ಬೆಂಗಳೂರು (ಜನವರಿ 19); ಆಸ್ತಿ ವಿಚಾರಕ್ಕಾಗಿ ಪಾಪಿ ಮಗ ತನ್ನ ತಾಯಿ, ತಮ್ಮನ ಹೆಂಡತಿ ಹಾಗೂ ನಾಲ್ಕು ವರ್ಷದ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಇದೇ ತಿಂಗಳ 16 ರಂದು ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಗೋಪಿ ಕೃಷ್ಣ (38) ಎಂದು ಗುರುತಿಸಿದ್ದು, ಪೊಲೀಸರು ಆತನನ್ನು ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ. ಮನೆ ಆಸ್ತಿ ವಿಚಾರವಾಗಿ ಅಣ್ಣ ಮತ್ತು ತಮ್ಮಂದಿರ ನಡುವೆ ಆಗಾಗ ಗಲಾಟೆ ನಡೆಯುತ್ತತ್ತು. ಸಾಲ ಮಾಡಿಕೊಂಡಿದ್ದ ಗೋಪಿಕೃಷ್ಣ ಮನೆ ಮಾರಾಟಕ್ಕೆ ಮುಂದಾಗಿದ್ದು, ತಮ್ಮ ಅದಕ್ಕೆ ಅಡ್ಡಿಪಡಿಸಿದ್ದ ಗಲಾಟೆಗೆ ಇದೇ ಕಾರಣ ಎನ್ನಲಾಗುತ್ತಿದೆ.
ಬಿಟಿಎಂ ಲೇಔಟ್ ನ 1 ಕ್ರಾಸ್ ನಲ್ಲಿರೋ ಮನೆಯ ಮೇಲ್ಭಾಗದಲ್ಲಿ ಅಣ್ಣಾ ಗೋಪಿಕೃಷ್ಣ ವಾಸವಾಗಿದ್ದರೆ, ಕೆಳಮಹಡಿಯಲ್ಲಿ ತಮ್ಮ ಸೋಮೇಶ್, ತಾಯಿ ಗುಣಮ್ಮ ಪತ್ನಿ ಹಾಗೂ ಮಗಳೊಂದಿಗೆ ವಾಸವಾಗಿದ್ದಾನೆ.
ಇದನ್ನೂ ಓದಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬೆಟ್ಟಿಂಗ್ ದಂಧೆ; ಉತ್ತರಪ್ರದೇಶ ಬಿಜೆಪಿ ನಾಯಕನ ಬಂಧನ!
16 ನೇ ತಾರೀಖು ಬೆಳಗ್ಗೆ ತಮ್ಮ ಸೋಮೇಶ್ ಕೆಲಸಕ್ಕೆ ತೆರಳಿದ್ದಾನೆ. ಈ ವೇಳೆ ಗೋಪಿಕೃಷ್ಣ ಬೆಳಗ್ಗೆ 10.30 ರ ಸುಮಾರಿಗೆ ತನ್ನ ಹೆಂಡತಿ ಶಿಲ್ಪಾ ಜೊತೆಗೂಡಿ ಚಾಕು ತಂದು ತನ್ನ ತಾಯಿಯ ಎದುರು ಗಲಾಟೆ ಮಾಡಿದ್ದಾನೆ. ಇದೇ ವೇಳೆ ಅಡ್ಢ ಬಂದ ತಮ್ಮನ ಪತ್ನಿಯ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಬೈದಿದ್ದ ತಾಯಿಯ ಕತ್ತಿಗೂ ಚಾಕುವಿನಿಂದ ಇರಿದಿದ್ದಾನೆ. ಜೋರಾಗಿ ಅಳುತ್ತಿದ್ದ ನಾಲ್ಕು ವರ್ಷದ ಪುಟ್ಟ ಮಗುವನ್ನೂ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ