• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಅಮಿತ್ ಶಾ ಪ್ರಯಾಣಿಸುತ್ತಿದ್ದ ಮಾರ್ಗ ಮಧ್ಯೆ ಭದ್ರತಾ ವೈಫಲ್ಯ; ಕಾರ್ ಹಿಂದೆಯೇ ಬಂದ ಬೈಕರ್ಸ್​

Bengaluru: ಅಮಿತ್ ಶಾ ಪ್ರಯಾಣಿಸುತ್ತಿದ್ದ ಮಾರ್ಗ ಮಧ್ಯೆ ಭದ್ರತಾ ವೈಫಲ್ಯ; ಕಾರ್ ಹಿಂದೆಯೇ ಬಂದ ಬೈಕರ್ಸ್​

ಅಮಿತ್ ಶಾ, ಗೃಹ ಸಚಿವ

ಅಮಿತ್ ಶಾ, ಗೃಹ ಸಚಿವ

ತಡರಾತ್ರಿವರೆಗೂ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎನ್​ಸಿಆರ್ ಪ್ರಕರಣ (NCR Case) ದಾಖಲಾಗಿದೆ.

  • News18 Kannada
  • 5-MIN READ
  • Last Updated :
  • Bangalore, India
  • Share this:

ಬೆಂಗಳೂರು: ಶನಿವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ರೋಡ್ ಶೋ (Roadshow) ವೇಳೆ ದಾವಣಗೆರೆಯಲ್ಲಿ ಭದ್ರತಾ ಲೋಪ ಉಂಟಾಗಿತ್ತು. 28 ವರ್ಷದ ಯುವಕನೋರ್ವ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಓಡಿ ಬಂದು ಒಂದು ಕ್ಷಣ ಆತಂಕ ಸೃಷ್ಟಿಸಿದ್ದನು. ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಪ್ರಯಾಣಿಸುತ್ತಿದ್ದ ಮಾರ್ಗಮಧ್ಯೆ  ಭದ್ರತಾ ವೈಫಲ್ಯ ಉಂಟಾಗಿದೆ. ಭಾನುವಾರ ರಾತ್ರಿ ಅಮಿತ್ ಶಾ ಅವರು ತಾಜ್ ವೆಸ್ಟ್ ಎಂಡ್ ನಿಂದ ಹೆಚ್​​ಎಎಲ್ ಗೆ ಹೋಗುತ್ತಿದ್ದ ವೇಳೆ ಭದ್ರತಾ ವೈಫಲ್ಯ (Security Failure) ಉಂಟಾಗಿದೆ. ಬೆಂಗಳೂರಿನ ಶಫಿನಾ ಫ್ಲಾಜಾದಿಂದ ಮಣಿಪಾಲ್ ಸೆಂಟರ್​ವರೆಗೂ ಕಾನ್ವೇ ಹಿಂದೆ ಇಬ್ಬರು ಬೈಕರ್ಸ್ (Bikers) ಬಂದಿದ್ದಾರೆ.


ಸಡನ್ ಆಗಿ ಮಾರ್ಗ ಮಧ್ಯೆ ಬಂದ ಇಬ್ಬರು ಬೈಕರ್ಸ್ ಕಾನ್ವೆ ಹಿಂದೆ ಸುಮಾರು 300  ಮೀಟರ್ ಬಂದಿದ್ದಾರೆ. ಕಾನ್ವೆ ಜೊತೆಯಲ್ಲೇ ಕೆಲ ದೂರ ಬೈಕ್​ನಲ್ಲಿ ಹೋಗಿದ್ದಾರೆ. ತಕ್ಷಣವೇ ಬೈಕ್​​ನಲ್ಲಿದ್ದ ಇಬ್ಬರನ್ನು ಮಣಿಪಾಲ್ ಸೆಂಟರ್  (Manipal Centre) ಬಳಿ ಭಾರತೀನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.




ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ


ವಿಚಾರಣೆ ವೇಳೆ ಇಬ್ಬರು ವಿದ್ಯಾರ್ಥಿಗಳು (Students) ಅನ್ನೋದು ಬೆಳಕಿಗೆ ಬಂದಿದೆ. ಇಬ್ಬರು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ಬಂದಿಲ್ಲ ಅನ್ನೋದು ಮೇಲ್ನೋಟಕ್ಕೆ ತಿಳಿದು ಬಂದಿದೆ.


Union minister amit shah s security breach in bengaluru mrq
ಭದ್ರತಾ ವೈಫಲ್ಯ


ಇದನ್ನೂ ಓದಿ:  JDS ಸಮಾವೇಶದಲ್ಲಿ ಉಳಿದಿದ್ದ ಆಹಾರ ಸೇವಿಸಿ 15 ಜಾನುವಾರು ಸಾವು


ತಡರಾತ್ರಿವರೆಗೂ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎನ್​ಸಿಆರ್ ಪ್ರಕರಣ (NCR Case) ದಾಖಲಾಗಿದೆ.


ಅಮಿತ್ ಶಾ ನೇತೃತ್ವದಲ್ಲಿ ಮೀಟಿಂಗ್ 


ಬೆಂಗಳೂರಿನಲ್ಲಿ ಅಮಿತ್​ ಶಾ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್ ನಡೆದಿದೆ. ಸಿಎಂ ಬೊಮ್ಮಾಯಿ, ಮಾಜಿ ಸಿಏಂಬಿಎಸ್​ವೈ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ B.L.ಸಂತೋಷ್​​ ಸೇರಿ ಪ್ರಮುಖರ ಜೊತೆ ಚರ್ಚೆ ನಡೆಸಿದರು.


ಮುಂದಿನ 1 ತಿಂಗಳು ಹೇಗೆಲ್ಲಾ ಪ್ರಚಾರ ನಡೆಸಬೇಕು. ಮೋದಿ ರೋಡ್ ಶೋ ಎಲ್ಲೆಲ್ಲಿ ನಡೆಸಿದ್ರೆ ಲಾಭ? ಕೇಂದ್ರ ಸಚಿವರು ರಾಜ್ಯದಲ್ಲಿ ಎಲ್ಲೆಲ್ಲಿ ಸಮಾವೇಶ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ನಡೆದಿದೆ.


Union minister amit shah s security breach in bengaluru mrq
ಭದ್ರತಾ ವೈಫಲ್ಯ

top videos


    ಅಲ್ಲದೇ ಮೀಸಲಾತಿ ಜಾರಿ, ಟಿಕೆಟ್ ಆಯ್ಕೆ, ಮತದಾರರ ಅಭಿಪ್ರಾಯದ ಬಗ್ಗೆಯೂ ಚರ್ಚೆ ನಡೆದಿದೆ. ಇನ್ನು ಇದೇ ವೇಳೆ ಬಿಜೆಪಿಯಲ್ಲಿ ಪರಸ್ಪರ ಮುನಿಸಿಕೊಂಡಿದ್ದವರನ್ನೂ ಒಟ್ಟಿಗೆ ಸೇರಿಸೋ ಕೆಲಸ ನಡೆದಿದೆ.

    First published: