Mahashivaratri 2023: ಶಿವರಾತ್ರಿ ದಿನ ಈ ತಪ್ಪು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟಬುತ್ತಿ

Vastu Shastra: ಜ್ಯೋತಿಷ್ಯ ಶಾಸ್ತ್ರದಲ್ಲಿ ಫಾಲ್ಗುಣ ಮಾಸದಲ್ಲಿ ಬರುವ ಶಿವರಾತ್ರಿಯನ್ನು ಮಹಾಶಿವರಾತ್ರಿ ಎಂದು ಕರೆಯಲಾಗುತ್ತದೆ. ಈ ದಿನದಂದು ಮಹಾದೇವ ಮತ್ತು ಪಾರ್ವತಿ ದೇವಿಯ ಆರಾಧನೆಯಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ನಂಬಿಕೆ ಇದೆ. ಆದರೆ ಈ ದಿನ ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಕೆಲ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆ ವಿಚಾರಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Mahashivaratri 2023: ಶಿವರಾತ್ರಿ ದಿನ ಈ ತಪ್ಪು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟಬುತ್ತಿ

    ಹಿಂದೂ ಧರ್ಮದ ಪ್ರಕಾರ, ಫಾಲ್ಗುಣ ಮಾಸದ ಕೃಷ್ಣ ಪಕ್ಷ ಚತುರ್ದಶಿಯಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಮಹಾಶಿವರಾತ್ರಿಯನ್ನು ಫೆಬ್ರವರಿ 18 ರಂದು ಆಚರಿಸಲಾಗುತ್ತಿದೆ ಈ ದಿನ ಬಿಲ್ವಪತ್ರೆಯೊಂದಿಗೆ ಪೂಜೆ ಮಾಡುವುದು ವಿಶೇಷ ಎಂದು ಹೇಳಲಾಗುತ್ತದೆ. ಶಿವನ ಆರಾಧನೆಯು ಬಿಲ್ವಪತ್ರೆ ಇಲ್ಲದೆ ಅಪೂರ್ಣವೆಂದು ಪರಿಗಣಿಸಲಾಗಿದೆ.

    MORE
    GALLERIES

  • 28

    Mahashivaratri 2023: ಶಿವರಾತ್ರಿ ದಿನ ಈ ತಪ್ಪು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟಬುತ್ತಿ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಿಲ್ವಪತ್ರೆಯು ಶಿವನ ನೆಚ್ಚಿನ ವಸ್ತು, ಇದನ್ನು ಅರ್ಪಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಇದು ಶಿವನ ತಲೆಯನ್ನು ತಂಪಾಗಿರಿಸುತ್ತದೆ ಎಂದು ಹೇಳಲಾಗುತ್ತದೆ. ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಕೋಟಿ ದಾನಕ್ಕೆದ ಪುಣ್ಯಕ್ಕೆ ಸಮ ಎಂದು ಹೇಳಲಾಗುತ್ತದೆ.

    MORE
    GALLERIES

  • 38

    Mahashivaratri 2023: ಶಿವರಾತ್ರಿ ದಿನ ಈ ತಪ್ಪು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟಬುತ್ತಿ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ದಾರಿದ್ರ್ಯ ನಿವಾರಣೆಯಾಗುತ್ತದೆ. ಹಣಕಾಸಿನ ತೊಂದರೆಗಳು ದೂರವಾಗುತ್ತವೆ ಮತ್ತು ಸಂಪತ್ತು ಹೆಚ್ಚಾಗುತ್ತದೆ.ಶಿವನನ್ನು ಪೂಜಿಸುವಾಗ ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಅರ್ಪಿಸುವ ಮಹಿಳೆಯರಿಗೆ ಶಾಶ್ವತ ಸಂಪತ್ತು ಸಿಗುತ್ತದೆ ಎಂದು ಹೇಳಲಾಗುತ್ತದೆ.

    MORE
    GALLERIES

  • 48

    Mahashivaratri 2023: ಶಿವರಾತ್ರಿ ದಿನ ಈ ತಪ್ಪು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟಬುತ್ತಿ

    ಶಿವಲಿಂಗಕ್ಕೆ ಶ್ರೀಗಂಧದೊಂದಿಗೆ ರಾಮ ಅಥವಾ ಓಂ ನಮಃ ಶಿವಾಯ ಎಂದು ಬರೆದಿರುವ ಬಿಲ್ವ ಅರ್ಪಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ.ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಎಲ್ಲಾ ನೋವುಗಳು ಮಾಯವಾಗುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 58

    Mahashivaratri 2023: ಶಿವರಾತ್ರಿ ದಿನ ಈ ತಪ್ಪು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟಬುತ್ತಿ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶಿವನಿಗೆ 3 ಎಲೆಯ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಯಾವುದೇ ದೋಷದಿಂದ ಪರಿಹಾರ ಪಡೆಯಬಹುದು. ಹಾಗೆಯೇ, ಅಪ್ಪಿತಪ್ಪಿಯೂ ಕೊಳೆತ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸಬಾರದು. ಜೊತೆಗೆ ಒಂದು ಸಣ್ಣ ಕಪ್ಪು ಚುಕ್ಕೆ ಸರ ಇರಬಾರದಂತೆ.

    MORE
    GALLERIES

  • 68

    Mahashivaratri 2023: ಶಿವರಾತ್ರಿ ದಿನ ಈ ತಪ್ಪು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟಬುತ್ತಿ

    ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಅರ್ಪಿಸುವ ಮೊದಲು, ಅದನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಇದಾದ ನಂತರ ಇದರ ಮೃದುವಾದ ಭಾಗವನ್ನು ಶಿವಲಿಂಗದ ಮೇಲೆ ಅರ್ಪಿಸಬೇಕು.

    MORE
    GALLERIES

  • 78

    Mahashivaratri 2023: ಶಿವರಾತ್ರಿ ದಿನ ಈ ತಪ್ಪು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟಬುತ್ತಿ

    ಹಾಗೆಯೇ, ಬಿಲ್ವ ಹಳೆಯದಾಗಿರಬಾರದು ಮತ್ತು ಹರಿದಿರಬಾರದು. ಜ್ಯೋತಿಷ್ಯದ ಪ್ರಕಾರ ಕನಿಷ್ಠ 1 ಬಿಲ್ವಪತ್ರೆಯನ್ನು ನಿಯಮಿತವಾಗಿ ಸಲ್ಲಿಸಬೇಕು. ಇನ್ನು ಶಿವರಾತ್ರಿಯ ದಿನ 11 ಅಥವಾ 21 ಬಿಲ್ವಪತ್ರೆಯನ್ನು ಸಲ್ಲಿಸಬೇಕು.

    MORE
    GALLERIES

  • 88

    Mahashivaratri 2023: ಶಿವರಾತ್ರಿ ದಿನ ಈ ತಪ್ಪು ಮಾಡಿದ್ರೆ ಸಮಸ್ಯೆ ಕಟ್ಟಿಟ್ಟಬುತ್ತಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES