• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕೊರೋನಾ ಉಲ್ಬಣಗೊಂಡ ಸಮಯದಲ್ಲೂ ಪಾದ ಪೂಜೆ ಮಾಡಿಸಿಕೊಂಡ ಶಾಸಕ ಜಮೀರ್ ಅಹ್ಮದ್

ಕೊರೋನಾ ಉಲ್ಬಣಗೊಂಡ ಸಮಯದಲ್ಲೂ ಪಾದ ಪೂಜೆ ಮಾಡಿಸಿಕೊಂಡ ಶಾಸಕ ಜಮೀರ್ ಅಹ್ಮದ್

ಪಾದ ಪೂಜೆ ಮಾಡಿಸಕೊಂಡ ಜಮೀರ್​

ಪಾದ ಪೂಜೆ ಮಾಡಿಸಕೊಂಡ ಜಮೀರ್​

ಜಮೀರ್ ಅಹಮದ್ ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಗಳ ಶವ ಸಂಸ್ಕಾರವನ್ನ ಉಚಿತವಾಗಿ ನೆರವೇರಿಸಲು ಸಹಾಯ ಮಾಡುತ್ತಿದ್ದಾರಂತೆ. ಅದಕ್ಕಾಗಿ ಶಾಸಕ ಜಮೀರ್ ಅಹಮದ್ ಗೆ ಸನ್ಮಾನ ಮಾಡಿದ್ದಾರೆ ಎನ್ನಲಾಗಿದೆ.

  • Share this:

ಬೆಂಗಳೂರು (ಜು.1): ನಗರದಲ್ಲಿ ಕೊರೋನಾ ಸೋಂಕು ಮುಗಿಲು ಮುಟ್ಟುತ್ತಿರುವ ಸಮಯದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕಾಲು ತೊಳೆದು, ಹೂ ಹಾಕಿ ಪಾದಪೂಜೆ ಮಾಡಿಸಿಕೊಂಡಿದ್ದಾರೆ. ಕಳೆದ ಭಾನುವಾರ ಕೆಂಪೇಗೌಡನಗರದ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಜಮೀರ್ ಅಹ್ಮದ್ ಅದ್ದೂರಿ ಸನ್ಮಾನ ಮಾಡಿ ಕೊವೀಡ್ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.

ಲಾಕ್ ಡೌನ್ ಜಾರಿ ಬಳಿಕ ಸದಾ ಒಂದಲ್ಲೊಂದು ವಿವಾದಗಳಲ್ಲಿ ಸಿಲುಕಿರುವ ಜಮೀರ್ ಅಹ್ಮದ್ ಈಗ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ನಗರದಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಎಲ್ಲೆಡೆ ಅಬ್ಬರಿಸುತ್ತಿರುವ ವೇಳೆಯಲ್ಲಿ ಜಮೀರ್ ತಮ್ಮ ಬೆಂಬಲಿಗರಿಂದ ಸನ್ಮಾನ ಮಾಡಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

ಜಮೀರ್ ಅಹ್ಮದ್ ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಗಳ ಶವ ಸಂಸ್ಕಾರವನ್ನ ಉಚಿತವಾಗಿ ನೆರವೇರಿಸಲು ಸಹಾಯ ಮಾಡುತ್ತಿದ್ದಾರಂತೆ. ಅದಕ್ಕಾಗಿ ಜಮೀರ್ ಅಹಮದ್ ಗೆ ಸನ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಜೂನ್ 28ರಂದು ಕಾರ್ಯಕ್ರಮ ಆಯೋಜಿಸಿ ಪಾದಪೂಜೆ ಮಾಡಿದ್ದ ಬೆಂಬಲಿಗರು ಜಮೀರ್ ಮೇಲೆ ಹೂ ಸುರಿಮಳೆಗೈದು ಬಳಿಕ ಪಾದಪೂಜೆ ಮಾಡಿದ್ರು. ಪಾದಪೂಜೆ ವೇಳೆ ಅಪಾರ ಬೆಂಬಲಿಗರು ಗುಂಪಗೂಡಿದ್ದು ಸಾಮಾಜಿಕ ಅಂತರವಿಲ್ಲದೆ ಸನ್ಮಾನ ಮಾಡ್ತಿದ್ದದ್ದು ಕಂಡು ಬಂದಿತ್ತು.

ಇದನ್ನೂ ಓದಿ: ಪಾದರಾಯನಪುರ ಗಲಾಟೆಯ ಆರೋಪಿಗಳಿಗೆ ಜಮೀರ್​ ಅಹ್ಮದ್ ಅದ್ದೂರಿ ಸ್ವಾಗತ​!


ಬಳಿಕ ಸನ್ಮಾನದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನೂ ರಾಜ್ಯದಲ್ಲಿ ಕೊರೊನಾ ಉಲ್ಬಣಗೊಂಡಿದ್ದು ಇಂತಹ ಸಮಯದಲ್ಲಿ ಜಮೀರ್ ಅವರ ಪಾದಪೂಜೆ ಕಾರ್ಯಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೊವೀಡ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಶಾಸಕ ಜಮೀರ್ ಅಹ್ಮದ್ ಹಾಗೂ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಡಗಳು ಹೆಚ್ಚಾಗಿದ್ದು ಪೊಲೀಸರು ಏನು ಕ್ರಮ ಕೈಗೊಳ್ತಾರೆ ಅನ್ನೋದು ಕಾದು ನೋಡಬೇಕಿದೆ.

ದಾಖಲಾಗಿಲ್ಲ ದೂರು:

ಕೆಂಪೇಗೌಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯ 5ನೇ ಹಂತದಲ್ಲಿರುವ ಶ್ರೀನಿವಾಸ ಕಲ್ಯಾಣ ಮಂದಿರದಲ್ಲಿ ಮರಿಯಪ್ಪ‌ ಎಂಬುವವರಿಂದ  ಜೂನ್ 28ರಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಘಟನೆ ಸಂಬಂಧ ಇದುವರೆಗೂ ಯಾವುದೇ ದೂರು, ಕೇಸ್ ದಾಖಲಾಗಿಲ್ಲ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು