ಮೊಬೈಲ್ ಮಾರುಕಟ್ಟೆಯಲ್ಲಿ (Mobile Market) ದಿನದಿಂದ ದಿನಕ್ಕೆ ಏನಾದರೊಮದು ಹೊಸ ಸ್ಮಾರ್ಟ್ಫೊನ್ಗಳು ಬರುತ್ತಲೇ ಇದೆ. ಆದರೆ ಕೆಲವೊಂದು ಟೆಲಿಕಾಂ ಕಂಪನಿಗಳಾಗಿರುವ ಒನ್ಪ್ಲಸ್ (Oneplus), ರೆಡ್ ಮಿ (Redmi), ಸ್ಯಾಮ್ಸಂಗ್ (Samsung), ವಿವೋ (Vivo) ನಂತಹ ಕಂಪನಿಗಳು ತನ್ನ ಉತ್ಪನ್ನಗಳ ಮಾರಾಟದ ಬೆಳವಣಿಗೆಯಿಂದ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಆದರೆ ಇದೀಗ ವಿವೋ ಫೋನ್ಗಳ ರಫ್ತಿಗೆ (Export) ಭಾರತ ತಡೆಯಾಜ್ಞೆ ಮಾಡಿದೆ, ಇದರಿಂದ ಚೀನಾ ಕಂಪನಿ ಭಾರೀ ನಷ್ಟವನ್ನು ಹೊಂದಿದೆ ಎಂಬ ವರದಿಯಾಗಿದೆ. ಈ ವಿವೋ ಕಂಪನಿಯ ಅಡಿಯಲ್ಲಿ ಭಾರತದಲ್ಲಿ ಸ್ಮಾರ್ಟ್ಫೋನ್ಗಳನ್ನು ತಯಾರಿಸಿ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು ಆದರೆ ಈ ಕೆಲಸಗಳಿಗೆ ಇದೀಗ ಭಾರತ (India) ತಡೆಯೊಡ್ಡಿದೆ.
ವಿವೋ ಕಂಪನಿಯ ಅಡಿಯಲ್ಲಿ ಭಾರತದ ಘಟಕದಲ್ಲಿ ಸ್ಮಾರ್ಟ್ಫೋನ್ ಅನ್ನು ತಯಾರಿಸಿ ನೆರೆದೇಶಗಳಿಗೆ ರಫ್ತು ಮಾಡುತ್ತಿದ್ದರು. ಆದರೆ ಇದೀಗ ಈ ರಫ್ತಿಕೆ ಭಾರತ ತಡೆಯಾಜ್ಞೆ ಹೇಳಿದೆ. ಇದಕ್ಕೆ ಕಾರಣಗಳನ್ನು ಈ ಕೆಳಗೆ ಓದಿ.
27 ಸಾವಿರ ವಿವೋ ಸ್ಮಾರ್ಟ್ಫೋನ್ಗಳ ತಫ್ತಿಗೆ ತಡೆಯಾಜ್ಞೆ
ವಿವೋ ಕಮ್ಯುನಿಕೇಷನ್ಸ್ ಟೆಕ್ನಾಲಜಿ ಕಂಪನಿಯು ಭಾರತದ ಘಟಕದಲ್ಲಿ ತಯಾರಿಸಿ ನೆರೆ ದೇಶಗಳಿಗೆ ರಫ್ತು ಮಾಡಲು ಉದ್ದೇಶಿಸಿದ್ದ 27,000 ಸ್ಮಾರ್ಟ್ಫೋನ್ಗಳ ಸಾಗಾಟಕ್ಕೆ ಭಾರತ ತಡೆಯೊಡ್ಡಿದೆ ಎಂದು ಈ ನಿರ್ಧಾರವನ್ನು ಉದ್ದೇಶಿಸಿ ‘ಬ್ಲೂಮ್ಬರ್ಗ್’ ತಾಣ ವರದಿ ಮಾಡಿದೆ.
ಇದನ್ನೂ ಓದಿ: ಏರ್ಟೆಲ್ನಿಂದ ಹೊಸ ರೀಚಾರ್ಜ್ ಪ್ಲಾನ್; ಇಡೀ ಟೆಲಿಕಾಂ ಕಂಪನಿಗಳನ್ನೇ ಬೆಚ್ಚಿಬೀಳಿಸುವಂತಿದೆ ಈ ಯೋಜನೆ!
ರಫ್ತು ಮಾಡುವ ಉದ್ದೇಶದಿಂದ 27,000 ಸ್ಮಾರ್ಟ್ಫೋನ್ಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯುತ್ತಿದ್ದರು. ಅದನ್ನು ಗಮನಿಸಿದ ಹಣಕಾಸು ಇಲಾಖೆಯ ಅಧೀನ ಸಂಸ್ಥೆಯಾಗಿರುವ ಕಂದಾಯ ಗುಪ್ತಚರ ಘಟಕ ಹಿಡಿದು ಅದಕ್ಕೆ ತಡೆ ಹಾಕಿದೆ. ಇನ್ನು ಈ ಸ್ಮಾರ್ಟ್ಫೋನ್ಗಳು 1.5 ಕೋಟಿ ಡಾಲರ್ನಷ್ಟು ಮೌಲ್ಯವನ್ನು ಹೊಂದಿದೆ ಎಂದು ವರದಿಗಳು ತಿಳಿಸಿದೆ.
ಸ್ಮಾರ್ಟ್ಫೋನ್ಗಳ ರಫ್ತನ್ನು ತಡೆ ಮಾಡಲು ಕಾರಣವೇನು?
ಮುಖ್ಯವಾಗಿ ಈ ತಯಾರಿಸಿದ ಸ್ಮಾರ್ಟ್ಫೋನ್ಗಳ ಮಾದರಿಗಳನ್ನು ಮತ್ತು ಅದರ ಮೌಲ್ಯಗಳ ಬಗ್ಗೆ ತಪ್ಪಾದ ಮಾಹಿತಿಯನ್ನು ನೀಡಿದಕ್ಕಾಗಿ ಕಂದಾಯ ಗುಪ್ತಚರ ಇಲಾಖೆ ತಡೆಯಾಜ್ಞೆ ಹೇರಿದೆ ಎಂದು ಕೆಲವೊಂದು ವರದಿಗಳು ತಿಳಿಸಿವೆ. ಆದರೆ ಈ ರಫ್ತಿಗೆ ತಡೆಯಾಜ್ಞೆ ಹೇರಿರುವ ವಿಚಾರದ ಕುರಿತು ಹಣಕಾಸು ಸಚಿವಾಲಯವಾಗಲೀ, ವಿವೋ ಇಂಡಿಯಾ ಆಗಲೀ ಸದ್ಯಕ್ಕೆ ಯಾವುದೇ ರಿತಿಯ ಪ್ರತಿಕ್ರಿಯೆ ನೀಡಿಲ್ಲ.
ಈ ಕುರಿತು ಅಧ್ಯಕ್ಷ ಪಂಕಜ್ ಮೊಹಿಂದ್ರೂ ಅವರಿಂದ ಸಚಿವಾಲಯಕ್ಕೆ ಪತ್ರ
ಸರ್ಕಾರದ ಕ್ರಮ ಏಕಪಕ್ಷೀಯವಾಗಿದೆ. ಈ ರೀತಿಯ ನಿಲ್ಲಿಸಬೇಕಾದರೆ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ‘ಇಂಡಿಯಾ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್’ನ ಅಧ್ಯಕ್ಷರಾಗಿರುವ ಪಂಕಜ್ ಮೊಹಿಂದ್ರೂ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಕೇಂದ್ರ ಸಂಸ್ಥೆಗಳ ಇಂತಹ ಕ್ರಮದಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ರಫ್ತು ಮೇಲಿನ ಬೆಳವಣಿಗೆಗೆ ಈ ರೀತಿಯ ನಿರ್ಧಾರಗಳು ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆ ಇದನ್ನೂ ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗಲ್ವಾನ್ ಕಣಿವೆ ಘರ್ಷಣೆ ಬಳಿಕ ಕೇಂದ್ರದಿಂದ ಹದ್ದಿನ ಕಣ್ಣು
ಗಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದ ಬಳಿಕ ಚೀನಾ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಕೆಲವರ್ಷಗಳ ಹಿಂದೆ ಚೀನೀ ಅ್ಯಪ್ಗಳನ್ನು ಬ್ಯಾನ್ ಮಾಡಿತ್ತು. ಅದರ ಜೊತೆಗೆ ಸರ್ಕಾರ ಚೀನಾದ ಕೆಲವು ಕಂಪನಿಗಳ ಆದಾಯ ತೆರಿಗೆ ಇವುಗಳ ಮೇಲೆ ದಾಳಿ ಮಾಡಿ ಇಡೀ ಅಕ್ರಮವನ್ನು ಪತ್ತೆ ಹಚ್ಚಿತ್ತು.
ಭಾರತ ಘಟಕದಲ್ಲಿ ಮೊದಲ ಬಾರಿಗೆ ತಯಾರಿಸಿದ ಸ್ಮಾರ್ಟ್ಫೋನ್ಗಳನ್ನು ವಿವೋ ಸೌದಿ ಅರೇಬಿಯಾ ಮತ್ತು ಥಾಯ್ಲೆಂಡ್ಗೆ ರಫ್ತು ಮಾಡಿತ್ತು. ಆದರೆ ವಿವೋ ಕಂಪನಿಯ ಕೆಲವೊಂದು ಹಣಕಾಸು ವ್ಯವಹಾರದಲ್ಲಾದ ಅಕ್ರಮದಿಂದ ಸರ್ಕಾರ ಕಂಪನಿಯ ಮೇಲೆ ಕಣ್ಣಿಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ