• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Neeraj Chopra: ನೀರಜ್ ಚಿನ್ನದ ಪದಕ ಗೆಲ್ಲೋ ಟ್ರೇನಿಂಗ್​ಗೆ ಖರ್ಚಾಗಿದ್ದು 7 ಕೋಟಿ ರೂಪಾಯಿ, 177 ಜಾವೆಲಿನ್​ಗಳು

Neeraj Chopra: ನೀರಜ್ ಚಿನ್ನದ ಪದಕ ಗೆಲ್ಲೋ ಟ್ರೇನಿಂಗ್​ಗೆ ಖರ್ಚಾಗಿದ್ದು 7 ಕೋಟಿ ರೂಪಾಯಿ, 177 ಜಾವೆಲಿನ್​ಗಳು

ನೀರಜ್ ಚೋಪ್ರಾ

ನೀರಜ್ ಚೋಪ್ರಾ

ಒಲಿಂಪಿಕ್ಸ್​​ಗೆ ನೀರಜ್​ನ್ನು ರೆಡಿ ಮಾಡೋಕೆ ಸ್ಪೋರ್ಟ್ಸ್​ ಅಥಾರಿಟಿ ಆಫ್ ಇಂಡಿಯಾ ಬರೋಬ್ಬರಿ 7 ಕೋಟಿ ರೂಪಾಯಿ ಖರ್ಚು ಮಾಡಿದೆಯಂತೆ. ಆತನ ಟ್ರೇನಿಂಗ್​ ಗೆ ಅಂತಲೇ 177 ಜಾವೆಲಿನ್​ಗಳನ್ನು ತರಿಸಿ ಮೀಸಲಿಡಲಾಗಿತ್ತು.

  • Share this:

Neeraj Chopra: ಚಿನ್ನದ ಹುಡುಗ ನೀರಜ್ ಚೋಪ್ರಾ ಭಾರತೀಯರ ಹೃದಯವನ್ನು ಗೆದ್ದುಬಿಟ್ಟಿದ್ದಾನೆ. ಅವನ ಸಾಧನೆ ಕಡಿಮೆಯದ್ದಲ್ಲ. ಜಾವೆಲಿನ್ ಥ್ರೋ ಎನ್ನುವ ಎಲ್ಲರಿಗೂ ಪರಿಚಯ ಇದ್ದ ಆಟವನ್ನು ಮತ್ತಷ್ಟು ಫೇಮಸ್ ಮಾಡಿದ ಕೀರ್ತಿ ನೀರಜ್​ಗೆ ಸಲ್ಲುತ್ತದೆ. ಅನೇಕ ವರ್ಷಗಳಿಂದ ನೀರಜ್ ಜಾವೆಲಿನ್ ಥ್ರೋನಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿರಂತರ ತರಬೇತಿ ಮತ್ತು ಶ್ರಮ ಇದ್ದೇ ಇದೆ. ಆದ್ರೆ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆಯುವುದು ಅಂದ್ರೆ ಸುಮ್ಮನೆ ಮಾತಲ್ಲ. ಇದಕ್ಕೆ ನೀರಜ್ ಶ್ರಮದ ಜೊತೆಜೊತೆಗೇ ತರಬೇತಿಯೂ ಅಷ್ಟೇ ಮುಖ್ಯ. ಒಲಿಂಪಿಕ್ಸ್​​ಗೆ ನೀರಜ್​ನ್ನು ರೆಡಿ ಮಾಡೋಕೆ ಸ್ಪೋರ್ಟ್ಸ್​ ಅಥಾರಿಟಿ ಆಫ್ ಇಂಡಿಯಾ ಬರೋಬ್ಬರಿ 7 ಕೋಟಿ ರೂಪಾಯಿ ಖರ್ಚು ಮಾಡಿದೆಯಂತೆ. ಆತನ ಟ್ರೇನಿಂಗ್​ ಗೆ ಅಂತಲೇ 177 ಜಾವೆಲಿನ್​ಗಳನ್ನು ತರಿಸಿ ಮೀಸಲಿಡಲಾಗಿತ್ತು. ಅಲ್ಲದೇ ಜಾವೆಲಿನ್ ಎಸೆಯುವ ಯಂತ್ರವೊಂದನ್ನೂ ತರಿಸಲಾಗಿತ್ತು, ಅದರ ಬೆಲೆ 74.28 ಲಕ್ಷ ರೂಪಾಯಿಗಳು.


ಈ ಎಲ್ಲಾ ಲೆಕ್ಕವನ್ನು ಕ್ರೀಡಾ ಅಧಿಕಾರಿಗಳೇ ನೀಡಿದ್ದಾರೆ. ಒಲಿಂಪಿಕ್ಸ್​ಗೆ ಮುನ್ನ ನೀರಜ್ ಚೋಪ್ರಾಗೆ ವಿದೇಶದಲ್ಲಿ ಬರೋಬ್ಬರಿ 450 ದಿನಗಳ ವಿಶೇಷ ತರಬೇತಿ ಕೊಡಿಸಲಾಗಿತ್ತು. ಅದಲ್ಲದೇ ಪಟಿಯಾಲಾದ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ 1167 ದಿನಗಳನ್ನು ನೀರಜ್ ಕಳೆದಿದ್ದಾನೆ. ಇದೆಲ್ಲವೂ ಆತನ ಗೆಲುವಿಗೆ ದೊಡ್ಡ ಮಟ್ಟಿಗೆ ಸಹಕಾರಿಯಾಗಿದೆ.


ನಿರ್ದಿಷ್ಟವಾಗಿ ನೀರಜ್​ಗೆ ಅಂತಲೇ ಕೆಲವು ಪರ್ಸನಲ್ ಟ್ರೇನಿಂಗ್ ಸೆಶನ್​ಗಳನ್ನೂ ನೀಡಲಾಗಿತ್ತಂತೆ. ನೀರಜ್ ಈ ಎಲ್ಲದರಲ್ಲೂ ಬಹಳ ಶ್ರಮವಹಿಸಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದೆಲ್ಲದರ ಫಲವೇ ಒಲಿಂಪಿಕ್ಸ್​ನಲ್ಲಿ ಅವರಿಗೆ ಒಲಿದ ಬಂಗಾರದ ಪದಕ. ಬಂಗಾರದ ಪದಕ ಗೆದ್ದು ಈಗಾಗಲೇ ಸಾಕಷ್ಟು ದಿನಗಳಾಗಿದ್ರೂ ನೀರಜ್ ಸಾಧನೆಯ ಸಂಭ್ರಮ ಇನ್ನೂ ಮುಂದುವರೆದಿದೆ.


ಇದನ್ನೂ ಓದಿ: Neeraj Chopra: ಜಪಾನಿಗೆ ಹೋದ್ರೂ ಅಲ್ಲಿನ ಊಟ ಮಾಡ್ಲಿಲ್ವಂತೆ ಚಿನ್ನದ ಹುಡುಗ, Sushi ಬದ್ಲು ಇನ್ನೇನೋ ಕೇಳಿದ್ರಂತೆ ನೀರಜ್... ಏನದು?


ಇನ್ನು ಇತ್ತೀಚೆಗೆ ನೀರಜ್ ತಾವು 2019ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆಗ ಅವರು ಮೊಣಕೈ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಂದು ಚಿತ್ರ ಆಸ್ಪತ್ರೆಯ ಹಾಸಿಗೆ ಮೇಲಿನದ್ದಾದ್ರೆ ಮತ್ತೊಂದು ಅದೇ ಕೈಯಲ್ಲಿ ಚಿನ್ನದ ಪದಕ ಹಿಡಿದುಕೊಂಡಿದ್ದು. ತನ್ನ ಆ ಕಷ್ಟದ ಸಂದರ್ಭದಲ್ಲಿ ನೆರವಾದ ವೈದ್ಯರನ್ನು ಅವರು ಸ್ಮರಿಸಿಕೊಂಡಿದ್ದರು.



ಇನ್ನು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ನೀರಜ್ ಚೋಪ್ರಾ ತಮ್ಮ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸಿಕೊಂಡಿದ್ದರು. ತಮ್ಮ ಇಡೀ ಸಹಾಯಕ ಸಿಬ್ಬಂದಿಗೆ ನೀರಜ್ ಚೋಪ್ರಾ ಧನ್ಯವಾದಗಳನ್ನು ಅರ್ಪಿಸಿದ್ದರು. 2019ತ ಮೇ ತಿಂಗಳಿನಿಂದ ಇಲ್ಲಿಯ ತನಕ ನಿಮ್ಮೆಲ್ಲರ ಜತೆಗಿನ ಪಯಣ ಅವಿಸ್ಮರಣೀಯವಾದದ್ದು ಎಂದು ಡಾ. ಡಿನ್‌ಶಾ ಪರ್ಡಿವಾಲಾ, ಕೋಚ್‌ ಕ್ಲೌಸ್‌ ಹಾಗೂ ಫಿಸಿಯೋ ಇಶಾನ್‌ ಅವರಿಗೆ ತಾವು ಕೃತಜ್ಞರಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ನೀರಜ್‌ ನುಡಿನಮನ ಸಲ್ಲಿಸಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: