Hanuman Jayanti: ನಿಮ್ಮ ಕಷ್ಟಗಳೆಲ್ಲಾ ನಿವಾರಣೆ ಆಗ್ಬೇಕು ಅಂದ್ರೆ ಹನುಮ ಜಯಂತಿ ದಿನ ಈ ಕೆಲಸ ಮಾಡಿ

Hanuman Jayanti: ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಂದು ಭಗವಾನ್ ಹನುಮಂತನ ಜನ್ಮದಿನವನ್ನು ಆಚರಿಸಲಾಗುತ್ತದೆ. ಈ ದಿನ ನಾವು ವಿಶೇಷ ಪೂಜೆ ಹಾಗೂ ಕೆಲಸಗಳನ್ನು ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಹಾಗಾದ್ರೆ ಈ ದಿನ ರೀತಿ ಕೆಲಸ ಮಾಡಬೇಕು ಎಂಬುದು ಇಲ್ಲಿದೆ.

First published:

  • 18

    Hanuman Jayanti: ನಿಮ್ಮ ಕಷ್ಟಗಳೆಲ್ಲಾ ನಿವಾರಣೆ ಆಗ್ಬೇಕು ಅಂದ್ರೆ ಹನುಮ ಜಯಂತಿ ದಿನ ಈ ಕೆಲಸ ಮಾಡಿ

    ದೇಶದ ಕೆಲವು ಭಾಗಗಳಲ್ಲಿ ಹನುಮ ಜಯಂತಿಯನ್ನು ವಿವಿಧ ದಿನಾಂಕದಂದು ಆಚರಿಸಲಾಗುತ್ತದೆ. ಆದರೆ ಹಿಂದೂ ಪಂಚಾಂಗದ ಪ್ರಕಾರ ಹನುಮ ಜನ್ಮದಿನವನ್ನು ಚೈತ್ರ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ.

    MORE
    GALLERIES

  • 28

    Hanuman Jayanti: ನಿಮ್ಮ ಕಷ್ಟಗಳೆಲ್ಲಾ ನಿವಾರಣೆ ಆಗ್ಬೇಕು ಅಂದ್ರೆ ಹನುಮ ಜಯಂತಿ ದಿನ ಈ ಕೆಲಸ ಮಾಡಿ

    ಈ ಬಾರಿ ಏಪ್ರಿಲ್ 6 ರಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನುಮಂತನನ್ನು ಈ ರೀತಿ ಪೂಜಿಸಿದರೆ ಸುಖ, ಸಂಪತ್ತು ಮತ್ತು ಸಮೃದ್ಧಿ ಸಿಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 38

    Hanuman Jayanti: ನಿಮ್ಮ ಕಷ್ಟಗಳೆಲ್ಲಾ ನಿವಾರಣೆ ಆಗ್ಬೇಕು ಅಂದ್ರೆ ಹನುಮ ಜಯಂತಿ ದಿನ ಈ ಕೆಲಸ ಮಾಡಿ

    ಜ್ಯೋತಿಶಾಚಾರ್ಯ ಪಂಡಿತ್ ಕಲ್ಕಿ ರಾಮ್ ಅವರ ಪ್ರಕಾರ ಹನುಮಂತನನ್ನು ಮೆಚ್ಚಿಸಲು ಪ್ರತಿ ಮಂಗಳವಾರ ಸುಂದರಕಾಂಡವನ್ನು ಪಠಿಸಬೇಕು. ಅದರ ಜೊತೆಗೆ ಹನುಮಾನ್ ಚಾಲೀಸವನ್ನು ಸಹ ಪಠಣೆ ಮಾಡಬೇಕು.

    MORE
    GALLERIES

  • 48

    Hanuman Jayanti: ನಿಮ್ಮ ಕಷ್ಟಗಳೆಲ್ಲಾ ನಿವಾರಣೆ ಆಗ್ಬೇಕು ಅಂದ್ರೆ ಹನುಮ ಜಯಂತಿ ದಿನ ಈ ಕೆಲಸ ಮಾಡಿ

    ಹನುಮ ಜಯಂತಿಯ ದಿನ ರೋಗಿಗಳ ಸೇವೆ ಮಾಡಬೇಕು ಎನ್ನಲಾಗುತ್ತದೆ. ಅಷ್ಟೇ ಅಲ್ಲ ಪ್ರತಿ ಮಂಗಳವಾರ ಕಷ್ಟದಲ್ಲಿ ಇರುವವರಿಗೆ ಸೇವೆ ಮಾಡುವುದರಿಂದ ಹನುಮಂತನ ಕೃಪೆಗೆ ಪಾತ್ರರಾಗಬಹುದು.

    MORE
    GALLERIES

  • 58

    Hanuman Jayanti: ನಿಮ್ಮ ಕಷ್ಟಗಳೆಲ್ಲಾ ನಿವಾರಣೆ ಆಗ್ಬೇಕು ಅಂದ್ರೆ ಹನುಮ ಜಯಂತಿ ದಿನ ಈ ಕೆಲಸ ಮಾಡಿ

    ಅಷ್ಟೇ ಅಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನುಮ ಜಯಂತಿಯ ದಿನ ತುಪ್ಪದ ದೀಪವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಹನುಮಂತನ ವಿಶೇಷ ಕೃಪೆ ನಿಮ್ಮದಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಹನುಮ ಜಯಂತಿಯ ದಿನದಂದು ಹನುಮಂತನ ವಿಗ್ರಹಕ್ಕೆ ಹಚ್ಚುವ ಬಣ್ಣದ ತಿಲಕ ಧರಿಸಬೇಕು. ಇದರಿಂದ ನಿಮ್ಮ ವ್ಯಾಪಾರ ಹೆಚ್ಚಾಗುತ್ತದೆ.

    MORE
    GALLERIES

  • 68

    Hanuman Jayanti: ನಿಮ್ಮ ಕಷ್ಟಗಳೆಲ್ಲಾ ನಿವಾರಣೆ ಆಗ್ಬೇಕು ಅಂದ್ರೆ ಹನುಮ ಜಯಂತಿ ದಿನ ಈ ಕೆಲಸ ಮಾಡಿ

    ಅಷ್ಟೇ ಅಲ್ಲದೇ, ಹನುಮ ಜಯಂತಿಯ ದಿನದಂದು ಮನೆಯ ಮಾಳಿಗೆಯ ಮೇಲೆ ಕೆಂಪು ಬಾವುಟವನ್ನು ಹಾರಿಸಿದರೆ ಅನೇಕ ಸಮಸ್ಯೆಗಳಿಂದ ನಿಮಗೆ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಹೀಗೆ ಮಾಡುವುದರಿಂದ ದೊಡ್ಡ ಅನಾಹುತಗಳು ತಪ್ಪುತ್ತವೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 78

    Hanuman Jayanti: ನಿಮ್ಮ ಕಷ್ಟಗಳೆಲ್ಲಾ ನಿವಾರಣೆ ಆಗ್ಬೇಕು ಅಂದ್ರೆ ಹನುಮ ಜಯಂತಿ ದಿನ ಈ ಕೆಲಸ ಮಾಡಿ

    ಹಾಗೆಯೇ ಈ ದಿನ ಹನುಮಾನ್ ಚಾಲೀಸಾ, ಸುಂದರಕಾಂಡ, ರಾಮಾಯಣ ರಾಮ ರಕ್ಷಾ ಸ್ತೋತ್ರ ಇತ್ಯಾದಿಗಳ ಪಠಣ ಮಾಡಬೇಕು. ಇವುಗಳನ್ನು ಹನುಮಾನ್ ಜಯಂತಿಯಂದು ಓದುವುದರಿಂದ ನಿಮ್ಮ ಧೈರ್ಯ ಹೆಚ್ಚಾಗುತ್ತದೆ.

    MORE
    GALLERIES

  • 88

    Hanuman Jayanti: ನಿಮ್ಮ ಕಷ್ಟಗಳೆಲ್ಲಾ ನಿವಾರಣೆ ಆಗ್ಬೇಕು ಅಂದ್ರೆ ಹನುಮ ಜಯಂತಿ ದಿನ ಈ ಕೆಲಸ ಮಾಡಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES