Suspected Terrorist: ಮಾತಿಲ್ಲ, ಕಥೆ ಇಲ್ಲ, ಫುಲ್ ಸೈಲೆಂಟ್; ಯಾರು ಈ ಶಂಕಿತ ಟೆರರಿಸ್ಟ್?

ಆರಿಫ್, ಶಂಕಿತ ಉಗ್ರ

ಆರಿಫ್, ಶಂಕಿತ ಉಗ್ರ

ಶಂಕಿತ ಉಗ್ರ ಆರಿಫ್ ನಮಾಜ್​ಗೆ ಹೋದ್ರೂ ಯಾರ ಜೊತೆಯೂ ಮಾತಾಡ್ತಿರಲಿಲ್ಲ. ಒಬ್ಬನೇ ಓಡಾಡ್ತಿದ್ದ. ಆತನಿಗೆ ಎರಡು ಮಕ್ಕಳು ಇದ್ದಾರೆ. ಆತ ಈ ಥರದ ವ್ಯಕ್ತಿ ಎಂದು ಗೊತ್ತಿಲ್ಲ ಎಂದ ಸ್ಥಳೀಯರಾದ ಜಾವೀದ್ ಹೇಳಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore, India
  • Share this:

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೋರ್ವ ಶಂಕಿತ ಉಗ್ರ (Suspected Terrorist) ಸೆರೆ ಸಿಕ್ಕಿದ್ದಾನೆ. ಥಣಿಸಂದ್ರದ ಮಂಜುನಾಥ್ ನಗರದಲ್ಲಿ ಐಎಸ್​ಡಿ (Internal Security Department -ISD) ಮತ್ತು ಕೇಂದ್ರ ತನಿಖಾ ಸಂಸ್ಥೆಗಳು (ISD And NIA) ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರ ಆರಿಫ್​ನನ್ನು ಬಂಧಿಸಿದ್ದಾರೆ. ಸದ್ಯ ಶಂಕಿತ ಭಯೋತ್ಪಾದಕ ಆರಿಫ್ ಬಂಧಿಸಿ (Arrest) ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು ಅನೇಕ ಸಂಗತಿಗಳು ಹೊರ ಬರುವ ಸಾಧ್ಯತೆ ಇದೆ. ಬಂಧಿತ ಶಂಕಿತ ಉಗ್ರ ಆರಿಫ್ ಕಳೆದ 2 ವರ್ಷಗಳಿಂದ ಅಲ್​ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಸಾಫ್ಟ್‌ವೇರ್ ಕಂಪನಿಯಲ್ಲಿ ವರ್ಕ್ ಫರ್ಮ್ ಹೋಮ್ (Work From Home) ಮೂಲಕ ಮನೆಯಲ್ಲೇ ಕೆಲಸ ಮಾಡ್ತಿದ್ದ ಆರಿಫ್​ಗೆ ಉಗ್ರ ಸಂಘಟನೆಗಳಲ್ಲಿ ಸೇರಿಕೊಳ್ಳಬೇಕು ಎಂಬ ಕನಸಿತ್ತು. ಅದರಂತೆ ಸಾಮಾಜಿಕ ಜಾಲತಾಣಗಳು (Social Media), ವೆಬ್​ ಸೈಟ್​ ಮೂಲಕ ಉಗ್ರ ಸಂಘಟನೆಗಳನ್ನು ಸೇರಲು ತಯಾರಿ ನಡೆಸಿದ್ದ ಎಂದು ಹೇಳಲಾಗುತ್ತಿದೆ.


ಟೆಲಿಗ್ರಾಮ್ ಹಾಗೂ ಡಾರ್ಕ್ ನೆಟ್ ಮೂಲಕ ಉಗ್ರ ಸಂಘಟನೆ ಆಲ್ ಖೈದಾ ಗ್ರೂಪ್​ಗಳಲ್ಲಿ ಸಕ್ರಿಯನಾಗಿದ್ದ ಎನ್ನಲಾಗುತ್ತಿದೆ. ಈತ ಮರ್ಚ್​​ ನಲ್ಲಿ ಇರಾಕ್ ಮೂಲಕ ಸಿರಿಯಾಗೆ ತೆರಳಲು ಯತ್ನಿಸಿದ್ನಂತೆ. ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ ಹೋಗಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.


NIA And ISD detained Suspected Terrorist detained mrq
ಆರಿಫ್, ಶಂಕಿತ ಉಗ್ರ


ಈಗ ಮಾರ್ಚ್​ನಲ್ಲಿ ಮತ್ತೆ ಇರಾಕ್ ಮೂಲಕ ಸಿರಿಯಾ ಹಾಗು ಅಫ್ಘಾನ್​ಗೆ ತೆರಳಲು ಪ್ಲಾನ್ ಮಾಡಿ ಫ್ಲೈಟ್ ಟಿಕೆಟ್ ರೆಡಿ ಮಾಡಿಕೊಳ್ಳುತ್ತಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.


ಉತ್ತರ ಪ್ರದೇಶದಿಂದ ಕುಟುಂಬ ಕರೆಸಿದ್ದ


ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಆರಿಫ್, ಒಂದೂವರೆ ವರ್ಷದ ಹಿಂದೆ ಥಣಿಸಂದ್ರದಲ್ಲಿ ಬಾಡಿಗೆ ಮನೆ ಮಾಡಿದ್ದ. ಮನೆ ಮಾಡೋಕು ಮೊದಲು ಪಿಜಿಯಲ್ಲಿದ್ದ ಆರಿಫ್, ನಂತ್ರ ಉತ್ತರ ಪ್ರದೇಶದಿಂದ ಕುಟುಂಬವನ್ನು ಕರೆಸಿದ್ದನು.




ಶಂಕಿತ ಉಗ್ರ ಆರಿಫ್ ನಮಾಜ್​ಗೆ ಹೋದ್ರೂ ಯಾರ ಜೊತೆಯೂ ಮಾತಾಡ್ತಿರಲಿಲ್ಲ. ಒಬ್ಬನೇ ಓಡಾಡ್ತಿದ್ದ. ಆತನಿಗೆ ಎರಡು ಮಕ್ಕಳು ಇದ್ದಾರೆ. ಆತ ಈ ಥರದ ವ್ಯಕ್ತಿ ಎಂದು ಗೊತ್ತಿಲ್ಲ ಎಂದ ಸ್ಥಳೀಯರಾದ ಜಾವೀದ್ ಹೇಳಿದ್ದಾರೆ.


‘ಭಾರತದಲ್ಲಿ ಮುಸ್ಲಿಮರ ಪಾಲೂ ಇದೆ’


ದೇಶದಲ್ಲಿ ಇಸ್ಲಾಂ ಧರ್ಮದ ಮೇಲೆ ಅಪಪ್ರಚಾರ ಹೆಚ್ಚಿದೆ. ಇಸ್ಲಾಮೋಫೋಬಿಯಾ ಬಿತ್ತುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ದೇಶ ಬೇರೆಯವರಿಗೆ ಎಷ್ಟು ಸೇರಿದೆವೋ ಅಷ್ಟೇ ನಮ್ಮದು ಎಂದು ಜಮೈತ್​ ಉಲೇಮಾ ಎ ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಹೇಳಿದ್ದಾರೆ.


ನವದೆಹಲಿಯ ರಾಮ್​​ಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮದನಿ, ಭಾರತ ಮುಸ್ಲಿಮರ ನಾಡಾಗಿದೆ. ನಮ್ಮನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಇಸ್ಲಾಂ ಧರ್ಮದ ವಿರುದ್ಧ ಸಲ್ಲದ ಪ್ರಚಾರ ನಡೆಸಿ ದ್ವೇಷ ಭಾಷಣ ಮೂಡಿಸಲಾಗುತ್ತಿದೆ. ಇಸ್ಲಾಮೋಫೋಬಿಯಾ ಹೆಚ್ಚುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.


ಮೀನುಗಾರರ ಮೇಲೆ ಕಲ್ಲೆಸೆತ


ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಂಗಳೂರಿನ ಮೀನುಗಾರಿಕಾ ಬೋಟ್‌ಗಳ ಮೇಲೆ ತಮಿಳುನಾಡು ಮೀನುಗಾರರು (Mangaluru Fishermen) ಕಲ್ಲು ತೂರಾಟ (Stone Pelting) ನಡೆಸಿದ ಘಟನೆ ನಡೆದಿದೆ.


ಇದನ್ನೂ ಓದಿ:  KRS Musical Fountain: ಪ್ರವಾಸಿಗರೇ ಗಮನಿಸಿ, ಫೆಬ್ರವರಿ 15ರಿಂದ ಸಂಗೀತ-ನೃತ್ಯ ಕಾರಂಜಿ ಬಂದ್!


ಮಂಗಳೂರಿನ ಮೀನುಗಾರರು ಸುಮಾರು ಏಳೆಂಟು ಬೋಟ್‌ಗಳಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಬೋಟ್‌ಗಳು ತಮಿಳುನಾಡಿನ ಕನ್ಯಾಕುಮಾರಿ ಬಳಿ ಸಾಗಿದ್ದವು.


ಈ ಹಂತದಲ್ಲಿ ಈ ಭಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡಿನ ಮೀನುಗಾರರು (Tamilnadu Fishermen) ತಡೆ ಒಡ್ಡಿದ್ದಾರೆ. ಹತ್ತಕ್ಕೂ ಹೆಚ್ಚು ಬೋಟ್‌ಗಳಿಂದ ಸುತ್ತುವರಿದು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಮಂಗಳೂರಿನ ಮೀನುಗಾರರಲ್ಲಿ ಹಲವರಿಗೆ ಗಾಯಗಳಾಗಿವೆ.

Published by:Mahmadrafik K
First published: