• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ನಾವು ಸ್ವಾರ್ಥಕ್ಕಾಗಿ ಕ್ಷೇತ್ರ ಬದಲಿಸಲ್ಲ; ಸಿದ್ದರಾಮಯ್ಯ ಬಗ್ಗೆ ಶ್ರೀರಾಮುಲು ಸಾಫ್ಟ್ ಕಾರ್ನರ್

Karnataka Politics: ನಾವು ಸ್ವಾರ್ಥಕ್ಕಾಗಿ ಕ್ಷೇತ್ರ ಬದಲಿಸಲ್ಲ; ಸಿದ್ದರಾಮಯ್ಯ ಬಗ್ಗೆ ಶ್ರೀರಾಮುಲು ಸಾಫ್ಟ್ ಕಾರ್ನರ್

ಸಿದ್ದರಾಮಯ್ಯ , ಶ್ರೀರಾಮುಲು

ಸಿದ್ದರಾಮಯ್ಯ , ಶ್ರೀರಾಮುಲು

ಸರ್ಕಾರ ರಚನೆಯಾಗಬೇಕಾದ್ರೆ ಪಾಪುಲರ್ ಕ್ಯಾಂಡಿಟ್​ಗಳು ಬೇರೆ ಬೇರೆ ಕಡೆ ನಿಲ್ಲಬೇಕಾಗುತ್ತದೆ. ಇದರಲ್ಲಿ ನನ್ನ ಮತ್ತು ಸಿದ್ದರಾಮಯ್ಯ ಅವರ ಸ್ವಾರ್ಥ ಇರಲ್ಲ. ಸರ್ಕಾರದ ರಚನೆಗಾಗಿ ಇಬ್ಬರು ಕ್ಷೇತ್ರ ಬಿಟ್ಟೇವು ಎಂದು ಹೇಳಿದರು.

  • Share this:

ಬಳ್ಳಾರಿ: ಸಚಿವ ಶ್ರೀರಾಮುಲು (Minister Sriramulu) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಇಬ್ಬರು ರಾಜಕೀಯ ಬದ್ಧವೈರಿಗಳು. 2018ರಲ್ಲಿ ಬಾದಾಮಿ (Badami Constituency) ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಬ್ಬರು ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರು. ಚುನಾವಣೆ ಬಳಿಕವೂ ಈ ವಾಗ್ದಾಳಿ ಮುಂದುವರಿದಿತ್ತು. ಇಂದು ಬಳ್ಳಾರಿಯಲ್ಲಿ (Ballary) ಮಾಧ್ಯಮಗಳ ಜೊತೆ ಮಾತನಾಡಿರುವ ಶ್ರೀರಾಮುಲು ಅವರು ಸಿದ್ದರಾಮಯ್ಯ ಅವರ ಬಗ್ಗೆ ಮೃದು ಧೋರಣೆ ತೋರಿದ್ದಾರೆ. ಸಿದ್ದರಾಮಯ್ಯ ನಾನು ಇಬ್ಬರು ಒಂದೇ ಬಾರಿ ಅನಿವಾರ್ಯ ಕಾರಣಕ್ಕಾಗಿ ಕ್ಷೇತ್ರ ಬಿಟ್ಟೇವು. ಅವತ್ತಿನ ಸನ್ನಿವೇಶದಲ್ಲಿ ಇಬ್ಬರು ಕ್ಷೇತ್ರ ಬಿಡಬೇಕಾಯ್ತ. ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ನಿರ್ಧಾರದಂತೆ ಸಿದ್ದರಾಮಯ್ಯ ನಾನು ಕ್ಷೇತ್ರ ಬಿಡಬೇಕಾಯ್ತು ಎಂದು 2018ರ ಚುನಾವಣೆಯ ಸನ್ನಿವೇಶ ಮೆಲಕು ಹಾಕಿಕೊಂಡರು.


ಸರ್ಕಾರ ರಚನೆಯಾಗಬೇಕಾದ್ರೆ ಪಾಪುಲರ್ ಕ್ಯಾಂಡಿಟ್​ಗಳು ಬೇರೆ ಬೇರೆ ಕಡೆ ನಿಲ್ಲಬೇಕಾಗುತ್ತದೆ. ಇದರಲ್ಲಿ ನನ್ನ ಮತ್ತು ಸಿದ್ದರಾಮಯ್ಯ ಅವರ ಸ್ವಾರ್ಥ ಇರಲ್ಲ. ಸರ್ಕಾರದ ರಚನೆಗಾಗಿ ಇಬ್ಬರು ಕ್ಷೇತ್ರ ಬಿಟ್ಟೇವು ಎಂದು ಹೇಳಿದರು.


ಮಗನ ಭವಿಷ್ಯಕ್ಕಾಗಿ ಸಿದ್ದರಾಮಯ್ಯ ವರುಣಾಗೆ ಹೋಗ್ತಿಲ್ಲ


ಸಿದ್ದರಾಮಯ್ಯ ವರುಣಾದಲ್ಲಿ ನಿಲ್ಲಬೇಕು.ಆದ್ರೆ ಮಗನ ರಾಜಕೀಯಕ್ಕಾಗಿ ವರುಣಾಕ್ಕೆ ಹೋಗುತ್ತಿಲ್ಲ. ಮಗನ ಭವಿಷ್ಯ ಮತ್ತು ಸಿದ್ದರಾಮಯ್ಯ ಕೂಡ ರಾಜಕೀಯದಲ್ಲಿರಬೇಕು. ಹೀಗಾಗಿ ಕ್ಷೇತ್ರದ ಆಯ್ಕೆ ಬಗ್ಗೆ ಗೊಂದಲವಾಗುತ್ತಿದೆ. ಸಿದ್ದರಾಮಯ್ಯ ಎಲ್ಲಿಯೇ ಸ್ಪರ್ಧೆ ಮಾಡಲಿ. ಅದು ಅವರ ಪಕ್ಷಕ್ಕೆ ಬಿಟ್ಟದ್ದು, ರಾಜಕೀಯದಲ್ಲಿ  ಇದೊಂದು ಸಹಜ ಪಕ್ರಿಯೆ ಎಂದು ಸಾಫ್ಟ್ ಕಾರ್ನರ್ ತೋರಿದರು.


we do not change assembly constituency for selfish reasons, sriramulu soft corner on siddaramaiah
ವಿಪಕ್ಷ ನಾಯಕ ಸಿದ್ದರಾಮಯ್ಯ


2018ರಲ್ಲಿ ಎದುರಾಳಿ


ಸಿದ್ದರಾಮಯ್ಯ ಬಗ್ಗೆ ಸಾಫ್ಟ್​ ಅನ್ನೋದಿಲ್ಲ. ರಾಜಕೀಯದಲ್ಲಿ ಕೆಲವೊಮ್ಮೆ ಪಾಪ್ಯುಲರ್ ಕ್ಯಾಂಡಿಟ್​​ಗಳ ಸಮಸ್ಯೆ ಬರುತ್ತದೆ. ಯಾವುದೇ ಕ್ಷೇತ್ರದಲ್ಲಿ ನಿಂತು ಗೆಲ್ಲುವವರೇ ಪಾಪುಲರ್ ಕ್ಯಾಂಡೆಟ್ ಕೆಲವೊಮ್ಮೆ ಸಾಹಸ ಮಾಡಬೇಕಾಗುತ್ತದೆ. ಹಾಗಾಗಿಯೇ 2018ರಲ್ಲಿ ಇಬ್ಬರು ಸಾಹಸ ಮಾಡಿದೇವು ಎಂದು ಹೇಳಿದರು.




ಕಾಂಗ್ರೆಸ್ ವಿರುದ್ಧ ವಾಗ್ದಾಳಿ


ಅತಿ ಹೆಚ್ಚು ಕ್ಷೇತ್ರಗಳಲ್ಲಿ ನಾವು ಬಂದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ವಾಮಮಾರ್ಗದಲ್ಲಿ ಸರ್ಕಾರ ರಚನೆ ಮಾಡಿದರು. ಆದ್ರೆ ಆ ಮೈತ್ರಿ ಸರ್ಕಾರ ಪತನಗೊಂಡಿದ್ದಿರಂದ ಬಿಜೆಪಿ ಅಧಿಕಾರಕ್ಕೆ ಬಂತು. ಕಾಂಗ್ರೆಸ್ ನಾಯಕರು ಕಿವಿಯಲ್ಲಿ ಇಷ್ಟು ದಿನ ಹೂವು ಇಡ್ತಿದ್ರು. ಇದೀಗ ಹೈಟೆಕ್ ಮಾದರಿಯಲ್ಲಿ ಗ್ಯಾರಂಟಿ ಕಾರ್ಡ್ ಇಡೋ ಕೆಲಸ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.


ಇದನ್ನೂ ಓದಿ:  Actor Kishore: ಉರಿಗೌಡ, ನಂಜೇಗೌಡ ವಿವಾದದಕ್ಕೆ ಎಂಟ್ರಿ ಕೊಟ್ಟ ಕಿಶೋರ್; ಕಾಂತಾರ ನಟನ ಖಡಕ್ ರಿಪ್ಲೈ ಏನು?


ಗ್ಯಾರಂಟಿ ಕಾರ್ಡ್ ಹೆಸರಲ್ಲಿ ಸುಳ್ಳು

top videos


    ಗ್ಯಾರಂಟಿ ಕಾರ್ಡ್ ವಾರಂಟಿ ಕಾರ್ಡ್ ಬಗ್ಗೆ ಜನರಿಗೆ ಗೊತ್ತಿಲ್ಲ.  ಯಾಕಂದ್ರೆ ಅಧಿಕಾರಕ್ಕೆ ಬಾರದೇ ಇರೋರು ಏನು ಗ್ಯಾರಂಟಿ ಕೊಡ್ತಾರೆ. ಚುನಾವಣೆ ಬಂದಾಗ ಸುಳ್ಳು ಹೇಳೋದು ಸಾಮಾನ್ಯ. ಇದೀಗ ಗ್ಯಾರಂಟಿ ಕಾರ್ಡ್ ಹೆಸರಲ್ಲಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರೋದು ಖಚಿತ. ಕಾಂಗ್ರೆಸ್ ಗಿಮಿಕ್ಸ್ ಗೆ ಜನರು ಮರಳಾಗೋದಿಲ್ಲ ಎಂದು ಹೇಳಿದರು.

    First published: