ನಕಲಿ ಸುದ್ಧಿಗೆ ಪರಿಹಾರ ನೀಡುವವರಿಗೆ ಸಿಗುತ್ತೆ 50 ಸಾವಿರ ಡಾಲರ್!
Updated:July 6, 2018, 11:24 AM IST
Updated: July 6, 2018, 11:24 AM IST
ನವದೆಹಲಿ: ಕಳೆದ ಒಂದು ವರ್ಷದಿಂದ ವಾಟ್ಸಾಪ್ನಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಸಂಖ್ಯೆ ಏರುತ್ತಲೇ ಇವೆ. ಕೆಲ ದಿನಗಳ ಹಿಂದೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಯಿಂದ ಕನಿಷ್ಟ 10ಕ್ಕೂ ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಇಂತಹ ಘಟನೆಯನ್ನು ತಡೆಗಟ್ಟಲು ಮುಂದಾದ ವಾಟ್ಸಾಫ್ ಇದೀಗ ಹೊಸ ಯೋಜನೆ ರೂಪಿಸಿದೆ.
ಫೇಸ್ಬುಕ್ ಸ್ವಾಮ್ಯದ ವಾಟ್ಸಾಪ್ ಮಕ್ಕಳ ಕಳ್ಳರು ವದಂತಿಯಂತಹ ಸುದ್ದಿಯನ್ನು ತಡೆಗಟ್ಟಲು ಪೂರ್ಣ ಪ್ರಮಾಣದ ಸಲಹೆ ಹಾಗೂ ಪರಿಹಾರ ನೀಡುವ ತಜ್ಞರಿಗೆ 50 ಸಾವಿರ ಡಾಲರ್ ಬಹುಮಾನ ಘೋಷಿಸಿದೆ. 'ಇಂತಹ ಮಾಹಿತಿಯನ್ನು ತಡೆಗಟ್ಟುವ ತಜ್ಞರಿಗೆ ವಾಟ್ಸಾಪ್ ತಾಂತ್ರಿಕ ವಿಭಾಗದಿಂದ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಇದರ ಸಂಪೂರ್ಣ ಹೊಣೆಯನ್ನು ತಜ್ಞರೇ ಹೊತ್ತುಕೊಳ್ಳಬೇಕು ಎಂದು ವಾಟ್ಸಾಪ್ ಹೇಳಿದೆ.
ವಾಟ್ಸಾಪ್ನ ಬಳಕೆ ಹೆಚ್ಚಾಗಿರುವ ದೇಶಗಳಾಗಿರುವ ಭಾರತ, ಬ್ರೆಜಿಲ್, ಇಂಡೋನೇಶಿಯಾ, ಮೆಕ್ಸಿಕೋದಂತಹ ರಾಷ್ಟ್ರದ ತಜ್ಞರು ಈ ಯೋಜನೆಯಲ್ಲಿ ಭಾಗವಹಿಸಬಹುದು. ಇಲ್ಲಿ ಭಾಗವಹಿಸುವವರಿಗೆ ಎರಡು ದಿನದ ಕಾರ್ಯಗಾರವನ್ನು ವಾಟ್ಸಾಪ್ ನಡೆಸಿಕೊಡುತ್ತದೆ. ಮೊದಲನೆ ದಿನದಂದು ವಾಟ್ಸಾಪ್ನ ವ್ಯಾಪ್ತಿ ಕುರಿತು ಹೇಳಿದರೆ ಎರಡನೇ ದಿನದಂದು ತಜ್ಞರ ಅಭಿಪ್ರಾಯವನ್ನು ಸ್ವೀಕರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿಕೊಂಡಿದೆ.
ಕಳೆದ ಒಂದು ವಾರದಲ್ಲಿ ವಾಟ್ಸಾಪ್ನಲ್ಲಿ ಹರಡಿದ ನಕಲಿ ಸುದ್ದಿಯಿಂದ ಸುಮಾರು 15ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಂತಹ ಸುದ್ದಿಗಳಿಗೆ ಕಡಿವಾಣ ಹಾಕಲು ಸಂಸ್ಥೆ ವಿಫಲವಾಗಿರುವುದನ್ನು ಖಂಡಿಸಿದ ಭಾರತ ಸರಕಾರ ಕೂಡಲೇ ಪರಿಹಾರ ನೀಡುವಂತೆ ತಾಕೀತು ಮಾಡಿತ್ತು.
ಫೇಸ್ಬುಕ್ ಸ್ವಾಮ್ಯದ ವಾಟ್ಸಾಪ್ ಮಕ್ಕಳ ಕಳ್ಳರು ವದಂತಿಯಂತಹ ಸುದ್ದಿಯನ್ನು ತಡೆಗಟ್ಟಲು ಪೂರ್ಣ ಪ್ರಮಾಣದ ಸಲಹೆ ಹಾಗೂ ಪರಿಹಾರ ನೀಡುವ ತಜ್ಞರಿಗೆ 50 ಸಾವಿರ ಡಾಲರ್ ಬಹುಮಾನ ಘೋಷಿಸಿದೆ. 'ಇಂತಹ ಮಾಹಿತಿಯನ್ನು ತಡೆಗಟ್ಟುವ ತಜ್ಞರಿಗೆ ವಾಟ್ಸಾಪ್ ತಾಂತ್ರಿಕ ವಿಭಾಗದಿಂದ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಇದರ ಸಂಪೂರ್ಣ ಹೊಣೆಯನ್ನು ತಜ್ಞರೇ ಹೊತ್ತುಕೊಳ್ಳಬೇಕು ಎಂದು ವಾಟ್ಸಾಪ್ ಹೇಳಿದೆ.
ವಾಟ್ಸಾಪ್ನ ಬಳಕೆ ಹೆಚ್ಚಾಗಿರುವ ದೇಶಗಳಾಗಿರುವ ಭಾರತ, ಬ್ರೆಜಿಲ್, ಇಂಡೋನೇಶಿಯಾ, ಮೆಕ್ಸಿಕೋದಂತಹ ರಾಷ್ಟ್ರದ ತಜ್ಞರು ಈ ಯೋಜನೆಯಲ್ಲಿ ಭಾಗವಹಿಸಬಹುದು. ಇಲ್ಲಿ ಭಾಗವಹಿಸುವವರಿಗೆ ಎರಡು ದಿನದ ಕಾರ್ಯಗಾರವನ್ನು ವಾಟ್ಸಾಪ್ ನಡೆಸಿಕೊಡುತ್ತದೆ. ಮೊದಲನೆ ದಿನದಂದು ವಾಟ್ಸಾಪ್ನ ವ್ಯಾಪ್ತಿ ಕುರಿತು ಹೇಳಿದರೆ ಎರಡನೇ ದಿನದಂದು ತಜ್ಞರ ಅಭಿಪ್ರಾಯವನ್ನು ಸ್ವೀಕರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿಕೊಂಡಿದೆ.
ಕಳೆದ ಒಂದು ವಾರದಲ್ಲಿ ವಾಟ್ಸಾಪ್ನಲ್ಲಿ ಹರಡಿದ ನಕಲಿ ಸುದ್ದಿಯಿಂದ ಸುಮಾರು 15ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಂತಹ ಸುದ್ದಿಗಳಿಗೆ ಕಡಿವಾಣ ಹಾಕಲು ಸಂಸ್ಥೆ ವಿಫಲವಾಗಿರುವುದನ್ನು ಖಂಡಿಸಿದ ಭಾರತ ಸರಕಾರ ಕೂಡಲೇ ಪರಿಹಾರ ನೀಡುವಂತೆ ತಾಕೀತು ಮಾಡಿತ್ತು.
Loading...