ದಾವಣಗೆರೆ: ಇದೇ ಮಾರ್ಚ್ 23ರಂದು ದಾವಣಗೆರೆಯ ರಿಂಗ್ ರಸ್ತೆಯಲ್ಲಿ (Davanagere Ring Road) 35 ವರ್ಷದ ಮಹಾಂತೇಶ್ ಎಂಬವರ ಕೊಲೆ ನಡೆದಿತ್ತು. ಕೊಲೆ ಬಳಿಕ ಶವದ ಮುಂದೆ ಪತ್ನಿ (Wife) ಶ್ವೇತಾ (27) ಬಿಕ್ಕಿ ಬಿಕ್ಕಿ ಅತ್ತಿದ್ದಳು. ಇದೀಗ ಪೊಲೀಸರ ತನಿಖೆಯಲ್ಲಿ (Police Investigation) ಶ್ವೇತಾಳ ಸರಸದಾಟ ಬಯಲಾಗಿದ್ದು, ಗೆಳೆಯ ಚಂದ್ರಶೇಖರ್ (28) ಜೊತೆ ಸೆರೆಮನೆ ಸೇರಿದ್ದಾಳೆ. ಪೊಲೀಸರ ತನಿಖೆ ವೇಳೆ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿರುವ ವಿಚಾರವನ್ನ ಶ್ವೇತಾ ಒಪ್ಪಿಕೊಂಡಿದ್ದಾಳೆ. ಕೊಲೆಯಾದ ಮಹಾಂತೇಶ್ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೈಚವಳ್ಳಿ (Baichavalli, Hanagal) ಗ್ರಾಮದ ನಿವಾಸಿಯಾಗಿದ್ದು, ದಾವಣಗೆರೆಯ ಕಟಿಂಗ್ ಶಾಪ್ನಲ್ಲಿ (Cutting Shop) ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಮದುವೆಯಾದರೂ ಶ್ವೇತಾ ಬಾಲ್ಯದ ಗೆಳೆಯ ಚಂದ್ರಶೇಖರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಚಂದ್ರಶೇಖರ್ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದನು. ಜೊತೆಯಾಗಿ ಜೀವನ ನಡೆಸಬೇಕು ಅಂದುಕೊಂಡಿದ್ದ ಚಂದ್ರಶೇಖರ್ ಮತ್ತು ಶ್ವೇತಾ ಜೊತೆಯಾಗಿ ಮಹಾಂತೇಶ್ಗೆ ಚಟ್ಟ ಕಟ್ಟಿದ್ದರು.
ಮಾರ್ಚ್ 23ರಂದು ಕೊಲೆ
ಚಂದ್ರಶೇಖರ್ ಮತ್ತು ಮಹಾಂತೇಶ್ ಇಬ್ಬರಿಗೂ ಪರಿಚಯವಿತ್ತು. ಮಾರ್ಚ್ 23ರಂದು ಮಹಾಂತೇಶ್ನನ್ನ ಮದ್ಯಪಾನ ಮಾಡಲು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಮದ್ಯದಲ್ಲಿ ನಿದ್ದೆ ಮಾತ್ರೆ ಸೇರಿಸಿ ಮಹಾಂತೇಶ್ಗೆ ಕುಡಿಸಲಾಗಿದೆ.
ಇದನ್ನೂ ಓದಿ: Crime News: ಹೆತ್ತವರನ್ನೇ ಬರ್ಬರವಾಗಿ ಕೊಂದ 16 ವರ್ಷದ ಬಾಲಕಿ, ಪ್ರಜ್ಞೆ ತಪ್ಪಿಸಿ ಕೊಡಲಿಯಿಂದ ಕೊಚ್ಚಿ ಕೊಲೆ
ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ
ಶವದ ಮೇಲೆ ಕಾರದಪುಡಿ ಹಾಕಿ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ನಂತರ ಕತ್ತು ಕತ್ತರಿಸಿ ಮಹಾಂತೇಶ್ ಕೊಲೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದಾವಣಗೆರೆಯ ವಿದ್ಯಾನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ