ಉತ್ತರ ಕನ್ನಡ: ಪುಟ್ಟದಾದ ಸೈಕಲ್. ಹಿಂದೊಂದು ಮುಂದೊಂದು ಕಪ್ಪು ಬಣ್ಣದ ಬಾಕ್ಸ್. ಬೆಲ್, ಬ್ರೇಕ್ ಇದ್ರೂ ಪೆಡಲ್ ಇಲ್ಲದ ಈ ಸೈಕಲ್ (Cycle) ಯೂಸ್ ಆಗೋದಾದ್ರೂ ಏನಕ್ಕೆ ಅಂತೀರಾ? ಇವರು ಕಂಡುಹಿಡಿದಿರೋ ಈ ಸೈಕಲ್ ರೈತರ (Farmer's Tips) ಪಾಲಿನ ಫ್ರೆಂಡ್! ಇದನ್ನ ಕಂಡುಹಿಡಿದವರಾದರೂ ಯಾರು ಅಂತೀರಾ? ಎಲ್ಲವನ್ನ ಹೇಳ್ತೀವಿ ನೋಡಿ.
ಯೆಸ್, ಇಂತಹ ವಿಶಿಷ್ಟ ಮಾದರಿಯ ಸೈಕಲ್ ಕಂಡು ಹಿಡಿದಿರೋದು ಈ ಇಬ್ಬರು ವಿದ್ಯಾರ್ಥಿಗಳು ಮತ್ತು ಶಿಕ್ಷಕಿ. ಇವರು ಉತ್ತರ ಕನ್ನಡದ ಕುಮಟಾದ ಹೆಗಡೆ ಗ್ರಾಮದ ಮೊರಾರ್ಜಿ ವಸತಿ ನಿಲಯದ ಶಿಕ್ಷಕಿ ಮಧುರಾ ದೇಸಾಯಿ ಹಾಗೂ ಆದರ್ಶ್ ಹಾಗೂ ಪುನೀತ್ .
ಹೇಗೆ ತಯಾರಿಸಿದ್ರು ಗೊತ್ತಾ?
ಈ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿದ್ದ ಸೈಕಲ್ಗೆ ಹಗುರವಾದ ಬ್ಲೇಡ್ಗಳನ್ನು ಸಿಕ್ಕಿಸಿ ಹ್ಯಾಂಡಲ್ ಹಿಂಭಾಗಕ್ಕೆ ಕೂರಿಸಿದ್ರು. ನಂತರ ಒಂದು ಡಬ್ಬಿಯನ್ನು ವೆಲ್ಡ್ ಮಾಡಿ ಬ್ರೇಕ್ ವೈರ್ ಮೂಲಕ ಕೂರಿಗೆ ಮಾಡಿದ್ದಾರೆ.
ಈ ಯಂತ್ರ ಕೆಲಸ ಮಾಡೋದು ಹೀಗೆ
ಈ ಗಾಡಿ ಮುಂದೆ ಹೋದ ಹಾಗೆ ಮಣ್ಣನ್ನು ಅಗೆಯುತ್ತಾ ಸಾಗುತ್ತೆ. ನಂತರ ಆ ಭಾಗದಲ್ಲಿ ಕೂರಿಗೆಯಿಂದ ಬೀಜ ಉದುರಿಸುವಂತೆ ಮಾರ್ಪಾಡು ಮಾಡಲಾಗಿದ್ದು, ಹಿಂದೆ ಇಟ್ಟಿರುವ ಪ್ಲೇಟ್ ಮಣ್ಣನ್ನು ಹದ ಮಾಡುತ್ತೆ. ಇದಕ್ಕೆಲ್ಲ 2000 ರೂಪಾಯಿ ಒಳಗೆ ಖರ್ಚು ಆಗಿದೆ ಎನ್ನುವುದು ವಿಶೇಷ.
ಅತ್ಯುತ್ತಮ ವಿಜ್ಞಾನ ಮಾದರಿಯೆಂಬ ಹೆಗ್ಗಳಿಕೆ
ಈ ಮಕ್ಕಳು ಹಾಗೂ ಶಿಕ್ಷಕಿಗೆ ಇದನ್ನು ಸ್ವಯಂಚಾಲಿತ ಉಪಕರಣವನ್ನಾಗಿಸುವ ಗುರಿಯಿದೆ. ಅದರ ಕುರಿತು ಪ್ಲ್ಯಾನಿಂಗ್ ಕೂಡ ಶುರುವಾಗಿದೆ. ಸದ್ಯದ ಮಟ್ಟಿಗೆ ಈ ಸಾಧನ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅತ್ಯುತ್ತಮ ವಿಜ್ಞಾನ ಮಾದರಿಯಾಗಿ ಆಯ್ಕೆಯಾಗಿದೆ. ರಾಜ್ಯದ ಉತ್ತಮ ವಿಜ್ಞಾನ ಮಾದರಿಗಳಲ್ಲಿ ಒಂದು ಎಂಬ ಮೆಚ್ಚುಗೆ ಪಡೆದಿದೆ.
ಇದನ್ನೂ ಓದಿ: Karwar: ಗಣೇಶನಿಗೆ ಸಂಭ್ರಮದ ಪೂಜೆ; ಇದ್ಯಾವ ಚೌತಿ ಅಂತೀರಾ?
ಈ ಇಬ್ಬರೂ ವಿದ್ಯಾರ್ಥಿಗಳು ರೈತಾಪಿ ಕುಟುಂಬದಿಂದ ಬಂದವರು. ಹೀಗಾಗಿ ಅವರಿಗೆ ಈ ಐಡಿಯಾ ಹೊಳೆದಿದ್ರೆ, ನಂತರ ವಿಜ್ಞಾನ ಶಿಕ್ಷಕಿ ಮಧುರಾ ಮೇಡಂ ಈ ಮಾದರಿಯನ್ನು ಸಿದ್ಧಪಡಿಸಿದ್ದಾರೆ. ಈ ಮೂವರು ಸೇರಿ ಮಾಡಿದ ಸಾಧನವನ್ನು ಮಾನವ ಚಾಲಿತವಾಗಿ ತೋಟಗಳಲ್ಲಿ ಬಳಸಬಹುದಾಗಿದೆ. ಯಾವುದೇ ಇಂಧನ ಬಳಸದ ಮಾಲಿನ್ಯ ಮಾಡದ ಈ ಯಂತ್ರ ನಮಗೆ ದೈಹಿಕ ವ್ಯಾಯಾಮವನ್ನೂ ಒದಗಿಸುತ್ತದೆ.
ಇದನ್ನೂ ಓದಿ: Jodukere Hanuman: ಜೋಡುಕೆರೆಯ ಮಾರುತಿಯ ಜೋಪಾನ ಮಾಡುತ್ತಿರುವ ತಾಯಂದಿರು!
ಒಟ್ಟಿನಲ್ಲಿ ಕೃಷಿಗೆ ಪೂರಕವಾದ ಈ ಉಪಕರಣ ಇನ್ನಷ್ಟು ಅಭಿವೃದ್ಧಿಗೊಂಡು ರೈತರ ಪಾಲಿಗೆ ಉತ್ತಮ ಸಾಧನವಾಗಲಿ ಅನ್ನೋದು ನಮ್ಮ ಆಶಯ ಕೂಡಾ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ