Shani Temple: ಕಣ್ಣಿಲ್ಲದವನಿಗೆ ದೃಷ್ಟಿ ಕೊಟ್ಟ ಭಗವಂತ- ಈ ಶನಿ ದೇವಾಲಯದಲ್ಲಿ ನಡೆಯೋ ಪವಾಡ ಒಂದೆರಡಲ್ಲ

Shani Temple: ನಮ್ಮ ದೇಶದಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಆಯಾ ದೇವಾಲಯಗಳ ಬಗ್ಗೆ ಅನೇಕ ಐತಿಹಾಸಿಕ ಕಥೆಗಳಿಗೆ. ಕೆಲವೊಂದು ದೇವಸ್ಥಾನದಲ್ಲಿ ಈಗಲೂ ಕೆಲವು ಹಳೆಯ ಪದ್ಧತಿಗಳನ್ನು ಅನುಸರಿಸಲಾಗುತ್ತಿದೆ. ಆ ರೀತಿಯ ವಿಭಿನ್ನ ಶನಿ ದೇವಸ್ಥಾನವೊಂದು ಭಾರತದಲ್ಲಿದ್ದು, ಅದರ ಮಾಹಿತಿ ಇಲ್ಲಿದೆ.

First published:

  • 19

    Shani Temple: ಕಣ್ಣಿಲ್ಲದವನಿಗೆ ದೃಷ್ಟಿ ಕೊಟ್ಟ ಭಗವಂತ- ಈ ಶನಿ ದೇವಾಲಯದಲ್ಲಿ ನಡೆಯೋ ಪವಾಡ ಒಂದೆರಡಲ್ಲ

    ಮಧ್ಯಪ್ರದೇಶದ ಇಂದೋರ್‌ನಲ್ಲಿ, ಸುಮಾರು 500 ವರ್ಷಗಳ ಹಿಂದೆ ಉದ್ಭವಿಸಿದ ಶನಿಗೆ ಸೇರಿದ ದೇವಾಲಯವಿದ್ದು, ಬಹುತೇಕ ಸುತ್ತ-ಮುತ್ತಲಿನ ಜನರು ಈ ಶನಿಯನ್ನು ಪೂಜಿಸುತ್ತಾರೆ. ಆದರೆ ಇದರ ವಿಶೇಷತೆ ಎಂದರೆ ಶನಿ ದೇವರಿಗೆ ಅಭಿಷೇಕ ಮಾಡಲು ಭಕ್ತರು ಎಣ್ಣೆಗಿಂತ ಹೆಚ್ಚು ಹಾಲು ಮತ್ತು ತಣ್ಣೀರನ್ನು ಬಳಸುತ್ತಾರೆ. (ಸಾಂದರ್ಭಿಕ ಫೋಟೋ)

    MORE
    GALLERIES

  • 29

    Shani Temple: ಕಣ್ಣಿಲ್ಲದವನಿಗೆ ದೃಷ್ಟಿ ಕೊಟ್ಟ ಭಗವಂತ- ಈ ಶನಿ ದೇವಾಲಯದಲ್ಲಿ ನಡೆಯೋ ಪವಾಡ ಒಂದೆರಡಲ್ಲ

    ಈ ದೇವಸ್ಥಾನ ಬಹಳ ವಿಶೇಷವಾಗಿದ್ದು, ಇಲ್ಲಿನ ಶನಿ ದೇವರಿಗೆ ಹದಿನಾರು ಆಭರಣಗಳನ್ನು ಸಹ ಮಾಡಿ ಹಾಕಲಾಗಿದೆ. ಇಂದೋರ್‌ನಲ್ಲಿರುವ ಪುರಾತನ ಜುನಿ ಶನಿ ದೇವಾಲಯದಲ್ಲಿ ಶನಿದೇವನಿಗೆ ಹಾಲು ಮತ್ತು ನೀರನ್ನು ಎಣ್ಣೆಯ ಜೊತೆಗೆ ಅರ್ಪಿಸಿದರೆ ಕಷ್ಟಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ. (ಸಾಂದರ್ಭಿಕ ಫೋಟೋ)

    MORE
    GALLERIES

  • 39

    Shani Temple: ಕಣ್ಣಿಲ್ಲದವನಿಗೆ ದೃಷ್ಟಿ ಕೊಟ್ಟ ಭಗವಂತ- ಈ ಶನಿ ದೇವಾಲಯದಲ್ಲಿ ನಡೆಯೋ ಪವಾಡ ಒಂದೆರಡಲ್ಲ

    ಈ ದೇವಾಸ್ಥಾನ ಪ್ರತಿದಿನ ಭಕ್ತರಿಂದ ತುಂಬಿ ತುಳುಕುತ್ತಿದ್ದರೂ ಕಡ ಶನಿವಾರದಂದು ಭಕ್ತರು ಇಂದೋರ್‌ನಿಂದ ಮಾತ್ರವಲ್ಲದೇ ದೂರದ ಸ್ಥಳಗಳಿಂದ ಇಲ್ಲಿಗೆ ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ. ಇಲ್ಲಿಗೆ ಬರುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಮತ್ತು ಶನಿ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. (ಸಾಂದರ್ಭಿಕ ಫೋಟೋ)

    MORE
    GALLERIES

  • 49

    Shani Temple: ಕಣ್ಣಿಲ್ಲದವನಿಗೆ ದೃಷ್ಟಿ ಕೊಟ್ಟ ಭಗವಂತ- ಈ ಶನಿ ದೇವಾಲಯದಲ್ಲಿ ನಡೆಯೋ ಪವಾಡ ಒಂದೆರಡಲ್ಲ

    ದೇವಾಲಯದ ಪ್ರಧಾನ ಅರ್ಚಕ ನೀಲೇಶ್ ತಿವಾರಿ ಈ ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದ್ದು, ಇದು ದೇಶದ ಅತ್ಯಂತ ಹಳೆಯ ಶನಿ ದೇವಾಲಯಗಳಲ್ಲಿ ಒಂದಾಗಿದೆ.ಶನಿಯನ್ನು ನ್ಯಾಯದ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ತಪ್ಪು ಮಾಡಿದರೆ ಶನಿ ಶಿಕ್ಷೆ ಕೊಡುತ್ತಾನೆ. ಆದ್ದರಿಂದಲೇ ಶನಿಯ ಕೋಪವನ್ನು ಶಮನಗೊಳಿಸಲು ಈ ದೇವಾಲಯದಲ್ಲಿ ಶನಿಗೆ ಹಾಲು ಮತ್ತು ನೀರಿನಿಂದ ಅಭಿಷೇಕ ಮಾಡುತ್ತಾರೆ ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಫೋಟೋ)

    MORE
    GALLERIES

  • 59

    Shani Temple: ಕಣ್ಣಿಲ್ಲದವನಿಗೆ ದೃಷ್ಟಿ ಕೊಟ್ಟ ಭಗವಂತ- ಈ ಶನಿ ದೇವಾಲಯದಲ್ಲಿ ನಡೆಯೋ ಪವಾಡ ಒಂದೆರಡಲ್ಲ

    ಈ ದೇವಾಲಯದಲ್ಲಿ ಶನಿಗೆ ವಿಶೇಷ ಅಭಿಷೇಕವನ್ನು ಬೆಳಗ್ಗೆ ಎಳ್ಳು ಎಣ್ಣೆಯ ಬದಲಿಗೆ ಹಾಲು ಮತ್ತು ನೀರಿನಿಂದ ಮಾಡುವುದು ಮಾತ್ರ ವಿಶೇಷವಲ್ಲ, ಈ ಶನಿ ವಿಗ್ರಹವನ್ನು ಸಿಂಧೂರದಿಂದ ಕೂಡ ಅಲಂಕಾರ ಮಾಡಲಾಗುತ್ತದೆ. (ಸಾಂದರ್ಭಿಕ ಫೋಟೋ)

    MORE
    GALLERIES

  • 69

    Shani Temple: ಕಣ್ಣಿಲ್ಲದವನಿಗೆ ದೃಷ್ಟಿ ಕೊಟ್ಟ ಭಗವಂತ- ಈ ಶನಿ ದೇವಾಲಯದಲ್ಲಿ ನಡೆಯೋ ಪವಾಡ ಒಂದೆರಡಲ್ಲ

    ದೇವಾಲಯದ ನಿರ್ಮಾಣದ ಬಗ್ಗೆ ಒಂದು ದಂತಕಥೆ ಕೂಡ ಇದೆ, ಅದರ ಪ್ರಕಾರ ಸುಮಾರು 500 ವರ್ಷಗಳ ಹಿಂದೆ ದೇವಾಲಯದ ಸ್ಥಳದಲ್ಲಿ 20 ಅಡಿ ಎತ್ತರದ ದಿಬ್ಬವಿತ್ತು. ಪ್ರಸ್ತುತ ಅರ್ಚಕರ ಪೂರ್ವಜರಾದ ಗೋಪಾಲದಾಸ್ ತಿವಾರಿ ಇಲ್ಲಿ ವಾಸಿಸುತ್ತಿದ್ದರು. (ಸಾಂದರ್ಭಿಕ ಫೋಟೋ)

    MORE
    GALLERIES

  • 79

    Shani Temple: ಕಣ್ಣಿಲ್ಲದವನಿಗೆ ದೃಷ್ಟಿ ಕೊಟ್ಟ ಭಗವಂತ- ಈ ಶನಿ ದೇವಾಲಯದಲ್ಲಿ ನಡೆಯೋ ಪವಾಡ ಒಂದೆರಡಲ್ಲ

    ಅವರು ಹುಟ್ಟಿನಿಂದಲೇ ಅಂಧರಾಗಿದ್ದರು. ಆದರೆ ಒಂದು ದಿನ ಶನಿ ಅವರ ಕನಸಿನಲ್ಲಿ ಕಾಣಿಸಿಕೊಂಡು ಆ ಬೆಟ್ಟದ ಕೆಳಗೆ ನನ್ನ ವಿಗ್ರಹವಿದೆ ಎಂದು ಹೇಳುತ್ತಾನೆ. ಆಗ ಕನಸಿನಲ್ಲಿಯೇ ಗೋಪಾಲದಾಸ್ ಶನಿಗ 'ಓ ದೇವರೇ, ನನಗೆ ಕಣ್ಣು ಕಾಣುತ್ತಿಲ್ಲ. ನಿನ್ನ ಮೂರ್ತಿಯನ್ನು ನಾನು ಹೇಗೆ ನೋಡಲಿ ಎಂದು ಹೇಳುತ್ತಾರಂತೆ. ಆ ಮಾತನ್ನು ಮುಗಿಸುವ ಕ್ಷಣ ಮಾತ್ರದಲ್ಲಿ ಅವರಿಗೆ ದೃಷ್ಟಿ ಬರುತ್ತದೆ. (ಸಾಂದರ್ಭಿಕ ಫೋಟೋ)

    MORE
    GALLERIES

  • 89

    Shani Temple: ಕಣ್ಣಿಲ್ಲದವನಿಗೆ ದೃಷ್ಟಿ ಕೊಟ್ಟ ಭಗವಂತ- ಈ ಶನಿ ದೇವಾಲಯದಲ್ಲಿ ನಡೆಯೋ ಪವಾಡ ಒಂದೆರಡಲ್ಲ

    ತಕ್ಷಣ ಗೋಪಾಲ್ ದಾಸ್ ಕನಸಿನಿಂದ ಎದ್ದು ಕಣ್ಣು ತೆರೆದರೆ ನಿಜಕ್ಕೂ ದೃಷ್ಟಿ ಬಂದಿತ್ತು.ಈ ಪವಾಡವನ್ನು ನೋಡಿದ ಸುತ್ತಮುತ್ತಲಿನವರೂ ಗೋಪಾಲ್ ದಾಸರ ಮಾತನ್ನು ನಂಬಿದ್ದರು. ಆ ನಂತರ ಎಲ್ಲರೂ ಆ ಗುಂಡಿಯನ್ನು ಅಗೆಯಲು ನಿರ್ಧರಿಸಿದರು. (ಸಾಂದರ್ಭಿಕ ಫೋಟೋ)

    MORE
    GALLERIES

  • 99

    Shani Temple: ಕಣ್ಣಿಲ್ಲದವನಿಗೆ ದೃಷ್ಟಿ ಕೊಟ್ಟ ಭಗವಂತ- ಈ ಶನಿ ದೇವಾಲಯದಲ್ಲಿ ನಡೆಯೋ ಪವಾಡ ಒಂದೆರಡಲ್ಲ

    ಆ ಸ್ಥಳದಲ್ಲಿ ಗುಂಡಿ ಅಗೆದರೆ ಕನಸಿನಲ್ಲಿ ಬಂದಂತೆ ಶನಿ ವಿಗ್ರಹ ಪತ್ತೆಯಾಗಿತ್ತು, ಊರಿನ ಜನರೆಲ್ಲಾ ಸೇರಿ ಶನಿ ವಿಗ್ರಹವನ್ನು ಹೊರತೆಗೆಯುತ್ತಾರೆ. ಇಂದಿಗೂ ಅದೇ ವಿಗ್ರಹವನ್ನು ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. (ಸಾಂದರ್ಭಿಕ ಫೋಟೋ)

    MORE
    GALLERIES