• ಹೋಂ
  • »
  • ನ್ಯೂಸ್
  • »
  • ಯಾದಗಿರಿ
  • »
  • Kalyana Karnataka: ಆರ್ಡಿನರಿ ಬಸ್​ಗೆ ಎಕ್ಸ್​ಪ್ರೆಸ್ ಟಿಕೆಟ್! ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣಿಕರು ಹೀಗಂತಾರೆ

Kalyana Karnataka: ಆರ್ಡಿನರಿ ಬಸ್​ಗೆ ಎಕ್ಸ್​ಪ್ರೆಸ್ ಟಿಕೆಟ್! ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣಿಕರು ಹೀಗಂತಾರೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ರಾಜಹಂಸ ಡಿಲೆಕ್ಸ್ ಬಸ್ ದರ 101 ರೂಪಾಯಿ ನಿಗದಿ ಮಾಡಲಾಗಿದೆ. ಆರ್ಡಿನರಿ ಬಸ್​ಗಳಿಗೆ ಸಾರಿಗೆ ಸಂಸ್ಥೆಯು ನಿಯಮದ ಪ್ರಕಾರ 80 ರೂಪಾಯಿ ಟಿಕೆಟ್ ನಿಗದಿ ಮಾಡಿ ಬಸ್ ಓಡಿಸಬೇಕು. ಆದರೆ ಆಗ್ತಿರೋದೇ ಬೇರೆ!

  • News18 Kannada
  • 2-MIN READ
  • Last Updated :
  • Yadgir, India
  • Share this:

    ಯಾದಗಿರಿ: ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಸಾರಿಗೆ ಸಂಸ್ಥೆಗಳಿಗೆ ಬೇಡಿಕೆ ತಕ್ಕಂತೆ ಹೆಚ್ಚಿನ ನೂತನ ಬಸ್​ಗಳನ್ನ ಪೂರೈಕೆ ಮಾಡಬೇಕು. ಆದರೆ, ಸರ್ಕಾರ ಹೆಚ್ಚಿನ ಬಸ್​ಗಳನ್ನ ನೀಡಿಲ್ಲ. ಬಸ್​ಗಳ ಕೊರತೆ ನೆಪವೊಡ್ಡಿ ಸಾರಿಗೆ ಸಂಸ್ಥೆ ಆರ್ಡಿನರ್ ಬಸ್​ಗಳನ್ನು ಓಡಿಸುವ ಕೆಲಸ ಮಾಡುತ್ತಿದೆ. ಕಲ್ಯಾಣ ಕರ್ನಾಟಕ (Kalyana Karnataka) ಸಾರಿಗೆ ನಿಗಮವು ಪ್ರಯಾಣಿಕರನ್ನ ಏಮಾರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಯಾಣಿಕರು ಆರ್ಡಿನರಿ ಬಸ್​ನಲ್ಲಿ (Ordinary Bus Ticket Charge) ಪ್ರಯಾಣಿಸುತ್ತಿದರೂ, ಸಾರಿಗೆ ನಿಗಮವು ಎಕ್ಸ್​ಪ್ರೆಸ್ ಟಿಕೆಟ್ ಚಾರ್ಜ್ ಮಾಡುತ್ತಿದೆ. ಇದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    "ಯಾದಗಿರಿಯಿಂದ ಕಲಬುರಗಿಗೆ 90 ಕಿ.ಮೀ ಅಂತರವಿದೆ. ರಾಜಹಂಸ ಡಿಲೆಕ್ಸ್ ಬಸ್ ದರ 101 ರೂಪಾಯಿ ನಿಗದಿ ಮಾಡಲಾಗಿದೆ. ಆರ್ಡಿನರಿ ಬಸ್​ಗಳಿಗೆ ಸಾರಿಗೆ ಸಂಸ್ಥೆಯು ನಿಯಮದ ಪ್ರಕಾರ 80 ರೂಪಾಯಿ ಟಿಕೆಟ್ ನಿಗದಿ ಮಾಡಿ ಬಸ್ ಓಡಿಸಬೇಕು. ಆದರೆ ಆಗ್ತಿರೋದೇ ಬೇರೆ!


    ವಿಧಿಸಲಾಗುತ್ತಿರೋ ಟಿಕೆಟ್ ಚಾರ್ಜ್ ಎಷ್ಟು?
    ಯಾದಗಿರಿಯಿಂದ ಕಲಬುರಗಿಗೆ ತೆರಳುವ ಆರ್ಡಿನರಿ ಬಸ್​ಗಳಿಗೂ ಎಕ್ಸ್​ಪ್ರೆಸ್ ಬಸ್​ಗಳಂತೆ 101 ರೂಪಾಯಿ ಟಿಕೆಟ್ ಚಾರ್ಜ್ ನಿಗದಿ ಮಾಡಲಾಗಿದೆ. ತಡೆರಹಿತ ಬಸ್​ಗಳೆಂದು ಹೇಳಿ ಎಲ್ಲಾ ಕಡೆ ಬಸ್​ಗಳು ನಿಲುಗಡೆಯಾಗುತ್ತವೆ. ಆರ್ಡಿನರಿ ಬಸ್ ನಾವು ಓಡಿಸುತ್ತಿಲ್ಲ ಎಲ್ಲವೂ ತಡೆರಹಿತ ಬಸ್ ಗಳೆಂದು ಸಾರಿಗೆ ಸಂಸ್ಥೆಯು ಎಕ್ಸ್​ಪ್ರೆಸ್ ಟಿಕೆಟ್ ನೀಡುತ್ತಿದೆ" ಅಂತಾರೆ ಸಿದ್ದು ಪ್ರಕಾಶರೆಡ್ಡಿ ಎಂಬ ಪ್ರಯಾಣಿಕರು.


    ಇದನ್ನೂ ಓದಿ: Kalaburagi: ಬೆಳೆ ರಕ್ಷಣೆಗೆ ಕಲಬುರಗಿ ರೈತರ ಹೊಸ ಉಪಾಯ!




    ಪ್ರತಿದಿನ 1.40 ಲಕ್ಷ ಆದಾಯ
    ಯಾದಗಿರಿಯಿಂದ ಕಲಬುರಗಿಗೆ ಎಕ್ಸ್​ಪ್ರೆಸ್ ಬಸ್ ಟಿಕೆಟ್ ಪಡೆದು ಆರ್ಡಿನರಿ ಬಸ್​ಗಳಲ್ಲಿ ಪ್ರಯಾಣಿಸುವಂತಾಗಿದೆ ಎಂಬುದು ಇನ್ನೋರ್ವ ಪ್ರಯಾಣಿಕ ಸಿದ್ದಾರೂಢ ಅವರ ಅಳಲು. 2020 ಫೆಬ್ರವರಿ ತಿಂಗಳಲ್ಲಿ 101 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ನಿತ್ಯವೂ ಯಾದಗಿರಿಯಿಂದ ಕಲಬುರಗಿಗೆ 82 ಟ್ರಿಪ್ ಬಸ್ ಸಂಚಾರ ಮಾಡುತ್ತವೆ.  ಪ್ರತಿದಿನ 1.40 ಲಕ್ಷ ಆದಾಯ ಸಾರಿಗೆ ಸಂಸ್ಥೆಗೆ ಬರುತ್ತಿದೆ.


    ಯಾದಗಿರಿ ಜಿಲ್ಲೆಗೆ ನೂತನ 40 ಬಸ್​ಗಳ ಬೇಡಿಕೆ ಇದೆ.ಸಾಮಾನ್ಯ ಬಸ್​ನಲ್ಲೂ ಎಕ್ಸ್​ಪ್ರೆಸ್ ಟಿಕೆಟ್ ಚಾರ್ಜ್ ಮಾಡಲಾಗುತ್ತಿದೆ. ಪ್ರಯಾಣಿಕರಿಂದ ಹಣ ಕೊಳ್ಳೆ ಹೊಡೆಯುವ ಕೆಲಸ ಸಾರಿಗೆ ಸಂಸ್ಥೆಯು ಮಾಡುತ್ತಿದೆಯಾ ಎಂಬ ಅನುಮಾನ ಪ್ರಯಾಣಿಕರಲ್ಲಿ ಮೂಡಿದೆ.


    ವರದಿ: ನಾಗಪ್ಪ ಮಾಲಿಪಾಟೀಲ, ನ್ಯೂಸ್ 18 ಯಾದಗಿರಿ

    Published by:ಗುರುಗಣೇಶ ಡಬ್ಗುಳಿ
    First published: