Cyber Crime: ಒಟಿಪಿ ಶೇರ್ ಮಾಡಿ ಬರೋಬ್ಬರಿ 1 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇದೀಗ ಸೈಬರ್​ ಕ್ರೈಮ್ ವಂಚನೆ ಗುರುಗ್ರಾಮದಲ್ಲಿ ನಡೆದಿದ್ದು, ಮಹಿಳೆಯೊಬ್ಬರು ಓಟಿಪಿ ಶೇರ್​ ಮಾಡುವ ಮೂಲಕ ಬರೋಬ್ಬರಿ 1 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಅಷ್ಟಕ್ಕೂ 1 ಲಕ್ಷ ಹೇಗೆ ಕಳೆದುಕೊಂಡರು ಎಂದು ತಿಳಿಬೇಕಾದರೆ ಈ ಲೇಖನವನ್ನು ಓದಿ.

  • Share this:

    ಇತ್ತೀಚೆಗೆ ಎಲ್ಲಿ ಹೋದರೂ ವಂಚಕರದ್ದೇ ಸುದ್ದಿ ಹರಿದಾಡುತ್ತಿದೆ. ಟೆಕ್ನಾಲಜಿ (Technology) ಪ್ರಗತಿ ಕಂಡಂತೆ ವಂಚಕರ ಸಂಖ್ಯೆ ಕೂ ಹೆಚ್ಚಾಗುತ್ತಿದೆ. ಹಿಂದೆಲ್ಲಾ ಈ ವಂಚಕರು ದಾರಿ ಬದಿಗಳಲ್ಲೋ, ಮನೆಗೆ ನುಗ್ಗಿಯೋ ಕಳ್ಳತನ ಮಾಡುತ್ತಿದ್ದರು. ಆದರೆ ಈ ಕಾಲ ಬದಲಾಗಿದೆ. ಕಣ್ಣಮುಚ್ಚಿ ತೆರೆಯೋದ್ರ ಒಳಗೆ ಬ್ಯಾಂಕ್ ಹಣವನ್ನು (Bank Money) ದೋಚಿ ಬಿಡುತ್ತಾರೆ. ಕೆಲ ಅಮಾಯಕರನ್ನು ಬ್ಯಾಂಕ್​ಗೆ ಸಂಬಂಧಿಸಿ ಕಾಲ್​ ಮಾಡುವ ಮೂಲಕ ವಂಚನೆ ಮಾಡಿದರೆ, ಇನ್ನೂ ಕೆಲವರು ಕೇವಲ ಓಟಿಪಿ (OTP Scam) ಮೂಲಕ ವಂಚನೆ ಎಸಗಲು ಆರಂಭಿಸಿದ್ದಾರೆ. ಓಟಿಪಿ ಸ್ಕ್ಯಾಮ್​ಗಳು ಇತ್ತೀಚೆಗೆ ಭಾರೀ ಸದ್ದಿನಲ್ಲಿದೆ. ಕೇವಲ ಒಂದು ಓಟಿಪಿ ಮೂಲಕ ಜನರ ಬ್ಯಾಂಕ್​ ಖಾತೆಗೆ ಪ್ರವೇಶವನ್ನು ಪಡೆದು, ಅದರಲ್ಲಿದ್ದ ಹಣವನ್ನೆಲ್ಲಾ ಖಾಲಿ ಮಾಡುತ್ತಾರೆ.


    ಇದೀಗ ಸೈಬರ್​ ಕ್ರೈಮ್ ವಂಚನೆ ಗುರುಗ್ರಾಮದಲ್ಲಿ ನಡೆದಿದ್ದು, ಮಹಿಳೆಯೊಬ್ಬರು ಓಟಿಪಿ ಶೇರ್​ ಮಾಡುವ ಮೂಲಕ ಬರೋಬ್ಬರಿ 1 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಅಷ್ಟಕ್ಕೂ 1 ಲಕ್ಷ ಹೇಗೆ ಕಳೆದುಕೊಂಡರು ಎಂದು ತಿಳಿಬೇಕಾದರೆ ಈ ಲೇಖನವನ್ನು ಓದಿ.


    ಅಷ್ಟಕ್ಕೂ ಏನಾಯ್ತು?


    ಪಿಟಿಐ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಗುರುಗ್ರಾಮದಲ್ಲಿ ಮಾಧ್ವಿ ದತ್ತಾ ಎಂಬ ಮಹಿಳೆಯೊಬ್ಬರು ವಾಸ ಮಾಡುತ್ತಿದ್ದರು. ಇವರಿಗೆ ಜನವರಿ 21 ರಮದು ತನ್ನ ಮೊಬೈಲ್​ನ ಇನ್​ಬಾಕ್ಸ್​ಗೆ ಬ್ಯಾಂಕ್​ಗೆ ಸಂಬಂಧಪಟ್ಟ ಒಂದು ಎಸ್​ಎಮ್​ಎಸ್​ ಬರುತ್ತದೆ. ಆ ಎಸ್​ಎಮ್​ಎಸ್​​ನಲ್ಲಿ ‘ನಿಮ್ಮ ಹೆಚ್​​ಡಿಎಫ್​​ಸಿ ಬ್ಯಾಂಕ್ ಅಕೌಂಟ್​ನ ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತದೆ, ತಕ್ಷಣವೇ ಈ ಕ್ಲಿಕ್​ ಮಾಡಿ ಮತ್ತು ನಿಮ್ಮ ಫೋನ್ ನಂಬರ್, ಪಾನ್​ ಕಾರ್ಡ್​​ ನಂಬರ್​ಗೆ ಲಿಂಕ್​ ಮಾಡಿ‘ ಎಂದು ಬರೆದಿರುತ್ತದೆ.




    ಆದರೆ ಇದು ಅಧಿಕೃತ ಬ್ಯಾಂಕ್​​ನಿಂದ ಮೆಸೇಜ್ ಆಗಿರುವುದಿಲ್ಲ. ಆದರೆ ಬ್ಯಾಂಕ್​ನಿಂದಲೇ ಬಂದ ಮೆಸೇಜ್​ ಎಮದು ನಂಬಿದ ಮಹಿಳೆ ಆ ಲಿಂಕ್​ಗೆ ಕ್ಲಿಕ್ ಮಾಡುತ್ತಾರೆ. ಆಗ ಒಂದು ವೆಬ್​ ಪೇಜ್​ ಓಪನ್ ಆಗುತ್ತದೆ. ಅದರಲ್ಲಿ ನೀಡಿದ ಮಾಹಿತಿಗಳಿಗೆ ತಕ್ಕಂತೆ ವಿವರಗಳನ್ನು ಭರ್ತಿ ಮಾಡುತ್ತಾರೆ. ನಂತರ ಓಟಿಪಿ ನಮೂದಿಸಲು ಕೇಳುತ್ತಾರೆ. ಓಟಿಪಿ ನಮೂದಿಸಿದ ತಕ್ಷಣವೇ ಮಾಧ್ವಿ ದತ್ತಾ ಅವರ ಬ್ಯಾಂಕ್​ ಖಾತೆಯಿಂದ 1 ಲಕ್ಷ ಹಣ ಖಾಲಿಯಾಗುತ್ತದೆ.


    ಈ ಬಗ್ಗೆ ಮಹಿಳೆಯ ಪ್ರತಿಕ್ರಿಯೆ


    ಈ ಸೈಬರ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ, ‘ನಾನು ಓಟಿಪಿ ಹಾಕಿದ ತಕ್ಷಣ 1 ಲಕ್ಷ ರೂಪಾಯಿ ನನ್ನ ಖಾತೆಯಿಂದ ಕಳೆದುಕೊಂಡಿದ್ದೇನೆ. ಕೂಡಲೇ ಸೈಬಲ್ ಸಹಾಯವಾಣಿ 1930 ಗೆ ಕರೆ ಮಾಡಿದೆ. ಆದರೆ, ಅವರಿಂದ ನನಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ತಕ್ಷಣವೇ ಸೈಬಲ್ ಠಾಣೆಗೆ ತೆರಳಿ ದೂರು ನೀಡಿದೆ,” ಎಂದು ಹೇಳಿದ್ದಾರೆ.


    ಸಾಂಕೇತಿಕ ಚಿತ್ರ


    6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು


    ಭಾರತದಲ್ಲಿ ಆಗಸ್ಟ್​ 2019 ರಿಂದ ಡಿಸೆಂಬರ್​ 12, 2022 ರವರೆಗೆ ಸೈಬರ್​ ವಂಚನೆಯ ದೂರುಗಳು 6 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಠಾಣೆಗಳಲ್ಲಿ ದಾಖಲಾಗಿವೆ ಎಂದು ವರದಿಯಾಗಿದೆ. ಇನ್ನು ಇದರಲ್ಲಿ 1 ಲಕ್ಷದ 11 ಸಾವಿರ ದೂರುಗಳಲ್ಲಿ 188 ಸಾವಿರ ಕೋಟಿ ರೂಪಾಯಿ ಹಣವನ್ನು ವಂಚಕರಿಂದ ಮರುಪಡೆದುಕೊಂಡು ಉಳಿಸಲಾಗಿದೆ ಎಂದು ಹೇಳಿದ್ದಾರೆ.


    ಇದನ್ನೂ ಓದಿ: ಐಫೋನ್​ ಬಳಕೆದಾರರಿಗೆ ಅಚ್ಚರಿಯ ಫೀಚರ್​ ಬಿಡುಗಡೆ ಮಾಡಿದ ವಾಟ್ಸಾಪ್​! ಹೇಗಿದೆ ಗೊತ್ತಾ?


    1930 ಕ್ಕೆ ಕರೆ ಮಾಡಿ


    ಈ ಸೈಬರ್​ ವಂಚನೆಗೆ ಒಳಗಾಗಿ ಯಾರಾದರೂ ಹಣ ಕಳೆದುಕೊಂಡರೆ ತಕ್ಷಣ ಪೊಲೀಸ್​ ಕಂಟ್ರೋಲ್​ ರೂಂ ನಂಬರ್ ಆದ 1930 ಕ್ಕೆ ಕರೆ ಮಾಡಬೇಕು. ಇಲ್ಲಿ ಸೈಬರ್​ ಕ್ರೈಂ ಪೊಲೀಸ್​ ವಿಭಾಗದ ಸಿಬ್ಬಂದಿ ಪ್ರಕರಣವನ್ನು ದಾಖಲಿಸಿಕೊಂಡು, ನಿಮ್ಮ ವಿವರಗಳನ್ನು ಪರಿಶೀಲಿಸಿ ಹ್ಯಾಕ್ ಆದ ಖಾತೆಯನ್ನು ತಕ್ಷಣ ಬ್ಲಾಕ್ ಮಾಡುತ್ತಾರೆ. ಈ ಸಂದರ್ಭದಲ್ಲಿ ಯಾರಿಗೂ ನಿಮ್ಮ ಬ್ಯಾಂಕ್ ಅಕೌಂಟ್​​ನಿಂದ ಹಣವನ್ನು ತೆಗೆಯಲು ಸಾಧ್ಯವಾಗುವುದಿಲ್ಲ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು