• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ತಾಲಿಬಾನ್-ಭಯೋತ್ಪಾದಕಿಯನ್ನು ಸಂಸದೆಯನ್ನಾಗಿಸಿದ ಬಿಜೆಪಿ ಈ ಎರೆಡೂ ಮೂಲಭೂತವಾದಿಗಳದ್ದು ಒಂದೇ ರಕ್ತ; ಕಾಂಗ್ರೆಸ್​

ತಾಲಿಬಾನ್-ಭಯೋತ್ಪಾದಕಿಯನ್ನು ಸಂಸದೆಯನ್ನಾಗಿಸಿದ ಬಿಜೆಪಿ ಈ ಎರೆಡೂ ಮೂಲಭೂತವಾದಿಗಳದ್ದು ಒಂದೇ ರಕ್ತ; ಕಾಂಗ್ರೆಸ್​

ಮೃತ ಅಧಿಕಾರಿ ಹೇಮಂತ್ ಕರ್ಕರೆ, ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್.

ಮೃತ ಅಧಿಕಾರಿ ಹೇಮಂತ್ ಕರ್ಕರೆ, ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್.

ಮಲೆಗಾವ್ ಬಾಂಬ್ ಸ್ಫೋಟದ ರೂವಾರಿಯಾದ ಭಯೋತ್ಪಾದಕಿಯನ್ನ ಸಂಸದೆ ಮಾಡಿ ಬಿಜೆಪಿ ತನ್ನ ತಾಲಿಬಾನ್ ಮನಸ್ಥಿತಿಯನ್ನ ಜಾಹೀರುಪಡಿಸಿದೆ. ನೇಣುಗಂಬಕ್ಕೆ ಏರಬೇಕಾದಾಕೆಯನ್ನ ಪವಿತ್ರ ಸಂಸತ್ತಿನೊಳಗೆ ಕರೆತಂದು ಪ್ರಜಾಪ್ರಭುತ್ವಕ್ಕೆ, ಸಂಸತ್ತಿಗೆ ಐತಿಹಾಸಿಕ ಕಪ್ಪುಚುಕ್ಕೆ ಇಟ್ಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮುಂದೆ ಓದಿ ...
  • Share this:

ಬೆಂಗಳೂರು (ಆಗಸ್ಟ್​ 20); ಕಳೆದ ಒಂದು ವಾರದಿಂದ ಅಫ್ಘಾನಿಸ್ತಾನದ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಜನತಂತ್ರ ಸರ್ಕಾರವನ್ನು ಪದಚ್ಯುತಗೊಳಿಸಿರುವ ತಾಲಿಬಾನ್​ ಉಗ್ರರು ಕಳೆದ ಭಾನುವಾರ ಇಡೀ ಆಫ್ಘನ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಆಫ್ಘನ್ ನೆಲದಲ್ಲಿ ರಕ್ತದೋಕುಳಿ ಹರಿಸುತ್ತಿದ್ದಾರೆ. ತಾಲಿಬಾನಿಗಳ ಇಂತಹ ಅಮಾನವೀಯ ನಡೆಗಳನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಸಹ ಇಂದು ಬಹಿರಂಗವಾಗಿ ಖಂಡಿಸಿದ್ದರು. ಆದರೆ, ಇದನ್ನು ವ್ಯಂಗ್ಯವಾಡಿ ರುವ ರಾಜ್ಯ ಕಾಂಗ್ರೆಸ್​ ಕೆಪಿಸಿಸಿ ಘಟಕ, "ಜನರನ್ನು ಅಮಾನವೀಯ ವಾಗಿ ಕೊಲ್ಲುವ ತಾಲಿಬಾನಿಗಳು ಮತ್ತು ಭಯೋತ್ಪಾದಕರನ್ನೇ ಸಂಸದೆಯನ್ನಾಗಿಸಿ ಕೊಂಡಾಡುವ ಬಿಜೆಪಿಗರಿಗೂ ಹೆಚ್ಚು ವ್ಯತ್ಯಾಸ ಏನಿಲ್ಲ. ಇಬ್ಬರದ್ದೂ ಭಯೋತ್ಪಾದಕ ಮನಸ್ಥಿತಿಯೇ" ಎಂದು ಕಿಡಿಕಾರಿದೆ.



ಬಿಜೆಪಿ ಪಕ್ಷವನ್ನು ತಾಲಿಬಾನ್ ಉಗ್ರ ಸಂಘಟನೆಗೆ ಹೋಲಿಕೆ ಮಾಡಿ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ಭಯೋತ್ಪಾದಕರನ್ನ ಭಯೋತ್ಪಾದಕರೇ ಸಮರ್ಥಿಸಬಲ್ಲರು ಹೊರತು ಬೇರೆಯವರಲ್ಲ. ಉಗ್ರರನ್ನು ಮಟ್ಟ ಹಾಕುತ್ತ ಹುತಾತ್ಮರಾದ ಹೇಮಂತ್ ಕರ್ಕರೆಯವರ ಸಾವಿಗೆ ನನ್ನ ಶಾಪವೇ ಕಾರಣ ಎಂದಿದ್ದಾಕೆ ಭಯೋತ್ಪಾದಕಿ ಸಾದ್ವಿ. ತನ್ನಂತೆಯೇ ಇದ್ದ ಮತ್ತೊಬ್ಬ ಉಗ್ರರನ್ನು ಕರ್ಕರೆಯವರು ಕೊಂದಿದ್ದಕ್ಕೆ ನೊಂದು ಶಾಪ ಕೊಟ್ಟಳೇ" ಎಂದು ಕಾಂಗ್ರೆಸ್​ ನಾಯಕರು ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಟ್ವಿಟರ್​ನಲ್ಲಿ #ತಾಲಿಬಾನಿಬಿಜೆಪಿ ಎಂಬ ಹ್ಯಾಷ್​ ಟ್ಯಾಗ್​ ಅನ್ನು ಟ್ರೆಂಡ್ ಮಾಡಿದ್ದಾರೆ.


ಮತ್ತೊಂದು ಟ್ವೀಟ್​ನಲ್ಲಿ. "ಮಲೆಗಾವ್ ಬಾಂಬ್ ಸ್ಫೋಟದ ರೂವಾರಿಯಾದ ಭಯೋತ್ಪಾದಕಿಯನ್ನ ಸಂಸದೆ ಮಾಡಿ ಬಿಜೆಪಿ ತನ್ನ ತಾಲಿಬಾನ್ ಮನಸ್ಥಿತಿಯನ್ನ ಜಾಹೀರುಪಡಿಸಿದೆ. ನೇಣುಗಂಬಕ್ಕೆ ಏರಬೇಕಾದಾಕೆಯನ್ನ ಪವಿತ್ರ ಸಂಸತ್ತಿನೊಳಗೆ ಕರೆತಂದು ಪ್ರಜಾಪ್ರಭುತ್ವಕ್ಕೆ, ಸಂಸತ್ತಿಗೆ ಐತಿಹಾಸಿಕ ಕಪ್ಪುಚುಕ್ಕೆ ಇಟ್ಟಿದ್ದು ಈ ತಾಲಿಬಾನಿ ಬಿಜೆಪಿ. ಈ ಎರೆಡೂ ಬಗೆಯ ಮೂಲಭೂತವಾದಿಗಳದ್ದು ಒಂದೇ ರಕ್ತ!" ಎಂದು ಕಿಡಿಕಾರಿದೆ.


ಅಲ್ಲದೆ ಆರ್​ಎಸ್​ಎಸ್​ ಸಂಘಟನೆಯ ವಿರುದ್ಧವೂ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್, "RSS & ಬಿಜೆಪಿಗೂ ತಾಲಿಬಾನಿಗೂ ಬಹಳ ನೆಂಟಸ್ತಿಕೆ. ಕಟ್ಮಂಡು ವಿಮಾನ ಅಪಹರಣ ಪ್ರಕರಣದಲ್ಲಿ ಅಮೃತಸರದಲ್ಲಿ ಲ್ಯಾಂಡ್ ಆಗಿದ್ದ ವಿಮಾನವನ್ನು ತಾಲಿಬಾನಿಗಳಿಗೆ ಅನುಕೂಲವಾಗಲೆಂದು ಕಂದಹಾರ್‌ಗೆ ಕಳಿಸಿಕೊಟ್ಟು, ಮೂವರು ತಾಲಿಬಾನ್ ಉಗ್ರರನ್ನು ರಾಜಮರ್ಯಾದೆಯಲ್ಲಿ ಬಿಟ್ಟು ಕಳಿಸಿದ್ದು ಇದೇ ತಾಲಿಬಾನಿ ಬಿಜೆಪಿ. ಇಬ್ಬರೂ ಒಂದೇ ದಾರಿಯ ಪಯಣಿಗರಲ್ಲವೇ" ಎಂದು ಇತಿಹಾಸವನ್ನು ಕೆದಕುವ ಮೂಲಕ ವ್ಯಂಗ್ಯವಾಡಿದೆ.


ಇದನ್ನೂ ಓದಿ: Opposition Party Meet: 2024ರ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ ಅಜೆಂಡಾ ಸೆಟ್ ಮಾಡಿದ ಸೋನಿಯಾ ಗಾಂಧಿ


ತಾಲಿಬಾನಿಗಳು ಅಫ್ಘನಿಸ್ತಾನವನ್ನು ಕಬಳಿಸಿದ ನಂತರವೂ ಅವರ ರಕ್ತ ಪಿಪಾಸುತನ ಶಮನವಾಗಿರುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಕಳೆದ ಬುಧವಾರ  ವಿನಾಃ ಕಾರಣ ಕಾಬೂಲ್​ನಲ್ಲಿ ಮಹಿಳೆ ಸೇರಿ ಮೂವರು ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದ ತಾಲಿಬಾನಿಗಳು, ಗುರುವಾರ ಅಫ್ಘನ್ ಪ್ರಜೆಗಳ ಸ್ವಾತಂತ್ರ್ಯೋತ್ಸವ ರ್ಯಾಲಿ ಮೇಲೂ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಬಹಿರಂಗವಾಗಿಲ್ಲ.


ಇದನ್ನೂ ಓದಿ: Afghanistan Crisis| ಭಾರತದ ರಾಯಭಾರಿ ಕಚೇರಿ ಸಿಬ್ಬಂದಿಗಳ ಸ್ಥಳಾಂತರವನ್ನು ತಾಲಿಬಾನಿಗಳು ಬಯಸಿರಲಿಲ್ಲವಂತೆ!


ಹೀಗಾಗಿ ಭಾರತ ಸೇರಿದಂತೆ ಎಲ್ಲಾ ದೇಶಗಳು ಅಫ್ಘನ್​ನಿಂದ ತಮ್ಮ ರಾಜತಾಂತ್ರಿಕರನ್ನು ಈಗಾಗಲೇ ಹಿಂದಕ್ಕೆ ಕರೆಸಿಕೊಂಡಿದ್ದಾರೆ.. ಅಲ್ಲದೆ, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಯಾವ ಯುರೋಪ್​ ರಾಷ್ಟ್ರಗಳೂ ಸಹ ತಾಲಿಬಾನಿಗಳ ಸರ್ಕಾರವನ್ನು ಒಪ್ಪಿಕೊಂಡು ದೇಶದ ಮಾನ್ಯತೆ ನೀಡಲು ಸಿದ್ದರಿಲ್ಲ ಎಂದು ತಿಳಿದುಬಂದಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

First published: