HDK ಹಾರದ ಹಿಂದಿನ ಕೈ! ಬೃಹತ್ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಯಾತ್ರೆಯ ವೇಳೆ ಗೋಕರ್ಣದ ತರಕಾರಿ, ಭತ್ತದ ತೆನೆಗಳಂಥ ಹಾರವನ್ನ ಹಾಕಿ ಸ್ವಾಗತಿಸಲಾಗಿದೆ. ಜೊತೆಗೆ ಸುಮಾರು 3 ಕ್ವಿಂಟಲ್​ನ ಅಡಿಕೆ ಹಾರವನ್ನೂ ಹಾಕಿ ಸ್ವಾಗತಿಸಿರುವುದು ಕುಮಾರಸ್ವಾಮಿ ಅವರ ಸಂತಸಕ್ಕೆ ಕಾರಣವಾಗಿದೆ.

  • News18 Kannada
  • 2-MIN READ
  • Last Updated :
  • Uttara Kannada, India
  • Share this:

    ಕಾರವಾರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡೆಸುತ್ತಿರೋ ಪಂಚರತ್ನ ಯಾತ್ರೆಯಲ್ಲಿ ಹಾರಗಳೇ ಫೇಮಸ್! ಇತ್ತೀಚಿಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ಗೂ HDK ಸೇರ್ಪಡೆಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೂ (Uttara Kannada News) ಇತ್ತೀಚಿಗೆ ನಡೆದ ಎರಡು ದಿನಗಳ ಯಾತ್ರೆಯಲ್ಲೂ ಹೆಚ್​ಡಿಕೆ ಕೊರಳಿಗೆ ವಿಶೇಷ ಹಾರಗಳು (HD Kumaraswamy Garlands) ಬಿದ್ದಿವೆ. ಅದರಲ್ಲೂ ಅಡಿಕೆ ಹಾರ ಎಲ್ಲರ ಗಮನ ಸೆಳೆದಿದೆ. ಈ ಅಡಿಕೆ ಹಾರ (Arecanut Garland To HD Kumaraswamy) ತಯಾರಿಸಿದ್ದು ಯಾರು ಅನ್ನೋ ಇಂಟರೆಸ್ಟಿಂಗ್ ಸ್ಟೋರಿ ನಾವ್ ಹೇಳ್ತೀವಿ ಕೇಳಿ.


    ಈ ವಿಶೇಷ ಅಡಿಕೆ ಹಾರವನ್ನ ಉತ್ತರ ಕನ್ನಡದ ಶಿರಸಿಯಲ್ಲೇ ತಯಾರಿಸಲಾಗಿದೆ. ಕುಮಾರಸ್ವಾಮಿಯವರ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರೇ ಸೇರಿ ಈ ಹಾರವನ್ನ ತಯಾರಿಸಿರುವುದು ಮತ್ತೊಂದು ವಿಶೇಷ. ಸುಮಾರು 30 ಸಾವಿರ ಬೆಲೆಯ ಅಡಿಕೆಯಲ್ಲಿ ತಯಾರಾದ ಈ ಮಾಲೆಯನ್ನು ತಯಾರಿಸಿದ ಅರುಣ್ ಗೌಡ ನ್ಯೂಸ್ 18ಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.




    ನಾಲ್ಕೈದು ದಿನಗಳ ಪರಿಶ್ರಮ
    ನಾಲ್ಕೈದು ದಿನಗಳ ಕಾಲ ಶ್ರಮಪಟ್ಟು, ರಾತ್ರಿ- ಹಗಲೆನ್ನದೇ ಈ ಹಾರವನ್ನ ತಯಾರಿಸಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಈ ಹಾರದ ವಿಡಿಯೋ ಟ್ವೀಟ್ ಮಾಡುವ ಮೂಲಕ ಕಾರ್ಯಕರ್ತರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


    ಇದನ್ನೂ ಓದಿ: Uttara Kannada: ಚೆಂದುಳ್ಳಿ ಚೆಲುವೆಯರ ಕ್ಯಾಟ್ ವಾಕ್​! ಮಿಸ್ ಶಿರಸಿ ಆದ ಸುಂದರಿ ಇವ್ರೇ!




    ಗೋಕರ್ಣದಲ್ಲೂ ವಿಶೇಷ ಹಾರ!
    ನವೆಂಬರ್ 18ರಂದು ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಪ್ರಾರಂಭಿಸಿದ್ದ ಪಂಚರತ್ನ ಯಾತ್ರೆ ಫೆಬ್ರವರಿ 8 ಮತ್ತು 9ರಂದು ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಂಚರಿಸಿದೆ. ಈ ಯಾತ್ರೆಯ ವೇಳೆ ಗೋಕರ್ಣದ ತರಕಾರಿ, ಭತ್ತದ ತೆನೆಗಳಂಥ ಹಾರವನ್ನ ಹಾಕಿ ಸ್ವಾಗತಿಸಲಾಗಿದೆ. ಇದರ ಜೊತೆಗೆ ಸುಮಾರು 3 ಕ್ವಿಂಟಲ್​ನ ಅಡಿಕೆ ಹಾರವನ್ನೂ ಹಾಕಿ ಸ್ವಾಗತಿಸಿರುವುದು ಕುಮಾರಸ್ವಾಮಿ ಅವರ ಸಂತಸಕ್ಕೆ ಕಾರಣವಾಗಿದೆ.




    ಇದನ್ನೂ ಓದಿ: Aghanashini Aarti: ಕಾಶಿಯ ಗಂಗಾರತಿಯಂತೆಯೇ ಕುಮಟಾದಲ್ಲಿ ನಡೆಯಿತು ಅಘನಾಶಿನಿ ಆರತಿ!


    ನಿಜಕ್ಕೂ ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆ ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ. ಹಾರ ಹಾಕಿಸಿಕೊಳ್ಳುವುದರೊಂದಿಗೆ ದಾಖಲೆ ಬರೆದು ಗ್ರಾಮೀಣ ಪ್ರತಿಭೆಗಳಲ್ಲಿನ ಹಾರ ತಯಾರಿಕೆಯ ಕೌಶಲವನ್ನೂ ಬೆಳಕಿಗೆ ತರುವ ಕಾರ್ಯ ಮಾಡಿದೆ ಎಂದರೆ ತಪ್ಪಾಗಲ್ಲ.


    ವರದಿ: ದೇವರಾಜ್ ನಾಯ್ಕ್, ಕಾರವಾರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು