• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Vinay Kulkarni: ಮೂರ್ನಾಲ್ಕು ಬಾರಿ ಸಚಿವರಾದವರು ನಿವೃತ್ತಿ ಪಡೆಯಲಿ: ಹಿರಿಯರ ವಿರುದ್ಧ ಕುಲಕರ್ಣಿ ಗುಡುಗು

Vinay Kulkarni: ಮೂರ್ನಾಲ್ಕು ಬಾರಿ ಸಚಿವರಾದವರು ನಿವೃತ್ತಿ ಪಡೆಯಲಿ: ಹಿರಿಯರ ವಿರುದ್ಧ ಕುಲಕರ್ಣಿ ಗುಡುಗು

ವಿನಯ್ ಕುಲಕರ್ಣಿ, ಮಾಜಿ ಸಚಿವ

ವಿನಯ್ ಕುಲಕರ್ಣಿ, ಮಾಜಿ ಸಚಿವ

Siddaramaiah Cabinet: ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ. 3-4 ಬಾರಿ ಸಚಿವರಾದಂತವರು ನಿವೃತ್ತಿ ಹೊಂದಲಿ, ಅವರು ಯುವಕ ರಿಗೆ ಅವಕಾಶ ಮಾಡಿಕೊಡಲಿ ಎಂದು ವಿನಯ್ ಕುಲಕರ್ಣಿ ಪುನರುಚ್ಚಿಸಿದರು.

  • Share this:

ಬೆಂಗಳೂರು: ಈಗಾಗಲೇ ಮೂರ್ನಾಲ್ಕು ಬಾರಿ ಸಚಿವರಾದವರು (Minister) ಸ್ವಯಂ ನಿವೃತ್ತಿ ಪಡೆದುಕೊಳ್ಳಲಿ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ (Former Minister Vinay Kulkarni) ಹೇಳಿದ್ದಾರೆ. ನಿಯೋಜಿತ ಸಿಎಂ ಸಿದ್ದರಾಮಯ್ಯ (Siddaramaiah) ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ವಿನಯ್ ಕುಲಕರ್ಣಿ, ನಮ್ಮ ಪಕ್ಷದ ಹಿರಿಯರು ಮಂತ್ರಿ ಸ್ಥಾನದ ಆಸೆ ಬಿಟ್ಟು, ಯುವಕರಿಗೆ ಅವಕಾಶ ಮಾಡಿಕೊಡಲಿ. ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ನನಗೆ ಮಂತ್ರಿ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು.


ನನ್ನನ್ನು ಎರಡನೇ ಹಂತದಲ್ಲಿ ಮಂತ್ರಿ ಮಾಡುವ ವಿಶ್ವಾಸ ಇದೆ. ಸ್ವಾಭಾವಿಕವಾಗಿ ಸಿಎಂ ಸ್ಥಾನಕ್ಕೆ ಫೈಟ್ ಇದ್ದೇ ಇರುತ್ತದೆ. ನಮ್ಮ ಕಡೆ ಗ್ರಾಮ ಪಂಚಾಯತಿ ಮಟ್ಟದಲ್ಲಿನಯೇ ಪೈಪೋಟಿ ಇರುತ್ತದೆ. ಇನ್ನೂ ಸಿಎಂ ಸ್ಥಾನಕ್ಕೆ ಇರಲ್ಲವಾ ಎಂದು ಹೇಳಿದರು.


ನಮ್ಮಲ್ಲಿ ಯಾವುದೇ ಗೊಂದಲ ಗಳು ಇಲ್ಲ. 3-4 ಬಾರಿ ಸಚಿವರಾದಂತವರು ನಿವೃತ್ತಿ ಹೊಂದಲಿ, ಅವರು ಯುವಕ ರಿಗೆ ಅವಕಾಶ ಮಾಡಿಕೊಡಲಿ ಎಂದು ವಿನಯ್ ಕುಲಕರ್ಣಿ ಪುನರುಚ್ಚಿಸಿದರು.


ಹುಬ್ಬಳ್ಳಿಯಲ್ಲಿ ವಿಜಯೋತ್ಸವ


ಕರ್ನಾಟಕದ ಸಿಎಂ ಆಗಿ ಸಿದ್ಧರಾಮಯ್ಯ ಪ್ರಮಾಣ ವಚನ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಕುರುಬ ಸಮಾಜ ಹಾಗೂ ಸಿದ್ಧು ಅಭಿಮಾನಿಗಳಿಂದ ವಿಜಯೋತ್ಸವ ನಡೆಯುತ್ತಿದೆ. ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲಾಗುತ್ತಿದ್ದು, ಐದು ವರ್ಷಗಳ ಪೂರ್ಣಾವಧಿ ಪೂರೈಸಿ, ಬಡವರ ಕಣ್ಣೀದು ಒರೆಸಲಿ ಎಂದು ಹಾರೈಸುತ್ತಿದ್ದಾರೆ.




ಇದನ್ನೂ ಓದಿ:  Karnataka CM Oath Taking Ceremony Live: ಇಂದಿನಿಂದ ಸಿದ್ದರಾಮಯ್ಯ, ಡಿಕೆಶಿ ರಾಜ್ಯಭಾರ - ಪ್ರಮಾಣವಚನ ಸಮಾರಂಭಕ್ಕೆ ಅಭಿಮಾನಿಗಳ ದಂಡು


ಸ್ಪೀಕರ್ ಯಾರು?


ಇನ್ನು ಯಾರು ಆಗ್ತಾರೆ ಎಂಬುದರ ಬಗ್ಗೆ ಅಧಿಕೃತ ಹೇಳಿಕೆ ಹೊರ ಬಂದಿಲ್ಲ. ಹಿರಿಯರಾಗಿರುವ ಎಚ್​.ಕೆ.ಪಾಟೀಲ್, ಆರ್​.ವಿ.ದೇಶಪಾಂಡೆ ಅವರ ಹೆಸರು ಸ್ಪೀಕರ್ ಸ್ಥಾನಕ್ಕೆ ಕೇಳಿ ಬರುತ್ತಿದೆ. ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಶಾಸಕ ಎನ್​ಎ ಹ್ಯಾರಿಸ್ ಅವರ ಹೆಸರು ಕೇಳಿ ಬರುತ್ತಿದೆ.

First published: