• ಹೋಂ
  • »
  • ನ್ಯೂಸ್
  • »
  • ಉಡುಪಿ
  • »
  • Kundapura: ಕರ್ನಾಟಕ ತಂಡಕ್ಕೆ ಕರಾವಳಿಯ ನಾಯಕತ್ವ, ರಾಷ್ಟ್ರೀಯ ವಾಲಿಬಾಲ್​ನಲ್ಲಿ ಕುಂದಾಪುರದ ಪ್ರತಿಭೆ

Kundapura: ಕರ್ನಾಟಕ ತಂಡಕ್ಕೆ ಕರಾವಳಿಯ ನಾಯಕತ್ವ, ರಾಷ್ಟ್ರೀಯ ವಾಲಿಬಾಲ್​ನಲ್ಲಿ ಕುಂದಾಪುರದ ಪ್ರತಿಭೆ

ಅನೂಪ್ ಡಿ' ಕೋಸ್ಟಾ

ಅನೂಪ್ ಡಿ' ಕೋಸ್ಟಾ

ಕೋಟೇಶ್ವರ ಬಳಿಯ ಚಂದನ್ ಆಚಾರ್ಯ, ಭಟ್ಕಳದ ನವೀದ್ ಖಾನ್ ಸಹ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದು ಕರುನಾಡನ್ನು ಗೆಲ್ಲಿಸುವ ಭರವಸೆ ಮೂಡಿಸಿದ್ದಾರೆ.

  • News18 Kannada
  • 3-MIN READ
  • Last Updated :
  • Kundapura (Kundapur), India
  • Share this:

    ಕುಂದಾಪುರ: 71ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗೆ ಕರಾವಳಿ ಪ್ರತಿಭೆಯೊಬ್ಬರು ಆಯ್ಕೆಯಾಗಿದ್ದಾರೆ. ಹೌದು, ಅಸ್ಸಾಂನ ಗುವಾಹಟಿಯಲ್ಲಿ ಆರಂಭವಾಗಿರುವ 71ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಕುಂದಾಪುರದ ಆಟಗಾರ ಮುನ್ನಡೆಸಲಿದ್ದಾರೆ. ಕುಂದಾಪುರದ ಅನೂಪ್ ಡಿ' ಕೋಸ್ಟಾ ಕರ್ನಾಟಕ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.


    ಈಗಾಗಲೇ ಅಸ್ಸಾಂನಲ್ಲಿ ಆರಂಭವಾಗಿರುವ 71ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿ ಫೆಬ್ರವರಿ 8ರವರೆಗೂ ನಡೆಯಲಿದೆ.


    ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ
    ಅನೂಪ್ ಡಿ'ಕೋಸ್ಟಾ ವೃತ್ತಿಯಲ್ಲಿ ಹೈದರಾಬಾದ್ನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, 15 ವರ್ಷಗಳಿಂದ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.

    ಸುದೀರ್ಘ ಅನುಭವ ಹೊಂದಿರುವ ಅನೂಪ್
    ಅನೂಪ್ ಡಿ'ಕೋಸ್ಟಾ ಭಾರತೀಯ
    ಜೂನಿಯರ್ ತಂಡದ ನಾಯಕ, ಸೀನಿಯರ್ ತಂಡ ಆಟಗಾರನಾಗಿ ಅನುಭವ ಹೊಂದಿದ್ದಾರೆ. 13 ಬಾರಿ ಕರ್ನಾಟಕವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿ ಇದೀಗ ನಾಯಕನಾಗಿಯೂ ಆಯ್ಕೆಯಾಗಿದ್ದಾರೆ.


    ಇದನ್ನೂ ಓದಿ: Dakshina Kannada: ಕಡೇಶಿವಾಲಯ ಶಾಲೆಯ ವಿದ್ಯಾರ್ಥಿಗಳು ಕೃಷಿಕರೂ ಹೌದು!

    ಕುಂದಾಪುರದ ಅನೂಪ್ ಅವರು ಆಲ್​ ರೌಂಡರ್. ಏಷ್ಯಾದ ಅತ್ಯಂತ ಎತ್ತರದ ನೆಗೆತಗಾರ ಎಂಬ ಹಿರಿಮೆಯೂ ಅವರದ್ದು. ಏಕಲವ್ಯ ಪ್ರಶಸ್ತಿಗೂ ಭಾಜನರಾಗಿರುವ ಅನೂಪ್ ಸದ್ಯ 71ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಗೆಲ್ಲಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.


    ಇದನ್ನೂ ಓದಿ: Nyaya Basadi: ನ್ಯಾಯ ಬೇಕಂದ್ರೆ ಇಲ್ಲೇ ಬರ್ಬೇಕು! ಮೂಡುಬಿದಿರೆಯಲ್ಲೊಂದು ಅಚ್ಚರಿಯ ತಾಣ




    ಅಷ್ಟೇ ಅಲ್ಲ, ಕೋಟೇಶ್ವರ ಬಳಿಯ ಚಂದನ್ ಆಚಾರ್ಯ, ಭಟ್ಕಳದ ನವೀದ್ ಖಾನ್ ಸಹ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದು ಕರುನಾಡನ್ನು ಗೆಲ್ಲಿಸುವ ಭರವಸೆ ಮೂಡಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: