ಮೇಷ: ಮೇಷ ರಾಶಿಯವರಿಗೆ ಇಂದು ಹಿತಕರ ದಿನವಾಗಲಿದೆ . ವೃತ್ತಿ ಅಥವಾ ವಿರಾಮ ಪ್ರವಾಸವನ್ನು ನೀವು ಕೈಗೊಳ್ಳುವ ಸಾಧ್ಯತೆಯಿರುವುದರಿಂದ ಅದಕ್ಕೆ ಸಿದ್ಧರಾಗಿರಿ. ನಿಮ್ಮ ಡೈರಿಯಲ್ಲಿ ಏನೋ ಬರೆಯಬೇಕು ಎಂದೆನಿಸಿದಲ್ಲಿ ಅದನ್ನು ಮುಂದುವರಿಸಿ. ಇಂದು ನೀವು ಮುಕ್ತವಾಗಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಶಕ್ತರಾಗಿರುವುದರಿಂದ ಬರಹದಲ್ಲಿ ತೊಡಗಿಕೊಳ್ಳಲು ಅರ್ಹವಾಗಿದೆ. ಏನೇ ಆದರೂ, ನಿಮ್ಮ ಆಲೋಚನಾ ಪ್ರಕ್ರಿಯೆಯಲ್ಲಿ ಅನಿರೀಕ್ಷಿತ ಬದಲಾವಣೆ ಉಂಟಾಗಬಹುದು ಇದು ನಿಮ್ಮ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಇನ್ನಷ್ಟು ವಿಳಂಬಗೊಳಿಸಬಹುದು.
ವೃಷಭ: ಶಾಂತಿ ಹಾಗೂ ಸಮಾಧಾನದಿಂದಿರಿ . ನಿಮ್ಮ ಚಂಚಲ ಮನಸ್ಸು ಇಂದು ಗೊಂದಲವನ್ನು ಸೃಷ್ಟಿಸಲಿದೆ ಪರಿಣಾಮವಾಗಿ ಕಾಲಹರಣವಾಗಲಿದೆ. ಕ್ರಿಯೆ ಮತ್ತು ಆಲೋಚನೆಗಳಲ್ಲಿ ಶ್ರಮಕ್ಕಾಗಿ ಹೋರಾಟ, ಸಂಧಾನ ಹೊಂದಾಣಿಕೆ ಮಂತ್ರವನ್ನು ಅನುಸರಿಸುವುದರಿಂದ ನಿಮ್ಮ ದಿನವನ್ನು ಇನ್ನಷ್ಟು ಸುಲಭವಾಗಿಸುತ್ತದೆ. ವಿಶೇಷವಾಗಿ ಕಲಾವಿದರಿಗೆ ಮತ್ತು ಬರಹಗಾರರಿಗೆ ನಿಮ್ಮ ಎಲ್ಲಾ ಸೃಜನಶೀಲ ಆಸಕ್ತಿಗಳಿಗೆ ಸಾಕಷ್ಟು ಅವಕಾಶಗಳು ದೊರೆಯುವುದರಿಂದ ನಿಮ್ಮ ಕ್ರಿಯಾತ್ಮಕ ಶಕ್ತಿಯನ್ನು ಹರಿಯಬಿಡಿ.
ಕಟಕ: ಗೊಂದಲ ಮತ್ತು ಸಂದಿಗ್ಧತೆಯು ಇಂದು ನಿಮ್ಮ ಮನಸ್ಸಿನಲ್ಲಿ ಕಣ್ಣಾಮುಚ್ಚಾಲೆ ಆಟವಾಡಲಿದೆ. ಆದ್ದರಿಂದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ ಮತ್ತು ಅವುಗಳನ್ನು ಇನ್ನೊಂದು ದಿನಕ್ಕೆ ಮುಂದೂಡಿ. ನಿಮ್ಮ ನಾಲಗೆಯ ಬಗ್ಗೆ ನಿಯಂತ್ರಣವಿರಿಸಿ ಇಲ್ಲವಾದಲ್ಲಿ ಕುಟುಂಬ ಸದಸ್ಯರೊಂದಿಗೆ ಸಂಘರ್ಷ ಉಂಟಾಗಬಹುದು ಮತ್ತು ಇದು ನಿಮ್ಮನ್ನು ಅಸಮಾಧಾನಗೊಳಿಸಬಹುದು.
ಸಿಂಹ: ನಿಮ್ಮ ಸ್ನೇಹಿತರು ವಿಶೇಷವಾಗಿ ಮಹಿಳಾ ಸ್ನೇಹಿತರು ಖುಷಿಯಿಂದ ಸಹಾಯ ಮಾಡಲಿದ್ದಾರೆ. ಬಿಡುವಿಲ್ಲದ ತುಂಬಾ ದಿನ ಅಥವಾ ವಾರಗಳ ನಂತರ, ವಿಶ್ರಮಿಸಲು ಅವರೊಂದಿಗೆ ಅಥವಾ ಪ್ರೀತಿಪಾತ್ರರೊಂದಿಗೆ ಸುಂದರ ಪ್ರದೇಶಗಳಿಗೆ ಪ್ರವಾಸ ತೆರಳುವುದು ಉತ್ತಮ ಆಲೋಚನೆ. ಲಕ್ಷ್ಮೀದೇವಿಯು ಖಂಡಿತವಾಗಿಯೂ ನಿಮ್ಮನ್ನು ಇಂದು ಹರಸುತ್ತಾಳೆ. ಆದ್ದರಿಂದ ಐಶ್ವರ್ಯ ಪ್ರಾಬಲ್ಯವನ್ನು ಆನಂದಿಸಿ. ಏನೇ ಆದರೂ, ಸಮಯ ಮತ್ತು ಹರಿವು ಯಾರಿಗೂ ಕಾಯುವುದಿಲ್ಲ. ಆದ್ದರಿಂದ ಅಮೂಲ್ಯ ಸಮಯಗಳನ್ನು ಹಾಳುಮಾಡಬೇಡಿ.
ತುಲಾ: ವ್ಯವಹಾರದಲ್ಲಿ ಉತ್ತಮ ಪ್ರತಿಫಲ ಬರುವ ಸಾಧ್ಯತೆಯಿರುವುದರಿಂದ ಒಟ್ಟಾರೆಯಾಗಿ ಇಂದು ಉತ್ತಮ ದಿನವಾಗಿರುವ ನಿರೀಕ್ಷೆಯಿದೆ. ಆದರೂ, ಕಾರ್ಯಕ್ಷೇತ್ರದಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಯಾವುದೇ ಬೆಂಬಲವನ್ನು ನಿರೀಕ್ಷಿಸಬೇಡಿ. ಧಾರ್ಮಿಕ ಅಥವಾ ದೈವಿಕ ಸಂಬಂಧಿ ಪ್ರಯಾಣ ತೆರಳಲಿದ್ದೀರಿ. ಈ ದಿನದ ಕೆಲವು ಹೊತ್ತಲ್ಲಿ ನೀವು ನಿರುತ್ಸಾಹ ಹಾಗೂ ಆಯಾಸದಿಂದಿರುವಂತೆ ಅನಿಸಬಹುದು.ಸೃಜನಶೀಲ ಚಟುವಟಿಕೆಗಳು ಮತ್ತು ಬೌದ್ಧಿಕ ಚರ್ಚೆಗಳು ನಿಮ್ಮ ಚೈತನ್ಯವನ್ನು ವೃದ್ಧಿಸಲಿವೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ವೈದ್ಯರ ಭೇಟಿಯನ್ನು ತಪ್ಪಿಸಬೇಡಿ.
ವೃಶ್ಚಿಕ: ಇಂದು ಎಚ್ಚರಿಕೆಯಿಂದಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ವಿರೋಧಿಗಳನ್ನು ತಪ್ಪಿಸಲು ಉತ್ತಮ ಮತ್ತು ಶಾಂತಿಯುತ ದಿನವನ್ನು ಪ್ರಾರಂಭಿಸಿ. ಗ್ರಹಗತಿಗಳು ಅನುಕೂಲಕರ ಸ್ಥಿತಿಯಲ್ಲಿ ಇಲ್ಲದ ಕಾರಣ ಹೊಸ ಕೆಲಸವನ್ನು ಕೆಲವು ದಿನಗಳ ಕಾಲ ಮುಂದೂಡಿ. ನಿಮ್ಮ ಸಿಟ್ಟಿನ ಬಗ್ಗೆ ನಿಯಂತ್ರಣವನ್ನು ಇಟ್ಟುಕೊಳ್ಳಿ. ದುಂದುವೆಚ್ಚವು ಹಣಕಾಸು ಬಿಕ್ಕಟ್ಟನ್ನು ಉಂಟುಮಾಡಬಹುದು. ಆದ್ದರಿಂದ ನಿಮ್ಮ ಹೂಡಿಕೆ ಮತ್ತು ವೆಚ್ಚದಲ್ಲಿ ಹತೋಟಿಯಿರಲಿ.
ಧನಸ್ಸು: ನಿಮ್ಮ ಅದೃಷ್ಟದ ಗ್ರಹಗತಿಯು ಇಂದು ಅದ್ಭುತ ದಿನವನ್ನು ಪ್ರಕಾಶಿಸುತ್ತದೆ. ಈ ಮೂಲಕ ಪ್ರತೀ ವಿಚಾರಗಳಲ್ಲೂ ಹರ್ಷವನ್ನು ನೀಡುತ್ತದೆ. ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಾಲುದಾರಿಕೆ ಮತ್ತು ಗುಂಪುಕಾರ್ಯವು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇಷ್ಟು ಸಾಕಾಗದಿದ್ದಲ್ಲಿ, ನಿಮ್ಮ ಸ್ನೇಹಿತರ ಭೇಟಿ ಮತ್ತು ಅವರೊಂದಿಗಿನ ತಿರುಗಾಟದ ವೇಳೆ ಉತ್ಸಾಹ ಮತ್ತು ಚೈತನ್ಯ ವರ್ಧನೆಯನ್ನು ನಿರೀಕ್ಷಿಸಬಹುದು.
ಕುಂಭ: ಗ್ರಹಗತಿಗಳು ನಿಮಗೆ ತೊಂದರೆಯನ್ನುಂಟುಮಾಡಬಹುದು . ಹೊಸ ಯೋಜನೆಗಳ ಪ್ರಾರಂಭ ಮತ್ತು ಪ್ರಯಾಣವನ್ನು ತಪ್ಪಿಸಿ ಇಂದು ನೀವು ದಿನಪೂರ್ತಿ ತಳಮಳ ಹಾಗೂ ಆತಂಕದಿಂದ ಕೂಡಿರುತ್ತೀರಿ. ಮಹಿಳೆಯರು ತಮ್ಮ ದುರಾಕ್ರಮಣ ಪ್ರವೃತ್ತಿಯನ್ನು ನಿಯಂತ್ರಣದಲ್ಲಿರಿಸಬೇಕು ಮತ್ತು ಎಲ್ಲಾ ಸಮಯದಲ್ಲೂ ಸಮಾಧಾನದಿಂದಿರಬೇಕು. ನಿಮ್ಮನ್ನು ಪ್ರಚೋದಿಸುವವರ ಮೂಲಕ ಕಾಣುವುದು ಉತ್ತಮ ಹಾದಿ.
ಮೀನ: ಪರೀಕ್ಷಾತ್ಮಕ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಭಾಗಶಃ ಎಲ್ಲಾ ಕ್ಷೇತ್ರಗಳ್ಲಲೂ ನೀವು ಎದುರಿಸುವ ಸಮಸ್ಯೆಗಳು ನಿಷ್ಕರುಣೆಯಿಂದ ಕೂಡಿರುತ್ತದೆ. ಪರಿಣಾಮವಾಗಿ ನಿಮ್ಮ ಸ್ಥೈರ್ಯವು ದಿನಪೂರ್ತಿ ಕಡಿಮೆಯಾಗಿರುತ್ತದೆ. ನಿಮ್ಮ ಆರೋಗ್ಯ ಮತ್ತು ಐಶ್ವರ್ಯದ ಮೇಲೆ ತೊಂದರೆ ಉಂಟಾಗಬಹುದು ಆದ್ದರಿಂದ ಈ ದಿನ ಪೂರ್ತಿ ಶಾಂತರೀತಿಯಿಂದಿರಲು ಪ್ರಯತ್ನಿಸಿ.