• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಹಾಡಹಗಲೇ ಯುವತಿ ಕತ್ತಿಗೆ ಡ್ರ್ಯಾಗರ್ ಹಿಡಿದ; ಇತ್ತ ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯ ಅಪಹರಣ

Crime News: ಹಾಡಹಗಲೇ ಯುವತಿ ಕತ್ತಿಗೆ ಡ್ರ್ಯಾಗರ್ ಹಿಡಿದ; ಇತ್ತ ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯ ಅಪಹರಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Shivamogga Kidnap Case: ಕರೆ ಮಾಡಿದ ಅಪಹರಣಕಾರರು ಯುವತಿಯ ಕುಟುಂಬಸ್ಥರಿಗೆ 20 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇರಿಸಿದ್ದಾರೆ. ಈ ಸಂಬಂಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಯುವತಿ ಪೋಷಕರು ದೂರು ದಾಖಲಿಸಿದ್ದಾರೆ.

  • News18 Kannada
  • 4-MIN READ
  • Last Updated :
  • Karnataka, India
  • Share this:

ಬೆಂಗಳೂರು: ರಾಜಧಾನಿಯಲ್ಲಿ ಹಾಡಹಗಲೇ ದುಷ್ಕರ್ಮಿಯೋರ್ವ ಯುವತಿಗೆ ಡ್ರ್ಯಾಗರ್ ಹಿಡಿದು ಬೆದರಿಕೆ (Threat) ಹಾಕಿದ್ದಾನೆ. ಈ ಘಟನೆ ಬೆಂಗಳೂರಿನ (Bengaluru) ಪುಲಿಕೇಶಿನಗರದ ವಿವೇಕಾನಂದನಗರ ರೆಸಿಡೆನ್ಸಿ ಬಳಿ ನಡೆದಿದೆ. ದುಷ್ಕರ್ಮಿ ಯುವತಿಗೆ ಬೆದರಿಕೆ ಹಾಕಿರುವ ದೃಶ್ಯಗಳು ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Footage) ಸೆರೆಯಾಗಿವೆ. ಯುವತಿಯ ಬೆನ್ನಟ್ಟುತ್ತಾ ಬಂದು ಡ್ರ್ಯಾಗರ್ ಹಿಡಿದು ಬೆದರಿಕೆ ಹಾಕಿದ್ದಾನೆ. ಯುವತಿ ಸಹಾಯಕ್ಕೆ ಕೂಗಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಮತ್ತು ವ್ಯಕ್ತಿಯೋರ್ವ ಬಂದಿದ್ದಾರೆ. ಕೂಡಲೇ ಯುವತಿಯನ್ನು ತಳ್ಳಿದ ಅಪರಿಚಿತ ಸ್ಥಳದಿಂದ ಎಸ್ಕೇಪ್ ಆಗುವಲ್ಲಿ ಯಶಸ್ವಿಯಾಗಿದ್ದಾನೆ. ಘಟನೆ ಸಂಬಂಧ ಯುವತಿ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.


ಶಿವಮೊಗ್ಗದಲ್ಲಿ ಯುವತಿಯ ಅಪಹರಣ


ಶಿವಮೊಗ್ಗದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಯುವತಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಲಾಗಿದೆ. ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದ ಸವಿತಾ (ಹೆಸರು ಬದಲಾಯಿಸಲಾಗಿದೆ) ಅಪಹರಣಕ್ಕೊಳಗಾದ ಯುವತಿ. ಅಪಹರಣಕಾರರು ಯುವತಿಯ ದೂರವಾಣಿ ಸಂಖ್ಯೆಯಿಂದಲೇ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ಕರೆ ಮಾಡಿದ್ದಾರೆ.


ಕರೆ ಮಾಡಿದ ಅಪಹರಣಕಾರರು ಯುವತಿಯ ಕುಟುಂಬಸ್ಥರಿಗೆ 20 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇರಿಸಿದ್ದಾರೆ. ಈ ಸಂಬಂಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಯುವತಿ ಪೋಷಕರು ದೂರು ದಾಖಲಿಸಿದ್ದಾರೆ.




ರಾಯಚೂರು: ಇಬ್ಬರು ನೀರುಪಾಲು


ತುಂಗಭದ್ರಾ ನದಿ ಬಳಿಯಲ್ಲಿ ಭತ್ತದ ರಾಶಿ ಮಾಡಲು ಹೋಗಿ ಇಬ್ಬರು ನೀರುಪಾಲಾಗಿದ್ದಾರೆ. ರಾಯಚೂರಿನ ಸಿಂಧನೂರು ತಾಲೂಕಿನ ದಡೇಸುಗೂರು ಬಳಿ ಈ ಘಟನೆ ನಡೆದಿದೆ.


ಇದನ್ನೂ ಓದಿ:  Karnataka CM: ಹೈಕಮಾಂಡ್​​ಗೆ ‘ಡಿಕೆ’ ಕಂಡೀಷನ್ಸ್​; ಸಿದ್ದರಾಮಯ್ಯಗೆ ಸಾಥ್​ ಕೊಟ್ಟವರಿಗೆ ಶಾಕ್ ಕೊಡಲು ‘ಕನಕಪುರ ಬಂಡೆ’ ರಣತಂತ್ರ!

top videos


    ಈ ವೇಳೆ ಕೂಡಲೇ ಮತ್ತೊಬ್ಬ ಬಾಲಕ ಪೋಷಕರಿಗೆ ಮಾಹಿತಿ ನೀಡಿದ್ದಾನೆ. ನಂತರ ಮೀನುಗಾರರು ಹಾಗೂ ಸ್ಥಳೀಯರಿಂದ ಕಾರ್ಯಾಚರಣೆ ನಡೆಸಿದಾಗ ಮಲ್ಲಿಕಾರ್ಜುನ ಹಾಗೂ ಅಮರ್ ಮೃತದೇಹ ಪತ್ತೆಯಾಗಿದೆ.

    First published: