Uttara Kannada: ಇನ್ನೂ ಬಳಕೆಯಲ್ಲಿದೆ ಮೈಸೂರು ರಾಜರ ಕಾಲದ ಬಸ್ ಸ್ಟ್ಯಾಂಡ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಉತ್ತರ ಕನ್ನಡದ ಬಸ್ ನಿಲ್ದಾಣವೊಂದು ಮೈಸೂರು ರಾಜ್ಯದ ನೆನಪನ್ನು ಬಿತ್ತುತ್ತಿದೆ. ಅದ್ಹೇಗೆ ಅಂತೀರ? ಈ ಸ್ಟೋರಿ ನೋಡಿದ್ರೆ ನಿಮ್ಗೆ ತಿಳಿಯುತ್ತೆ.

  • News18 Kannada
  • 5-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಪುಟ್ಟದಾದ ಬಸ್ ಸ್ಟ್ಯಾಂಡು, ಬಸ್​ಗಾಗಿ ಕಾಯ್ತಿರೋ ಪ್ರಯಾಣಿಕರು. ಹೀಗೆ ಈ ಬಸ್ ಸ್ಟ್ಯಾಂಡ್ ಅದೆಷ್ಟೋ ತಲೆ ತಲಾಂತರದ ಪ್ರಯಾಣಿಕರ ತಂಗುದಾಣ ಕೂಡ. ಈ ಬಸ್ ಸ್ಟ್ಯಾಂಡ್​ಗೊಂದು ಕೋಟೆ, ಅರಮನೆಯಂತೆ ಇತಿಹಾಸವೂ ಇದೆ. ಆ ಎಲ್ಲ ಇತಿಹಾಸವನ್ನ ಈ ಬಸ್ ನಿಲ್ದಾಣದಲ್ಲಿ ಅಚ್ಚು ಹಾಕಲಾಗಿರುವ MSRTC ಹೇಳ್ತಿರೋದು ವಿಶೇಷ. ಹಾಗಿದ್ರೆ ಅಂತಹ ವಿಶೇಷತೆ ಏನು ಅಂತೀರಾ? ಹೇಳ್ತೀವಿ ನೋಡಿ.


    KSRTC ಅಲ್ಲ, ಇದು MSRTC
    ಹೌದು, ಕೆಸ್​ಆರ್​ಟಿಸಿ 1973ರ ನಂತರದ್ದು ಇದು ಅದಕ್ಕೂ ಮೊದಲೇ ಇದ್ದ ಬಸ್ ಸ್ಟ್ಯಾಂಡು. 1948 ರಲ್ಲಿ ಕರುನಾಡಿಗೆ ಇನ್ನೂ ಕರ್ನಾಟಕ ಅನ್ನೋ ಹೆಸರು ಬಂದಿರಲಿಲ್ಲ. ಮೈಸೂರು ರಾಜ್ಯ ಅನ್ನೋ ಹೆಸರೇ ಇದ್ದಿದ್ರಿಂದ ಈ ಬಸ್ ನಿಲ್ದಾಣಕ್ಕೆ MSRTC ಎಂದೇ ಬೋರ್ಡ್ ಇದೆ.


    ಉತ್ತರ ಕನ್ನಡದ ಶಿರಸಿಯ ಅಮ್ಮಿನಳ್ಳಿಯಲ್ಲಿರುವ ಈ ಬಸ್ ನಿಲ್ದಾಣದ ಸುಣ್ಣ, ಬಣ್ಣ ಚೇಂಜ್ ಆದರೂ ಹೆಸರು ಮಾತ್ರ ಎಂಎಸ್ಆರ್​ಟಿಸಿಯಲ್ಲೇ ಉಳಿಸಿಕೊಂಡು ಬರುವಲ್ಲಿ ಸ್ಥಳೀಯ ಜಾನ್ಮನೆ ಗ್ರಾಮ ಪಂಚಾಯತ್ ಸಫಲವಾಗಿದೆ.


    ಇದನ್ನೂ ಓದಿ:Uttara Kannada: ಆಟದ ಗೊಂಬೆಯೇ ಟೀಚರ್! ಮಕ್ಕಳಿಗೆ ಪಾಠ ಹೇಳಿಕೊಡುತ್ತೆ ಈ ರೋಬೋಟ್!




    ಹೆದ್ದಾರಿ ಪಕ್ಕದಲ್ಲೇ ಬಸ್ ಸ್ಟ್ಯಾಂಡ್
    ಈ ಅಮ್ಮಿನಳ್ಳಿ ಒಂದು ತರಹ ಸಿದ್ದಾಪುರ ಹಾಗೂ ಕುಮಟಾಕ್ಕೆ ನಿಲೇಕಣಿ ಬಿಟ್ಟರೆ ಹೋಗಲು ಇರುವ ಎರಡನೇ ದಾರಿ. ನ್ಯಾಷನಲ್ ಹೈವೇ ಅಲ್ಲಿರುವ ಈ ಬಸ್ ಸ್ಟ್ಯಾಂಡಿಗೆ ಎಲ್ಲಾ ಲಾಂಗ್ ರೂಟ್ ಬಸ್ ಹಾಗೂ ಲೋಕಲ್ ಬಸ್ ಬರುತ್ತವೆ‌‌.


    ಇದನ್ನೂ ಓದಿ: HDK ಹಾರದ ಹಿಂದಿನ ಕೈ! ಬೃಹತ್ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!


    ಹೀಗೆ ಅದ್ಯಾವುದೋ ಕೋಟೆ ಕಟ್ಟಡಗಳು ಇತಿಹಾಸ ಸಾರುವ ಸಮಯದಲ್ಲಿ ಬಸ್ ಸ್ಟ್ಯಾಂಡ್​ವೊಂದು ತನ್ನ ಇತಿಹಾಸದಿಂದ ಸುದ್ದಿಯಾಗ್ತಿರೋದು ವಿಶೇಷ. ಅಷ್ಟೇ ಅಲ್ದೇ, ಮೈಸೂರು ರಾಜ್ಯದ ಕುರುಹೊಂದನ್ನು ಮಲೆನಾಡಿನ ಈ ಪುಟ್ಟ ಹಳ್ಳಿ ಹೊಂದಿದೆ ಅನ್ನೋದು ಅಚ್ಚರಿಯೇ ಸರಿ.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: