• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ರಸ್ತೆ ಬದಿಯಲ್ಲಿ ಸಾವಿರಾರು ಪಾಕೇಟ್ ನಂದಿನಿ ಹಾಲು ; ದುರ್ನಾತದಿಂದ ರೋಗ ಹರಡುವ ಭೀತಿ

ರಸ್ತೆ ಬದಿಯಲ್ಲಿ ಸಾವಿರಾರು ಪಾಕೇಟ್ ನಂದಿನಿ ಹಾಲು ; ದುರ್ನಾತದಿಂದ ರೋಗ ಹರಡುವ ಭೀತಿ

ರಸ್ತೆಯಲ್ಲಿ ಎಸೆದಿರುವ ನಂದಿನಿ ಹಾಲಿನ ಪ್ಯಾಕೇಟ್​ಗಳು

ರಸ್ತೆಯಲ್ಲಿ ಎಸೆದಿರುವ ನಂದಿನಿ ಹಾಲಿನ ಪ್ಯಾಕೇಟ್​ಗಳು

ಹೊಸಕೋಟೆ, ಮಾರತ್ ಹಳ್ಳಿ ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಸಂಚಾರ ಮಾಡುವ  ಹುಸ್ಕೂರು ರಸ್ತೆ ಬದಿಯಲ್ಲಿಯೇ ಅವಧಿ ಮೀರಿದ ಸಾವಿರಾರು ಲೀಟರ್ ನಂದಿನಿ ಹಾಲಿನ ಪ್ಯಾಕೇಟ್​​ಗಳನ್ನು ಎಸೆಯಲಾಗಿದೆ

  • Share this:

ಆನೇಕಲ್(ಅಕ್ಟೋಬರ್​. 13): ನಂದಿನಿ ಕೆಎಂಎಫ್ ಸಂಸ್ಥೆಯ ವಿಶ್ವಾಸಾರ್ಹ ಬ್ರಾಂಡ್. ರಾಜ್ಯದಲ್ಲಿಯೇ ನಂದಿನ ಹೆಸರಿನ ಹಾಲು, ಮೊಸಲು, ತುಪ್ಪ ಸೇರಿದಂತೆ ಇತರೆ ಉತ್ಪನ್ನಗಳು ಉತ್ತಮ ಗುಣಮಟ್ಟಕ್ಕೆ ಹೆಸರು ವಾಸಿಯಾಗಿದ್ದು, ತನ್ನದೇ ಆದ ಅಸಂಖ್ಯಾತ ಗ್ರಾಹಕರು ಒಳಗೊಂಡಿದೆ. ಇಂತಹ ಬ್ರಾಂಡಿನ ಸಾವಿರಾರು ಅವಧಿ ಮೀರಿದ ಹಾಲಿನ ಪ್ಯಾಕೇಟ್​​ಗಳನ್ನು ರಸ್ತೆ ಬದಿಯಲ್ಲಿ ಎಸೆಯಲಾಗಿದ್ದು, ಕೊರೋನಾ ಆತಂಕದಲ್ಲಿರುವ ಸಾರ್ವಜನಿಕರಿಗೆ ಮತ್ತಷ್ಟು ಭೀತಿ ಮೂಡಿಸಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹುಸ್ಕೂರು ರಸ್ತೆ ಬದಿಯಲ್ಲಿ ಅವಧಿ ಮೀರಿದ ಸಾವಿರಾರು ನಂದಿನ ಹಾಲಿನ ಪ್ಯಾಕೇಟ್ ಎಸೆಯಲಾಗಿದೆ. ಕೊರೋನಾ ಹಾವಳಿಯಿಂದಾಗಿ ಅದೆಷ್ಟೋ ಮಂದಿ ಒಪ್ಪೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ಹಾಲು ಮಾರಾಟವಾಗದಿದ್ದರೆ ಬಡ ಅನಾಥ ಮಕ್ಕಳಿಗೆ ಹಾಲು‌ ನೀಡಿದ್ದರೆ ಪುಣ್ಯ ಬರುತ್ತಿತ್ತು. ಅದು ಬಿಟ್ಟು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.


ಏನೂ ಅರಿಯದ ಹಸು, ನಾಯಿಯಂತಹ ಮೂಕ ಪ್ರಾಣಿಗಳು ಸೇವಿಸುವುದರಿಂದ ಆನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಒಮ್ಮೆ ಹೀಗೆ ಮಾಡಿದ್ದರೆ ಪರವಾಗಿಲ್ಲ. ಆದರೆ, ಅಗ್ಗಿಂದಾಗ್ಗೆ ರಾತ್ರಿ ವೇಳೆ ಪದೇ ಪದೇ ಹಾಲಿನ ಪ್ಯಾಕೇಟ್ ಗಳನ್ನು ರಸ್ತೆ ಬದಿ ತಂದು ಎಸೆದು ಹೋಗುತ್ತಿದ್ದು, ಹಾಲಿನ ಪ್ಯಾಕೇಟ್​ಗಳ ದುರ್ನಾತದಿಂದ ಸಾರ್ವಜನಿಕರಿಗೂ ರೋಗ ರುಜಿನಗಳು ಬರುವ ಸಾಧ್ಯತೆ ಇದೆ ಎಂದು ಸ್ಥಳೀಯರಾದ ಮುನಿರಾಜು ಬೇಸರ ವ್ಯಕ್ತಪಡಿಸಿದ್ದಾರೆ.


ಇನ್ನೂ ಹೊಸಕೋಟೆ, ಮಾರತ್ ಹಳ್ಳಿ ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಸಂಚಾರ ಮಾಡುವ ಹುಸ್ಕೂರು ರಸ್ತೆ ಬದಿಯಲ್ಲಿಯೇ ಅವಧಿ ಮೀರಿದ ಸಾವಿರಾರು ಲೀಟರ್ ನಂದಿನಿ ಹಾಲಿನ ಪ್ಯಾಕೇಟ್​​ಗಳನ್ನು ಎಸೆಯಲಾಗಿದ್ದು, ಕೆಟ್ಟು ಗಬ್ಬುನಾರುತ್ತಿದೆ. ಇದರಿಂದ ಇಡೀ ವಾತಾವರಣ ಕಲುಷಿತಗೊಂಡಿದೆ. ಸಾಲದಕ್ಕೆ ರಸ್ತೆ ಬದಿಯಲ್ಲಿಯೇ ಸಿಕ್ಕ ಸಿಕ್ಕ ಕಡೆ ಕಸ ಕಡ್ಡಿಯನ್ನು ಸುರಿದು ಹೋಗುತ್ತಿದ್ದಾರೆ.


ಇದನ್ನೂ ಓದಿ : ವರುಣನ ಅಬ್ಬರಕ್ಕೆ ಸಾವಿನ ಮನೆಯಾದ ಕಲಬುರ್ಗಿ ; ಕೆಲವೇ ದಿನಗಳ ಅಂತರದಲ್ಲಿ 10 ಸಾವು


ಹೊಟೇಲ್, ಚಿಕನ್ ಮಟನ್ ಅಂಗಡಿ ತ್ಯಾಜ್ಯವನ್ನು ತಂದು ಸುರಿಯುವುದು ಸಾಮಾನ್ಯವಾಗಿದೆ. ಪ್ರಶ್ನೆ ಮಾಡುವವರು ಯಾರು ಇಲ್ಲದಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಬದಿಗಳಲ್ಲಿ ತ್ಯಾಜ್ಯ ಸುರಿಯುವವರ ಮೇಲೆ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.


ಒಟ್ಟಿನಲ್ಲಿ ನಂದಿನಿ ಹಾಲಿನ ಉತ್ಪನ್ನಗಳು ತನ್ನದೆ ಆದ ವೈಶಿಷ್ಟ್ಯತೆ ಜೊತೆಗೆ ನಮ್ಮ ರಾಜ್ಯದ ಹೆಮ್ಮೆಯ ಉತ್ಪನ್ನ ಎಂಬುದಾಗಿ ರಾಜ್ಯದ ಜನರ ಭಾವನೆಗಳ ಜೊತೆ ಬೆರೆತಿದೆ. ಇಂತಹ ನಂದಿನ ಉತ್ಪನ್ನಗಳು ರಸ್ತೆ ಬದಿಯಲ್ಲಿ ರಾಶಿ ರಾಶಿಯಾಗಿ ಬಿಸಾಡಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ನಿಜಕ್ಕೂ ಬೇಸರ ಸಂಗತಿ. ಕೂಡಲೇ ಕೆಎಂಎಫ್ ಸಂಸ್ಥೆ ಈ ಬಗ್ಗೆ ತನಿಖೆ ನಡೆಸಿ ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕಿದೆ.

First published: