• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Neeraj Chopra: ಗುರು ಕಾಶೀನಾಥ್​ ಮನೆಗೆ ಭೇಟಿ ನೀಡಿದ ಚಿನ್ನದ ಹುಡುಗ ನೀರಜ್​ ಚೋಪ್ರಾ

Neeraj Chopra: ಗುರು ಕಾಶೀನಾಥ್​ ಮನೆಗೆ ಭೇಟಿ ನೀಡಿದ ಚಿನ್ನದ ಹುಡುಗ ನೀರಜ್​ ಚೋಪ್ರಾ

ಕಾಶಿನಾಥ್​ ಕುಟುಂಬದೊಂದಿಗೆ ನೀರಜ್​ ಚೋಪ್ರಾ

ಕಾಶಿನಾಥ್​ ಕುಟುಂಬದೊಂದಿಗೆ ನೀರಜ್​ ಚೋಪ್ರಾ

ತಮ್ಮ ತರಬೇತಿಯ ಆರಂಭದ ದಿನಗಳಲ್ಲಿ ಕೋಚ್​ ಆಗಿದ್ದ ಕಾಶೀನಾಥ್​ ಅವರನ್ನು ಹುಡುಕಿಕೊಂಡು ಬಂದಿರುವ ಚಿನ್ನದ ಹುಡುಗ ನೀರಜ್​ ಚೋಪ್ರಾ ಅವರ ಕಟುಂಬದ ಜೊತೆ ಕಾಲ ಕಳೆದಿದ್ದಾರೆ. 

  • Share this:

    ಕಾರವಾರ (ಆ. 24): ಟೋಕಿಯೋ ಒಲಂಪಿಕ್ಸ್​​ನಲ್ಲಿ (Tokyo Olympics)  ಈಟಿ ಎಸೆತದ (javelin throw) ಮೂಲಕ ಚಿನ್ನದ ಪದಕ ಗಳಿಸಿ ದೇಶಕ್ಕೆ ಹೆಸರು ತಂದ ನೀರಜ್​ ಚೋಪ್ರಾ (neeraj chopra). ಅವರರು ತಮ್ಮ ಮಾಜಿ ಕೋಚ್​ ಕಾಶಿನಾಥ್ (kashinath)​ ಅವರನ್ನು ಭೇಟಿಯಾಗಿ ಗಮನ ಸೆಳೆದಿದ್ದಾರೆ. ಪುಣೆಯಲ್ಲಿನ ಅವರ ಮನೆಗೆ ಭೇಟಿ ನೀಡಿ ಕುಟುಂಬದೊಂದಿಗೆ ಕಾಲ ಕಳೆದಿದ್ದಾರೆ. ಈ ಮೂಲಕ ಕಾಶಿನಾಥ್​ ಚಿನ್ನದ ಹುಡುಗ ನೀರಜ್​ ಚೋಪ್ರಾ ಗುರುವಲ್ಲ ಎಂದವರಿಗೆ ಉತ್ತರ ನೀಡಿದ್ದಾರೆ. ಟೋಕಿಯೋ ಒಲಂಪಿಕ್ಸ್​ನಲ್ಲಿ ನೀರಜ್​ ಚೋಪ್ರಾ ಬಂಗಾರದ ಪದಕ ಗೆಲ್ಲುತ್ತಿದ್ದಂತೆ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬೆಂಗಳೆ ಗ್ರಾಮದ ಕಾಶೀನಾಥ ನಾಯ್ಕ ಹೆಸರು ಪ್ರಖ್ಯಾತಿಗೊಂಡಿತು. ನೀರಜ್​ ಚೋಪ್ರಾಗೆ ಕಾಶಿನಾಥ್​ ಕೂಡ ಈ ಹಿಂದೆ ತರಬೇತಿ ನೀಡಿದ್ದಾಗಿ ತಿಳಿಸಿದ್ದು, ಅವರೊಂದಿಗಿನ ಒಡನಾಟವನ್ನು ಕೂಡ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು. ಚಿನ್ನದ ಹುಡುಗನ ಪರಿಶ್ರಮದ ಹಿಂದೆ ರಾಜ್ಯದ ಗುರುವಿನ ಪಾತ್ರಕ್ಕೆ ಮೆಚ್ಚು ರಾಜ್ಯ ಸರ್ಕಾರ ಕೂಡ ಕೋಚ್​ ಕಾಶಿನಾಥ್​ಗೆ 10 ಲಕ್ಷ ಬಹುಮಾನ ಪ್ರಶಸ್ತಿ ಘೋಷಿಸಿತು.


    ಯಾವಾಗ ರಾಜ್ಯ ಸರ್ಕಾರ ಕಾಶಿನಾಥ್​ಗೆ ನಗದು ಬಹುಮಾನ ಘೋಷಸಿತು. ಅದರ ಬೆನ್ನಲ್ಲೇ ಕಾಶಿನಾಥ್​ ನೀರಜ್​ ಚೋಪ್ರಾ ಕೋಚ್​ ಅಲ್ಲ ಎನ್ನುವ ಮೂಲಕ ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಹೇಳಿಕೆ ರಾಜ್ಯದಲ್ಲಿ ಬಹು ಚರ್ಚೆಯಾಯಿತು. ಈ ಹಿನ್ನಲೆ ಕಾಶಿನಾಥ್​ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪ ಕೂಡ ಕೇಳಿ ಬಂದಿತು.


    ಆದರೆ, ಇದಕ್ಕೆ ತಿರುಗೇಟು ನೀಡಿದ್ದ ಕಾಶೀನಾಥ್​ ನೀರಜ್​ಗೆ ತರಬೇತಿ ಎರಡು ವರ್ಷ ತರಬೇತಿ ನೀಡಿದ್ದು, 2013-19 ವರೆಗೂ ಇಂಡಿಯಾ ಟೀ ಕೋಚ್​​ ಆಗಿ ಕಾರ್ಯ ನಿರ್ವಹಿಸುತ್ತಿದ್ದೆ ಎಂಬುದಕ್ಕೆ ಸಾಕ್ಷಿ ನೀಡಲು ಸಿದ್ಧನಿದ್ದೇನೆ ಎಂಬುದಾಗಿ ಸವಾಲು ಕೂಡ ಹಾಕಿದ್ದರು.


    ಇದನ್ನು ಓದಿ: ಚಿನ್ನದ ಹುಡುಗ ನೀರಜ್​ಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶಿನಾಥ್​ ನಾಯ್ಕ್​ಗೆ ರಾಜ್ಯ ಸರ್ಕಾರದಿಂದ 10 ಲಕ್ಷ ಬಹುಮಾನ ಘೋಷಣೆ


    ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ನೀರಜ್​ ಚೋಪ್ರಾ ನೇರವಾಗಿ ಶಿರಸಿಯ ತಮ್ಮ ಗುರುಗಳ ಮನೆಗೆ ಭೇಟಿ ನೀಡಿ, ಸಮಯ ಕಳೆದಿದ್ದಾರೆ. ಈ ಮೂಲಕ ಎಲ್ಲಾ ವಾದ- ವಿವಾದಗಳಿಗೆ ತೆರೆ ಏಳೆದಿದ್ದು, ತಾವು ಕನ್ನಡಿಗ ಕಾಶೀನಾಥ್​ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದು ಸತ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ.


    ಇದನ್ನು ಓದಿ: ಬಂಗಾರದ ಹುಡುಗ ನೀರಜ್​​​ಗೆ ತರಬೇತಿ ನೀಡಿದ್ದ ಶಿರಸಿಯ ಕೋಚ್​


    ಟೋಕಿಯೋ ಒಲಂಪಿಕ್ಸ್​ನಲ್ಲಿ ಚಿನ್ನದ ಪದಕ ಪಡೆದು ಬಂದ ನೀರಜ್​ ಚೋಪ್ರಾ ಸೇರಿದಂತೆ ಉಳಿದ ಸ್ಪರ್ಧಿಗಳಿಗೆ ಪ್ರಧಾನ ಮಂತ್ರಿ ವಿಶೇಷ ಆಹ್ವಾನ ನೀಡಿ ಮಾತು ಕತೆ ನಡೆಸಿದ್ದರು. ಈ ವೇಳೆ ನೀರಜ್​ ಚೋಪ್ರಾಗೆ ಇಷ್ಟವಾದ ಚೂರ್ಮವನ್ನು ಅವರೊಟ್ಟಿಗೆ ಸೇವಿಸಿದ್ದರು. ಇದಾದ ಬಳಿಕ ಉತ್ತರ ಪ್ರದೇಶ ಸಿಎಂ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದರು


    ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನೀರಜ್​ ಚೋಪ್ರಾ ಈಗ ಗುಣಮುಖರಾಗಿದ್ದು, ಮತ್ತೆ ತರಬೇತಿಗೆ ಮರಳಿದ್ದಾರೆ. ಈ ವೇಳೆ ತಮ್ಮ ತರಬೇತಿಯ ಆರಂಭದ ದಿನಗಳಲ್ಲಿ ಕೋಚ್​ ಆಗಿದ್ದ ಕಾಶೀನಾಥ್​ ಅವರನ್ನು ಹುಡುಕಿಕೊಂಡು ಬಂದು ಅವರ ಕಟುಂಬದ ಜೊತೆ ಕಾಲ ಕಳೆದಿದ್ದಾರೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು