೆಲಸಗಳನ್ನು ಮಾಡಿದ್ರೆ ಗ್ರಹದೋಷದಿಂದ ಮುಕ್ತಿ ಸಿಗುತ್ತೆ

    ಈ ಮಾಸದಲ್ಲಿ ವಿವಿಧ ಪ್ರದೇಶಗಳಲ್ಲಿ ವಿಶೇಷ ಹಬ್ಬಗಳನ್ನು ಆಚರಿಸಲಾಗುತ್ತದೆ. ನಂಬಿಕೆಗಳ ಪ್ರಕಾರ ಹನುಮಂತ ಮತ್ತು ಶ್ರೀರಾಮ ಕಾಡಿನಲ್ಲಿ ಈ ಮಾಸದಲ್ಲಿಯೇ ಭೇಟಿಯಾಗಿದ್ದಂತೆ. ಹಾಗಾಗಿ ಈ ತಿಂಗಳ ಪ್ರತಿ ಮಂಗಳವಾರ ಉಪವಾಸವನ್ನು ಮಾಡುವುದರಿಂದ ನಿಮ್ಮನ್ನ ಇಷ್ಟಾರ್ಥಗಳು ಈಡೇರುತ್ತವೆ.

    MORE
    GALLERIES

  • 57

    Jyeshtha Maas 2023: ಒಂದು ತಿಂಗಳು ಈ ಕೆಲಸಗಳನ್ನು ಮಾಡಿದ್ರೆ ಗ್ರಹದೋಷದಿಂದ ಮುಕ್ತಿ ಸಿಗುತ್ತೆ

    ಇನ್ನು ಜ್ಯೇಷ್ಠ ಮಾಸದಲ್ಲಿ ಸೂರ್ಯ, ಶನಿ ಹಾಗೂ ಹನುಮಂತನನ್ನು ಪೂಜಿಸುವುದರಿಂದ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಹಾಗಾಗಿ ಈ ಸಮಯದಲ್ಲಿ ಸಾಧ್ಯವಾದಷ್ಟು ಶನಿ ಹಾಗೂ ಹನುಮಂತನ ಆರಾಧನೆ ಮಾಡಿ.

    MORE
    GALLERIES

  • 67

    Jyeshtha Maas 2023: ಒಂದು ತಿಂಗಳು ಈ ಕೆಲಸಗಳನ್ನು ಮಾಡಿದ್ರೆ ಗ್ರಹದೋಷದಿಂದ ಮುಕ್ತಿ ಸಿಗುತ್ತೆ

    ಈ ಸಮಯದಲ್ಲಿ ಪ್ರತಿದಿನ ತಪ್ಪದೇ ಹನುಮಾನ್​ ಚಾಲೀಸ್​ ಪಠಣೆ ಮಾಡಬೇಕು. ಹಾಗೆಯೇ, ಶನಿವಾರ ಶನಿ ದೇವಸ್ಥಾನಕ್ಕೆ ಹೋಗಿ ಎಳ್ಳಿನ ದೀಪವನ್ನು ಹಚ್ಚಬೇಕು. ಅದರ ಜೊತೆಗೆ ಹನುಮಂತನಿಗೆ ವೀಳ್ಯದೆಲೆಯ ಹಾರವನ್ನು ಅರ್ಪಿಸಿದರೆ ಬಹಳ ಒಳ್ಳೆಯದು ಎನ್ನಲಾಗುತ್ತದೆ.

    MORE
    GALLERIES

  • 77

    Jyeshtha Maas 2023: ಒಂದು ತಿಂಗಳು ಈ ಕೆಲಸಗಳನ್ನು ಮಾಡಿದ್ರೆ ಗ್ರಹದೋಷದಿಂದ ಮುಕ್ತಿ ಸಿಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES