Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ
Akshaya Tritiya: ನಮ್ಮ ದೇಶದಲ್ಲಿ ಪ್ರತಿಯೊಂದು ಹಬ್ಬಕ್ಕೂ ವಿವಿಧ ರೀತಿಯ ಮಹತ್ವವಿದೆ. ಹಾಗೆಯೇ ಹಬ್ಬಗಳ ಹಿಂದಿನ ಆಚರಣೆಗೆ ಸಹ ಒಂದು ಇತಿಹಾಸ ಹಾಗೂ ಕಥೆ ಇದೆ. ಅದರಂತೆ ಈ ಅಕ್ಷಯ ತೃತೀಯವನ್ನು ಏಕೆ ಆಚರಿಸಲಾಗುತ್ತದೆ ಹಾಗೂ ಅದರ ಮಹತ್ವವೇನು ಎಂಬುದು ಎಲ್ಲಿದೆ.
ಅಕ್ಷಯ ತೃತೀಯ ಹಬ್ಬವು ಮುಖ್ಯವಾಗಿ ಅದೃಷ್ಟದ ಹಬ್ಬ ಎನ್ನಲಾಗುತ್ತದೆ. ಈ ದಿನ ಗಳಿಸಿದ ಪುಣ್ಯ ಎಂದಿಗೂ ಮುಗಿಯುವುದಿಲ್ಲ ಎನ್ನುವ ನಂಬಿಕೆ ಇದೆ. ಹಾಗೆಯೇ, ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಮಾಡಬಹುದು.
2/ 7
ಪ್ರತಿ ತಿಂಗಳ ಶುಕ್ಲ ಪಕ್ಷದ ತೃತೀಯಾ ದಿನ ಮಂಗಳಕರವಾಗಿದ್ದರೂ, ವೈಶಾಖ ಮಾಸದ ತೃತೀಯಾವನ್ನು ಹೆಚ್ಚು ಶ್ರೇಷ್ಠ ಎನ್ನಲಾಗುತ್ತದೆ. ಈ ದಿನ ಪಂಚಾಂಗವನ್ನು ನೋಡದೆ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಈ ದಿನ ಪ್ರಾರಂಭಿಸಿದ ಕೆಲಸಗಳು ಸಹ ಉತ್ತಮ ಫಲಿತಾಂಶವನ್ನು ನೀಡುತ್ತವೆ. ಹಾಗೆಯೇ ಈ ದಿನದ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.
3/ 7
ನಂಬಿಕೆಗಳ ಪ್ರಕಾರ ಅಕ್ಷಯ ತೃತೀಯವನ್ನು ತ್ರೇತಾಯುಗದಲ್ಲಿ ಆರಂಭಿಸಲಾಯಿತು. ಗಂಗಾ ದೇವಿ ಸ್ವರ್ಗದಿಂದ ಭೂ ಲೋಕಕ್ಕೆ ಇಳಿದು ಬಂದ ದಿನವೇ ಅಕ್ಷಯ ತೃತೀಯ ಎಂದೂ ಸಹ ಹೇಳಲಾಗುತ್ತದೆ.
4/ 7
ಇನ್ನು ಎಲ್ಲರಿಗೂ ಗೊತ್ತಿರುವಂತೆ ಸಂಪತ್ತಿನ ಒಡೆಯ ಕುಬೇರ. ಈ ಕುಬೇರನಿಗೆ ಅಷ್ಟೈಶ್ವರ್ಯಗಳು ಸಿಕ್ಕ ದಿನ ಈ ಅಕ್ಷಯ ತೃತೀಯವಂತೆ. ಲಕ್ಷ್ಮಿಯಿಂದ ಸಂಪತ್ತು ಪಡೆದು ಕುಬೇರ ಶ್ರೀಮಂತನಾದ ಎನ್ನಲಾಗುತ್ತದೆ.
5/ 7
ಈ ಎಲ್ಲಕ್ಕಿಂತ ಮುಖ್ಯವಾಗಿ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತವನ್ನು ಈ ದಿನವೇ ಗಣೇಶ ಬರೆಯಲು ಆರಂಭಿಸಿದ್ದು ಎನ್ನಲಾಗುತ್ತದೆ. ಪುರಾಣಗಳ ಪ್ರಕಾರ ಅಕ್ಷಯ ತೃತೀಯದಂದು ವೇದ ವ್ಯಾಸರು ಈ ಮಹಾಭಾರತವನ್ನು ಬರೆಯಲು ಗಣೇಶನಿಗೆ ಆದೇಶಿಸಿದ್ದಂತೆ.
6/ 7
ಈ ಅಕ್ಷಯ ತೃತೀಯ ಹಿಂದಿನ ಮತ್ತೊಂದು ಬಹು ಮುಖ್ಯ ಕಥೆ ಎಂದರೆ ಪಾಂಡವರಿಗೆ ಸಿಕ್ಕ ಅಕ್ಷಯ ಪಾತ್ರೆ. ವನವಾಸದಲ್ಲಿದ್ದ ಪಾಂಡವರು ಅತಿಥಿ ಸತ್ಕಾರ ಮಾಡಲು ಪರದಾಡುತ್ತಿದ್ದಾಗ ವರದಾನವಾಗಿ ಸಿಕ್ಕ ಪಾತ್ರೆ ಇದು. ಹಾಗಾಗಿಯೇ ಈ ದಿನ ಏನೇ ವಸ್ತುವನ್ನು ಖರೀದಿ ಮಾಡಿದರೂ ಅಕ್ಷಯವಾಗುತ್ತೆ ಎನ್ನಲಾಗುತ್ತದೆ.
7/ 7
ಈ ಎಲ್ಲಾ ಆಚರಣೆಗಳ ಜೊತೆ ಅಕ್ಷಯ ತೃತೀಯವನ್ನು ವಿಷ್ಣುವಿನ ಆರನೇ ಅವತಾರ ಪರಶುರಾಮನ ಜನ್ಮದಿನ ಎಂದು ಸಹ ಹೇಳಲಾಗುತ್ತದೆ.
First published:
17
Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ
ಅಕ್ಷಯ ತೃತೀಯ ಹಬ್ಬವು ಮುಖ್ಯವಾಗಿ ಅದೃಷ್ಟದ ಹಬ್ಬ ಎನ್ನಲಾಗುತ್ತದೆ. ಈ ದಿನ ಗಳಿಸಿದ ಪುಣ್ಯ ಎಂದಿಗೂ ಮುಗಿಯುವುದಿಲ್ಲ ಎನ್ನುವ ನಂಬಿಕೆ ಇದೆ. ಹಾಗೆಯೇ, ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಮಾಡಬಹುದು.
Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ
ಪ್ರತಿ ತಿಂಗಳ ಶುಕ್ಲ ಪಕ್ಷದ ತೃತೀಯಾ ದಿನ ಮಂಗಳಕರವಾಗಿದ್ದರೂ, ವೈಶಾಖ ಮಾಸದ ತೃತೀಯಾವನ್ನು ಹೆಚ್ಚು ಶ್ರೇಷ್ಠ ಎನ್ನಲಾಗುತ್ತದೆ. ಈ ದಿನ ಪಂಚಾಂಗವನ್ನು ನೋಡದೆ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಈ ದಿನ ಪ್ರಾರಂಭಿಸಿದ ಕೆಲಸಗಳು ಸಹ ಉತ್ತಮ ಫಲಿತಾಂಶವನ್ನು ನೀಡುತ್ತವೆ. ಹಾಗೆಯೇ ಈ ದಿನದ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.
Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ
ಇನ್ನು ಎಲ್ಲರಿಗೂ ಗೊತ್ತಿರುವಂತೆ ಸಂಪತ್ತಿನ ಒಡೆಯ ಕುಬೇರ. ಈ ಕುಬೇರನಿಗೆ ಅಷ್ಟೈಶ್ವರ್ಯಗಳು ಸಿಕ್ಕ ದಿನ ಈ ಅಕ್ಷಯ ತೃತೀಯವಂತೆ. ಲಕ್ಷ್ಮಿಯಿಂದ ಸಂಪತ್ತು ಪಡೆದು ಕುಬೇರ ಶ್ರೀಮಂತನಾದ ಎನ್ನಲಾಗುತ್ತದೆ.
Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ
ಈ ಎಲ್ಲಕ್ಕಿಂತ ಮುಖ್ಯವಾಗಿ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತವನ್ನು ಈ ದಿನವೇ ಗಣೇಶ ಬರೆಯಲು ಆರಂಭಿಸಿದ್ದು ಎನ್ನಲಾಗುತ್ತದೆ. ಪುರಾಣಗಳ ಪ್ರಕಾರ ಅಕ್ಷಯ ತೃತೀಯದಂದು ವೇದ ವ್ಯಾಸರು ಈ ಮಹಾಭಾರತವನ್ನು ಬರೆಯಲು ಗಣೇಶನಿಗೆ ಆದೇಶಿಸಿದ್ದಂತೆ.
Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ
ಈ ಅಕ್ಷಯ ತೃತೀಯ ಹಿಂದಿನ ಮತ್ತೊಂದು ಬಹು ಮುಖ್ಯ ಕಥೆ ಎಂದರೆ ಪಾಂಡವರಿಗೆ ಸಿಕ್ಕ ಅಕ್ಷಯ ಪಾತ್ರೆ. ವನವಾಸದಲ್ಲಿದ್ದ ಪಾಂಡವರು ಅತಿಥಿ ಸತ್ಕಾರ ಮಾಡಲು ಪರದಾಡುತ್ತಿದ್ದಾಗ ವರದಾನವಾಗಿ ಸಿಕ್ಕ ಪಾತ್ರೆ ಇದು. ಹಾಗಾಗಿಯೇ ಈ ದಿನ ಏನೇ ವಸ್ತುವನ್ನು ಖರೀದಿ ಮಾಡಿದರೂ ಅಕ್ಷಯವಾಗುತ್ತೆ ಎನ್ನಲಾಗುತ್ತದೆ.