Maha Shivaratri 2023: ಶಿವರಾತ್ರಿಯ ದಿನ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ತುಂಬಿ ತುಳುಕುತ್ತೆ

Maha shivaratri 2023: ಮಹಾ ಶಿವರಾತ್ರಿ ಆಚರಣೆಗೆ ದಿನಗಣನೆ ಆರಂಭವಾಗಿದೆ. ಶಿವನ ಆರಾಧನೆ ಮಾಡಲು ಭಕ್ತರು ಉತ್ಸಾಹದಿಂದ ಕಾಯುತ್ತಿದ್ದಾರೆ. ಹಾಗೆಯೇ, ಶಿವರಾತ್ರಿಯ ದಿನ ನೀವು ಮನೆಗೆ ಕೆಲವೊಂದು ವಸ್ತುಗಳನ್ನು ಮನೆಗೆ ತಂದರೆ ಬಹಳ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Maha Shivaratri 2023: ಶಿವರಾತ್ರಿಯ ದಿನ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ತುಂಬಿ ತುಳುಕುತ್ತೆ

    ಶಿವ ಆರಾಧನೆ ಮಾಡುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಜೀವನದಲ್ಲಿ ಸಂತೋಷದ ಜೊತೆಗೆ ಆರ್ಥಿಕ ಸಮೃದ್ಧಿ ಬರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಶಿವರಾತ್ರಿ ಹಬ್ಬವು ಶಿವನ ಆರಾಧನೆಗೆ ಮೀಸಲಾಗಿದೆ. ಈ ದಿನ ವಿಶೇಷ ಕೆಲಸಗಳನ್ನು ಮಾಡಿದ್ರೆ ಬಹಳ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 28

    Maha Shivaratri 2023: ಶಿವರಾತ್ರಿಯ ದಿನ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ತುಂಬಿ ತುಳುಕುತ್ತೆ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಭಗವಾನ್ ಶಿವನಿಗೆ ಕೆಲವು ವಸ್ತುಗಳೆಂದರೆ ತುಂಬಾ ಇಷ್ಟ. ಶಿವರಾತ್ರಿಯ ದಿನ ಆ ವಸ್ತುಗಳನ್ನು ಮನೆಗೆ ತಂದರೆ ಶಿವನ ಕೃಪೆ ಖಂಡಿತ ನಿಮ್ಮ ಮೇಲಿರುತ್ತದೆ. ಶಿವನ ಆಶೀರ್ವಾದದಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ.

    MORE
    GALLERIES

  • 38

    Maha Shivaratri 2023: ಶಿವರಾತ್ರಿಯ ದಿನ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ತುಂಬಿ ತುಳುಕುತ್ತೆ

    ಬೆಳ್ಳಿ ನಂದಿ: ನಂದಿಯು ಶಿವನ ವಾಹನ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗೆಯೇ, ಪ್ರತಿಯೊಂದು ಶಿವ ದೇವಾಲಯದಲ್ಲಿ, ದೇವರ ಮುಂದೆ ಒಂದು ನಂದಿ ವಿಗ್ರಹ ಇದ್ದೇ ಇರುತ್ತದೆ. ನಂದಿ ಇಲ್ಲದೇ, ಎಲ್ಲಿಯೂ ಶಿವ ಇರುವುದಿಲ್ಲ. ಹಾಗಾಗಿ ಶಿವರಾತ್ರಿಯ ದಿನ ಮನೆಗೆ ಬೆಳ್ಳಿಯ ನಂದಿ ವಿಗ್ರಹ ತಂದರೆ ಮನೆಯಲ್ಲಿ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಗೆಯೇ, ಪೂಜೆಯ ನಂತರ ಹಣ ಇಟ್ಟ ಜಾಗದಲ್ಲಿ ಈ ನಂದಿಯನ್ನು ಇಡಬೇಕು.

    MORE
    GALLERIES

  • 48

    Maha Shivaratri 2023: ಶಿವರಾತ್ರಿಯ ದಿನ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ತುಂಬಿ ತುಳುಕುತ್ತೆ

    ಏಕಮುಖ ರುದ್ರಾಕ್ಷಿ: ರುದ್ರಾಕ್ಷಿ ಎಂದರೆ ಶಿವನಿಗೆ ಬಹಳ ಇಷ್ಟ. ಇದನ್ನು ಶಿವನ ಮತ್ತೊಂದು ರೂಪ ಎನ್ನಲಾಗುತ್ತದೆ. ಹಾಗೆಯೇ ಇದನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಶಿವರಾತ್ರಿಯ ದಿನ ಒಂದು ಮುಖದ ರುದ್ರಾಕ್ಷಿಯನ್ನು ತಂದು, ಪೂಜೆ ಮಾಡಿ ಧರಿಸಬೇಕು.

    MORE
    GALLERIES

  • 58

    Maha Shivaratri 2023: ಶಿವರಾತ್ರಿಯ ದಿನ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ತುಂಬಿ ತುಳುಕುತ್ತೆ

    ರತ್ನಗಳಿಂದ ಮಾಡಿದ ಶಿವಲಿಂಗ: ಶಿವಲಿಂಗಕ್ಕೆ ಜಲಾಭಿಷೇಕ ಮಾಡದಿದ್ದರೆ ಫಲಗಳು ಸಿಗುವುದಿಲ್ಲ ಎನ್ನಲಾಗುತ್ತದೆ. ಅದರಲ್ಲೂ ಗ್ರಹದೋಷ ಇದ್ದರೆ ತಪ್ಪದೇ ಶಿವಲಿಂಗಕ್ಕೆ ಅಭಿಷೇಕ ಮಾಡಲೇಬೇಕು. ಹಾಗಾಗಿ ನಿವು ಮನೆಗೆ ರತ್ನಗಳಿಂದ ಮಾಡಿದ ಶಿವಲಿಂಗವನ್ನು ಮನೆಗೆ ತಂದು ಅಭಿಷೇಕ ಮಾಡಿದರೆ ಉತ್ತಮ.

    MORE
    GALLERIES

  • 68

    Maha Shivaratri 2023: ಶಿವರಾತ್ರಿಯ ದಿನ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ತುಂಬಿ ತುಳುಕುತ್ತೆ

    ತಾಮ್ರದ ಕಲಶ: ಮಹಾಶಿವರಾತ್ರಿಯ ದಿನ ತಾಮ್ರದ ಕಲಶದಿಂದ ಶಿವನಿಗೆ ಅಭಿಷೇಕ ಮಾಡಬೇಕು. ಅಲ್ಲದೇ, ಶಿವರಾತ್ರಿಯ ದಿನ ತಾಮ್ರದ ಕಲಶ ತಂದರೆ ಮನೆಯಲ್ಲಿ ನಡೆಯುವ ಜಗಳ ಹಾಗೂ ಕಿರಿಕಿರಿಗೆ ಪರಿಹಾರ ಸಿಗುತ್ತದೆ. ಜೊತೆಗೆ ಆರ್ಥಿಕ ಸಮಸ್ಯೆಗೆ ಸಹ ಪರಿಹಾರ ಸಿಗುತ್ತದೆ.

    MORE
    GALLERIES

  • 78

    Maha Shivaratri 2023: ಶಿವರಾತ್ರಿಯ ದಿನ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ತುಂಬಿ ತುಳುಕುತ್ತೆ

    ಮೃತ್ಯುಂಜಯ ಯಂತ್ರ : ಮೃತ್ಯುಂಜಯ ಯಂತ್ರದ ಮಹಿಮೆಯ ಬಗ್ಗೆ ನಾವು ಹೆಚ್ಚಾಗಿ ಹೇಳಬೇಕಿಲ್ಲ. ಈ ಯಂತ್ರ ಮನೆಯಲ್ಲಿ ಇದ್ದರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಡುವುದಿಲ್ಲ ಎನ್ನುವ ನಂಬಿಕೆ ಇದೆ. ಹಾಗಾಗಿ ಶಿವರಾತ್ರಿಯ ದಿನ ಈ ಯಂತ್ರವನ್ನು ಮನೆಗೆ ತನ್ನಿ.

    MORE
    GALLERIES

  • 88

    Maha Shivaratri 2023: ಶಿವರಾತ್ರಿಯ ದಿನ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ತುಂಬಿ ತುಳುಕುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES