Viral Post: ಕಾಂಗ್ರೆಸ್ ಮುಖಂಡ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಅವರ ಅಸಂಗತ ಪದಗಳ ಆಯ್ಕೆ ಯಾವಾಗಲೂ ಹಲವರನ್ನು ಮೆಚ್ಚಿಸುತ್ತದೆ. ತರೂರ್ರ ಶ್ರೀಮಂತ ಶಬ್ದಕೋಶವು ಪ್ರಭಾವಶಾಲಿಯಾಗಿದ್ದು, ಕೇರಳ ಸಂಸದನ ಟ್ವೀಟ್ಗಳು ಅವುಗಳ ಅನನ್ಯತೆಗಾಗಿ ಯಾವಾಗಲೂ ವೈರಲ್ ಆಗುತ್ತವೆ. ಇತ್ತೀಚೆಗೆ ವಿನಮ್ರವಾದ ದೇಸಿ ಬೀದಿ ಬದಿಯ ಆಹಾರವಾದ ಭೇಲ್ ಪುರಿ ಬಗ್ಗೆ ವಾಟ್ಸ್ಆ್ಯಪ್ನಲ್ಲಿ ಬಂದ ಪಾಕವಿಧಾನ ಎಂದು ಹೇಳಿಕೊಂಡು ಇತ್ತೀಚೆಗೆ ತನ್ನ ಫಾಲೋವರ್ಸ್ಗಳಿಗಾಗಿ ಶಶಿ ತರೂರ್ ಹಂಚಿಕೊಂಡಿದ್ದು, ಈ ಟ್ವೀಟ್ ಸಹ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪಾಕವಿಧಾನದ ಫೋಟೋವನ್ನು ವಾಟ್ಸ್ಆ್ಯಪ್ನಲ್ಲಿ ನನಗೆ ಫಾರ್ವಡ್ ಮಾಡಲಾಗಿತ್ತು. ವೀಕೆಂಡ್ನಲ್ಲಿ ತಿನ್ನಲು ಇದು ಉತ್ತಮ ಎಂದು ಶಶಿ ತರೂರ್ ಹೇಳಿದ್ದಾರೆ. ಆದರೆ, ಆಸಕ್ತಿದಾಯಕ ಭಾಗವೆಂದರೆ ಪಾಕವಿಧಾನದ ಫೋಟೋವಿನಲ್ಲಿ ಈ ರೆಸಿಪಿಯನ್ನು ನೀಡಿರುವುದು ಡಾ. ಶಶಿ ತರೂರ್ (ಸ್ವತ: ಕಾಂಗ್ರೆಸ್ ಸಂಸದ ತರೂರ್) ಎಂದು ತಿಳಿದುಬಂದಿದೆ.
ರಾಜಸ್ಥಾನಿ ಮರುಭೂಮಿ ಸಿಲಾಂಟ್ರೋನ ಆರೋಮ್ಯಾಟಿಕ್ ಸಾಲ್ಸಾ-ವರ್ಡ್ನೊಂದಿಗೆ ಚಿಮುಕಿಸಲಾದ ಪಶ್ಚಿಮ ಘಟ್ಟದ ಮಳೆಕಾಡಿನಿಂದ ವಿಲಕ್ಷಣವಾದ ಗರಿಗರಿಯಾದ ಪಫ್ಡ್ ಕಾಡು ಅಕ್ಕಿ ಎಂದು ಪ್ರಾರಂಭಿಸಿದ ಈ ಪೋಸ್ಟ್ನಲ್ಲಿ ಪಾಕವಿಧಾನವನ್ನು ಸಮೃದ್ಧವಾಗಿ ವಿವರಿಸಲಾಗಿದ್ದು, ಇದನ್ನು ಸಾಮಾನ್ಯವಾಗಿ ಭೇಲ್ ಪುರಿ ಎಂದು ಕರೆಯಲ್ಪಡುತ್ತದೆ ಎಂಬ ಟಿಪ್ಪಣಿಯೊಂದಿಗೆ ಇದು ಕೊನೆಗೊಳ್ಳುತ್ತದೆ.
ಖಾರದ ತಿಂಡಿಯಲ್ಲಿ ಬಳಸುವ ಭೇಲ್ ಅನ್ನು "ಪಶ್ಚಿಮ ಘಟ್ಟದ ಮಳೆಕಾಡಿನಿಂದ ಬಂದ ವಿಲಕ್ಷಣ ಗರಿಗರಿಯಾದ ಕಾಡು ಅಕ್ಕಿ" ಎಂದು ವಿವರಿಸಿದ ಶಶಿ ತರೂರ್ ಅವರ ವಿಲಕ್ಷಣ ಭೇಲ್ಪುರಿ ರೆಸಿಪಿಯಲ್ಲಿ ನೀಲಗಿರಿಯಲ್ಲಿನ ವಿಶೇಷ ಹಸಿರುಮನೆಗಳಿಂದ ಪಡೆದ ಬಾಣಸಿಗನ ರಹಸ್ಯ ಮೈಕ್ರೊ-ಗ್ರೀನ್ಸ್ ಅನ್ನು ಒಳಗೊಂಡಿರುವ ತಿಂಡಿ, ಸುವಾಸನೆಯ ಸಾಲ್ಸಾ- ರಾಸ್ ಅಲ್-ಖೈಮಾ ಡೇಟ್ಸ್ (ಖರ್ಜೂರ) ಮತ್ತು ಅತ್ಯಂತ ಅಪರೂಪದ ಅಸ್ಸಾಮಿನ ಭೂತ್ ಜೊಲೋಕಿಯಾ ಮೆಣಸಿನಕಾಯಿಯನ್ನೂ ಒಳಗೊಂಡಿದೆ ಎಂದು ವಿವರಿಸಿದ್ದಾರೆ. ಹಾಗೂ, ಕೇರಳ ಬೀಚ್-ಮರಳಿನಿಂದ ಬೆಳೆದ ಸಿಹಿ ಹುಣಸೆಹಣ್ಣು ಮತ್ತು ಮಲಬಾರ್ ಸಾವಯವ ಕಚ್ಚಾ ಸಕ್ಕರೆಯ ಸಾಸ್ನೊಂದಿಗೆ ಮಸಾಲೆಯನ್ನು ಸೀಸನ್ ಮಾಡಬಹುದು ಎಂದು ಪಾಕವಿಧಾನದಲ್ಲಿ ಮತ್ತಷ್ಟು ಸೇರಿಸಲಾಗಿದೆ.
ಗುಜರಾತಿ ಚಳಿಗಾಲದ ಶಾಲೊಟ್ಸ್ (ಈರುಳ್ಳಿ) ಮತ್ತು ವಿದರ್ಭ ಪಾರಂಪರಿಕ ಆಲೂಗಡ್ಡೆಗಳ ಮ್ಯಾಸಿಡೋಯಿನ್ಗಳೊಂದಿಗೆ (ಸಾಮಾನ್ಯವಾಗಿ ತರಕಾರಿಗಳು ಅಥವಾ ಹಣ್ಣಿನ ಮಿಶ್ರಣವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ) ಕಂಚಿನ ಬಟ್ಟಲಿನಲ್ಲಿ ಎಸೆಯಲಾಗುತ್ತದೆ ಮತ್ತು ಗಲಭೆಯ ಉತ್ಸಾಹದಿಂದ ಕೂಡಿರುವ ಹೈದರಾಬಾದ್ ಕಡಲೆ- ಸುವಾಸನೆಯ ಕ್ರಂಚೀಸ್ “ಬುಗಿಯಾ” ಮತ್ತು “ಪ್ಯಾಪಿ” ಬೇಯಿಸಿದ “ಎ ಲಾ ಮಾರ್ವಾರೈಸ್” ಎಂದೂ ಸೇರಿಸಲಾಗಿದೆ.
ಇಂಗ್ಲೀಷ್ನಲ್ಲಿ ಇರುವ ಈ ವಿಶಿಷ್ಟವಾದ ಭೇಲ್ ಪುರಿಯ ಪಾಕ ವಿಧಾನವನ್ನು ನೀವೂ ನೋಡಿ.
As received on @WhatsApp. Good for weekend consumption!😂 pic.twitter.com/2z5pYspZei
— Shashi Tharoor (@ShashiTharoor) July 24, 2021
ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಡಿರುವ ಈ ಪೋಸ್ಟ್ ಸಾವಿರಾರು ಲೈಕ್ಗಳನ್ನು ಮತ್ತು ನೂರಾರು ರೀಟ್ವೀಟ್ಗಳು ಹಾಗೂ ಕಮೆಂಟ್ಗಳನ್ನು ಗಳಿಸಿದೆ.ಜುಲೈ 1 ರಂದು ಶಶಿ ತರೂರ್ ಟ್ವಿಟ್ಟರ್ನಲ್ಲಿ ಮತ್ತೊಂದು ತಲೆ ಕೆರೆದುಕೊಳ್ಳುವಂತಹ ಪೋಸ್ಟ್ ಹಾಕಿದ್ದರು: ಇದೇ ಪೊಗೊನೋಟ್ರೋಫಿ ಅಂದರೆ ಗಡ್ಡ ಬೆಳೆಸುವುದು. ತನ್ನ ಸ್ನೇಹಿತನಿಂದ ಈ ಪದ ಕಲಿತಿರುವುದಾಗಿಯೂ ತರೂರ್ ತಮ್ಮ ಟ್ವೀಟ್ನಲ್ಲಿ ಹೇಳಿಕೊಂಡಿದ್ದರು.
ಟ್ವಿಟ್ಟರ್ ಬಳಕೆದಾರರೊಬ್ಬರು ತರೂರ್ಗೆ ತಾನು ಹೊಸದಾಗಿ ತೆರೆಯಲಿರುವ ರೆಸ್ಟೋರೆಂಟ್ನಲ್ಲಿ ಮೆನು ಕಾರ್ಡ್ ರೆಡಿ ಮಾಡಲು, ಅದರಲ್ಲಿ ಆಹಾರದ ತಿನಿಸುಗಳಿಗೆ ವಿವರಗಳನ್ನು ಬರೆಯಲು ನಿಮ್ಮ ಸಹಾಯ ಬೇಕು ಎಂದೂ ಕೇಳಿದ್ದರು. ಈ ಅಲಂಕಾರಿಕ ಭೇಲ್ಪುರಿ ಪಾಕವಿಧಾನವನ್ನು ನೀವೂ ಪ್ರಯತ್ನಿಸಲು ಪ್ರಯತ್ನಿಸಿ ನೋಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ