• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಯುವತಿಗೆ ಮೆಸೇಜ್‌ ಮಾಡಿದ ಯುವಕನನ್ನು ಮನೆಗೆ ಕರೆಸಿ ಹಲ್ಲೆ! ಕಿಡ್ನಾಪ್ ಮಾಡಿ, ಕೊಲೆ ಮಾಡಿದ್ದಾರೆಂದು ಪೋಷಕರಿಂದ ದೂರು

Crime News: ಯುವತಿಗೆ ಮೆಸೇಜ್‌ ಮಾಡಿದ ಯುವಕನನ್ನು ಮನೆಗೆ ಕರೆಸಿ ಹಲ್ಲೆ! ಕಿಡ್ನಾಪ್ ಮಾಡಿ, ಕೊಲೆ ಮಾಡಿದ್ದಾರೆಂದು ಪೋಷಕರಿಂದ ದೂರು

ಗೋವಿಂದರಾಜು

ಗೋವಿಂದರಾಜು

ಅಂಧ್ರಹಳ್ಳಿ ನಿವಾಸಿ ಗೋವಿಂದ ರಾಜ್ ಮತ್ತಿಕೆರೆಯ 20 ವರ್ಷದ ಯುವತಿಗೆ ಮೆಸೇಜ್ ಮಾಡಿದ್ದ. ಆದರೆ ಯುವತಿ ಮೊಬೈಲ್‌ ಮನೆಯಲ್ಲೆ ಬಿಟ್ಟು ಕಾಲೇಜಿಗೆ ತೆರಳಿದ್ದರಿಂದ ಆ ಮೆಸೇಜ್​ ಅನ್ನು ಯುವತಿಯ ಸೋದರ ಮಾವನ ಮಗ ಅನಿಲ್ ಎಂಬಾತ ನೋಡಿ, ಗೋವಿಂದರಾಜ್​ಗೆ ಕರೆ ಮಾಡಿ ವಿಚಾರಿಸಿದ್ದಾನೆ. ನಂತರ ಮಾತಾಡಬೇಕು ಬಾ ಎಂದು ಕರೆಸಿಕೊಂಡು ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಯುವತಿಗೆ ಮೆಸೇಜ್ (Massage) ಮಾಡಿದ್ದಕ್ಕಾಗಿ ಆಕೆಯ ಮನೆಯವರು ಯುವಕನೊಬ್ಬನನ್ನು ಅಪಹರಿಸಿ (Kidnap) ಕೊಲೆ (Murder) ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಯುವಕನ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ. ಆಂಧ್ರಹಳ್ಳಿ ನಿವಾಸಿ 20 ವರ್ಷದ ಗೋವಿಂದ ರಾಜ್​ ಎಂಬಾತನನ್ನು ಅಪಹರಿಸಲಾಗಿದೆ. ಇದುವರೆಗೂ ಆತ ಪತ್ತೆಯಾಗದ ಕಾರಣ, ಯುವತಿ ಕಡೆಯವರು ಏನೋ ಮಾಡಿರಬಹುದು ಎಂಬ ಆತಂಕದಲ್ಲಿ ಪೋಷಕರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


    ಆಂಧ್ರಹಳ್ಳಿ ನಿವಾಸಿ ಗೋವಿಂದ ರಾಜ್ ಮತ್ತಿಕೆರೆಯ 20 ವರ್ಷದ ಯುವತಿಗೆ ಮೆಸೇಜ್ ಮಾಡಿದ್ದ. ಆದರೆ ಯುವತಿ ಮೊಬೈಲ್‌ ಮನೆಯಲ್ಲೇ ಬಿಟ್ಟು ಕಾಲೇಜಿಗೆ ತೆರಳಿದ್ದರಿಂದ ಆ ಮೆಸೇಜ್​ ಅನ್ನು ಯುವತಿಯ ಸೋದರ ಮಾವನ ಮಗ ಅನಿಲ್ ಎಂಬಾತ ನೋಡಿ, ಗೋವಿಂದರಾಜ್​ಗೆ ಕರೆ ಮಾಡಿ ವಿಚಾರಿಸಿದ್ದಾನೆ. ನಂತರ ಮಾತಾಡಬೇಕು ಬಾ ಎಂದು ಕರೆಸಿಕೊಂಡು ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.


    ಕಿಡ್ನಾಪ್ ಮಾಡಿದ್ದಾರೆಂಬ ಆರೋಪ


    ಮಾತಾಡಬೇಕೆಂದು ಗೋವಿಂದರಾಜ್​ನನ್ನ ಕರೆಸಿಕೊಂಡ ಅನಿಲ್​ ಮನಬಂದಂತೆ ಥಳಿಸಿದ್ದಾನೆ ಎನ್ನಲಾಗಿದೆ. ನಂತರ ಅನಿಲ್ ತಾಯಿ ಗೋವಿಂದರಾಜು ಮನೆಗೆ ಕರೆ ಮಾಡಿ ನಿಮ್ಮ ಮಗನನ್ನು ಕರೆದುಕೊಂಡು ಬಂದು ಹೊಡೆದಿದ್ದಾರೆ. ಬೇಗ ಬಂದು ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಮತ್ತೆ ಗೋವಿಂದರಾಜು ಪೋಷಕರು ಕರೆ ಮಾಡಿದಾಗ ಅನಿಲ್‌ನ ತಾಯಿ ಮೊದಲು ನಿಮ್ಮ ಮಗನನ್ನ ಬಿಟ್ಟು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ ಕರೆ ಮಾಡಿ, ನಿಮ್ಮ ಮಗ ಒಂದೆರಡು ಏಟಿ ಹೊಡೆದಿದ್ದಕ್ಕೆ ಸತ್ತೇ ಹೋದ ಅಂತಾ ಹೇಳಿದ್ದಾರೆ. ಮಗ ಎಲ್ಲಿದ್ದಾನೆ ಎಂದು ಎಷ್ಟು ಕೇಳಿದರೂ ಅನಿಲ್ ಕಡೆಯವರು ಏನೂ ಮಾಹಿತಿ ನೀಡುತ್ತಿಲ್ಲ ಎಂದು ಗೋವಿಂದರಾಜು ಪೋಷಕರು ಗೋಳಾಡುತ್ತಿದ್ದಾರೆ.


    ಯಶವಂತಪುರ ಠಾಣೆಯಲ್ಲಿ ದೂರು


    ಅನಿಲನ ತಾಯಿ ಗೋವಿಂದರಾಜ್ ಸತ್ತೇ ಹೋದ ಎಂದು ಹೇಳಿದ್ದರಿಂದ ಹೆದರಿದ ಗೋವಿಂದರಾಜನ ಪೋಷಕರು ಸೀದಾ ಯಶವಂತಪುರ ಠಾಣೆಗೆ ಬಂದು ದೂರು ನೀಡಿದ್ದಾರೆ. ಆದರೆ ಇದು ಕೇವಲ ಕಿಡ್ನಾಪ್ ಪ್ರಕರಣವೇ ಅಥವಾ ಕೊಲೆಯಾಗಿದಿಯೋ ಎಂಬುದು ಇನ್ನೂ ಬಗೆಹರಿದಿಲ್ಲಾ. ಈ‌ ಅನುಮಾನದಲ್ಲೇ ಪೊಲೀಸರು ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


     youth kidnapped and assaulted massaging a girl in bengaluru
    ಗೋವಿಂದರಾಜು


    ಪೊಲೀಸ್​ನಿಂದ ಪಾರ್ಕ್​ನಲ್ಲಿ ಕುಳಿತಿದ್ದ ಯುವತಿಯಿಂದ ಹಣ ವಸೂಲಿ ಆರೋಪ


    ವಾಯುವಿಹಾರಕ್ಕೆಂದು ಉದ್ಯಾನವನಕ್ಕೆ ಬಂದು ಕುಳಿತಿದ್ದ ಯುವಕ-ಯುವತಿಯನ್ನು ಹೆದರಿಸಿ 1000 ರೂ ವಸೂಲಿ ಮಾಡಿದ್ದ ಹೋಮ್​ಗಾರ್ಡ್​ ಸಿಬ್ಬಂದಿಯನ್ನು ಎಚ್​ಎಲ್ ಪೊಲೀಸರು ಬಂಧಿಸಿದ್ದಾರೆ. ಜನವರಿ 29ರಂದು ವೈಟ್​ ಫೀಲ್ಡ್​ನ ಕುಂದನವಳ್ಳಿ ಲೇಕ್​ ಪಾರ್ಕ್​ನಲ್ಲಿ ಈ ಘಟನೆ ನಡೆದಿದೆ.




    ಪಾರ್ಕ್​ನಲ್ಲಿ ಕುಳಿತಿದ್ದಾಗ ಬೆದರಿಸಿ ದುಡ್ಡು ವಸೂಲಿ


    ಯುವತಿ ಹಾಗೂ ಆತನ ಸ್ನೇಹಿತ ಪಾರ್ಕ್​ನಲ್ಲಿ ಕುಳಿತಿದ್ದರಂತೆ, ಆಗ ಅಲ್ಲಿಗೆ ಬಂದ ಪೊಲೀಸ್​, ಹೆಸರು, ವೃತ್ತಿ, ಊರು ಮತ್ತು ಇಲ್ಲಿ ಯಾಕೆ ಬಂದಿದ್ದೀರಿ ಎಂದು ವಿಚಾರಿಸಿದ್ದಾನೆ. ನಂತರ ಅನುಮತಿ ಇಲ್ಲದೆ ಕುಳಿತಿದ್ದಕ್ಕೆ 1000 ರೂ. ದಂಡ ಕಟ್ಟುವಂತೆ ಹೇಳಿದರು. ಆಗ ಯುವತಿ ನಾವೇನು ತಪ್ಪು ಮಾಡಿಲ್ಲ ನಾವೇಕೆ ದಂಡ ಕಟ್ಟಬೇಕು ಎಂದಿದ್ದಾಳೆ. ಅದಕ್ಕೆ ಪೊಲೀಸ್​ ನೀವು ಅನುಮತಿ ಇಲ್ಲದೆ ಇಲ್ಲಿ ಕುಳಿತಿದ್ದೀರಿ ಮತ್ತು ನೀವು ಧೂಮಪಾನ ಮಾಡುತ್ತಿದ್ದೀರಾ ಎಂದು ಹೇಳಿದ್ದಾರೆ.


    ಅದಕ್ಕೆ ಯುವತಿ ನಮ್ಮ ಬಳಿ ಸಿಗರೇಟ್​ ಇಲ್ಲ, ಸುಮ್ಮನೆ ಕುಳಿತಿದ್ದೇವೆ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಪೊಲೀಸ್​​ ತನ್ನ ವಿಚಾರಣೆ ಮುಂದುವರೆಸಿದ್ದಾನೆ. ನೀವು ಅನುಮತಿ ಇಲ್ಲದೆ ಕುಳಿತಿರುವುದು ತಪ್ಪು,  ಹೀಗಾಗಿ ನೀವು ಪೊಲೀಸ್​ ಠಾಣೆಗೆ ಬನ್ನಿ ಎಂದಿದ್ದಾರೆ. ನಂತರ ಠಾಣೆಗೆ ಬಂದರೇ ಹಿರಿಯ ಅಧಿಕಾರಿಗಳಿಗೆ ಉತ್ತರಿಸಬೇಕಾಗುತ್ತದೆ. 1000 ರೂ. ನೀಡಿ ಇಲ್ಲೇ ಸರಿಪಡಿಸಿಕೊಳ್ಳಬಹುದು ಎಂದು ಹೆದರಿಸಿದ್ದಾನೆ.


    ಪೊಲೀಸ್​ ಅಲ್ಲ, ಆತ ಹೋಮ್​ಗಾರ್ಡ್


    ಕೊನೆಗೆ ವಿಧಿ ಇಲ್ಲದೆ 1000 ರೂ. ಕೊಟ್ಟಿದ್ದೇವೆ ಎಂದಿರುವ ಯುವತಿ, ಘಟನೆ ಜೊತೆಗೆ ಪೊಲೀಸ್​ನ ಬೈಕ್​ ನಂಬರ್​ ಪ್ಲೇಟ್​​ನ್ನು ಫೋಟೋ ತೆಗೆದು, ಟ್ವಿಟರ್​ನಲ್ಲಿ ಬೆಂಗಳೂರು ಕಮಿಷನರ್​ ಮತ್ತು ಕಮಿಷನರ್​ ಆಫೀಸ್​​ಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದರು. ಇದು ವೈರಲ್ ಆದ ನಂತರ ಹಿರಿಯ ಪೊಲೀಸ್​ ಅಧಿಕಾರಿಗಳು ತನಿಖೆ ನಡೆಸಿದ್ದು, ಯುವತಿಯಿಂದ ದುಡ್ಡು ಪೀಕಿದವ ಪೊಲೀಸ್​ ಅಲ್ಲ, ಬಿಬಿಎಂಪಿ ನಿಯೋಜಿಸಿದ್ದ ಹೋಮ್​ಗಾರ್ಡ್ ತಿಳಿದುಬಂದಿದೆ. ನಂತರ ಆತನನ್ನು ಬಂಧಿಸಿರುವುದಾಗಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಸ್ಪಷ್ಟನೆ ನೀಡಿದ್ದಾರೆ.

    Published by:Rajesha B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು