• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ಈಡೇರಿಸಿದರೆ ಮಾತ್ರ ಸಾರಿಗೆ ಸತ್ಯಾಗ್ರಹ ನಿಲ್ಲಿಸುತ್ತೇವೆ; ಕೋಡಿಹಳ್ಳಿ ಚಂದ್ರಶೇಖರ್!

ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ಈಡೇರಿಸಿದರೆ ಮಾತ್ರ ಸಾರಿಗೆ ಸತ್ಯಾಗ್ರಹ ನಿಲ್ಲಿಸುತ್ತೇವೆ; ಕೋಡಿಹಳ್ಳಿ ಚಂದ್ರಶೇಖರ್!

ಕೋಡಿಹಳ್ಳಿ ಚಂದ್ರಶೇಖರ್​.

ಕೋಡಿಹಳ್ಳಿ ಚಂದ್ರಶೇಖರ್​.

ಇದುವರೆಗೂ ಸರ್ಕಾರದ ಪ್ರತಿನಿಧಿಗಳು ನಮ್ಮನ್ನು ಸಂಪರ್ಕ ಮಾಡಿಲ್ಲ. ಮಾತನಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆದರೆ ನಾವು ಖಂಡಿತಾ ಹೋಗ್ತೀವಿ ಎಂದ ಅವರು, ಮಾರ್ಚ್ ತಿಂಗಳ ವೇತನ ಕೊಡಲ್ಲ ಅಂದ್ರೆ ಸಾರಿಗೆ ಇಲಾಖೆ ತಪ್ಪು ಮಾಡಿದ ಹಾಗೆ. ಇಲ್ಲಿ ಸರ್ಕಾರವೇ ಸುಪ್ರೀಂ ಅಲ್ಲ ಅದರ ಮೇಲೆ ನ್ಯಾಯಾಲಯ ಅನ್ನೋದು ಇದೆ.  ಉದ್ದೇಶಪೂರ್ವಕವಾಗಿ ದಯವಿಟ್ಟು ಕಿರುಕುಳ ಕೊಡಬೇಡಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದರು.

ಮುಂದೆ ಓದಿ ...
  • Share this:

ಬೆಂಗಳೂರು: ಸಾರಿಗೆ ಸತ್ಯಾಗ್ರಹ ಇಂದು ಬೆಳಿಗ್ಗೆಯಿಂದ ಆರಂಭ ಆಗಿದೆ. ಇನ್ನೂ ಸತ್ಯಾಗ್ರಹ ಮುಂದುವರೆದಿದೆ. ಕೊರೋನಾ ನಿಯಮವನ್ನು ಉಲ್ಲಂಘನೆ ಮಾಡಿಲ್ಲ. ಯಾವುದೇ ಅಹಿತಕರ ಘಟನೆಯನ್ನು ಸಹ ನಾವು ಮಾಡಿಲ್ಲ. ಸೇವೆಗೆ ಹಾಜರಾಗದೆ ಸೇವೆಯಿಂದ ನಾವು ದೂರ ಇದ್ದೇವೆ. ನಾಳೆಯೂ ಸತ್ಯಾಗ್ರಹ ಮುಂದುವರೆಸುತ್ತೇವೆ. ನಾಳೆಯೂ ಬಸ್ ಗಳು ಇರಲ್ಲ. ಅನಿರ್ಧಿಷ್ಟಾವಧಿ ಸತ್ಯಾಗ್ರಹ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ಮುಷ್ಕರದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು ಹೇಳಿದರು.


ಇಂದು ಮುಷ್ಕರದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, 10ನೇ ತಾರೀಖಿನಂದು ನಾಲ್ಕು ವಿಭಾಗಗಳಿಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮುಖ್ಯಸ್ಥರ ಜೊತೆ ಸಭೆ ನಡೆಸಲಾಗುವುದು. 11 ನೇ ತಾರೀಖು ಗುಲ್ಬರ್ಗ ವಿಭಾಗದ ಸಭೆಯನ್ನು ಬೀದರ್ ನಲ್ಲಿ ಮಾಡ್ತೀವಿ. ಶಾಂತಿಯುತವಾಗಿ ಹೋರಾಟ ಹೇಗೆ ಮುಂದುವರೆಯಬೇಕು ಅನ್ನೋ ಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ. ಇನ್ನೆರಡು ಸಭೆಗಳಲ್ಲಿ ದಕ್ಷಿಣ ವಲಯದಲ್ಲಿ ಕೆಲ ದಿನಗಳ ಬಳಿಕ ಮಾಡ್ತೀವಿ ಎಂದು ತಿಳಿಸಿದರು.


ಪಕ್ಕದ ಆಂಧ್ರಪ್ರದೇಶದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲಾಗಿದೆ. ಇದ್ರಿಂದಾನೆ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೆ ಸರ್ಕಾರ ಕಾರಣಗಳನ್ನು ಕೊಡುತ್ತಾ ಬೇಡಿಕೆ ಈಡೇರಿಸಲು ಆಗಲ್ಲ ಅಂತಿದೆ. ಲಿಖಿತ ರೂಪದಲ್ಲಿ ಬೇಡಿಕೆ ಈಡೇರಿಸಿದರೆ ಮಾತ್ರ ಸತ್ಯಾಗ್ರಹ ಬಿಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದರು.


ಇದನ್ನು ಓದಿ: ಸಾರಿಗೆ ನೌಕರರ ಮುಷ್ಕರ: ಮೊದಲ ದಿನ ಇಲಾಖೆಗೆ ಆದ ನಷ್ಟವೆಷ್ಟು? ಇಂದು ಸಂಚರಿಸಿದ ಬಸ್​ಗಳ ಸಂಖ್ಯೆ ಎಷ್ಟು ಗೊತ್ತಾ?


ಬಜೆಟ್ ನಲ್ಲಿ ಸಾವಿರಾರು ಕೋಟಿ ಮಂಡನೆ ಮಾಡ್ತೀರಾ. ಆದರೆ ಸಾರಿಗೆ ನೌಕರರಿಗೆ ಯಾವ ಅನ್ಯಾಯ. ಸರ್ಕಾರ ಉದ್ದೇಶಪೂರ್ವಕವಾಗಿ ಈ ಯೋಜನೆ ಕೈಗೊಂಡಿಲ್ಲ.  ಮುಖ್ಯಮಂತ್ರಿಗಳು ಆದಷ್ಟು ನಮ್ಮ ಬೇಡಿಕೆ ಈಡೇರಿಸಿ. ನಮ್ಮ ಮನವಿಗೆ ಸ್ಪಂದಿಸಿಲ್ಲ ಅಂದ್ರೆ ನಾವು ಸತ್ಯಾಗ್ರಹ ನಿಲ್ಲಿಸಲ್ಲ. 6ನೇ ವೇತನ ಆಯೋಗ ಕೂಡಲೇ ಅನುಷ್ಠಾನ  ಮಾಡುವಂತೆ ಸಿಎಂ ಬಿಎಸ್​ವೈ ಅವರಿಗೆ ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದರು.


22 ದಿನಗಳ ಹಿಂದೆಯೇ ನಾವು ಮನವಿ ಮಾಡಿದ್ವಿ. ಆದರೆ ಸರ್ಕಾರ ಆ ಮನವಿಗೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಅದರ ಬದಲು ಎಸ್ಮಾ, ಐಪಿಸಿ, ಸಿಆರ್ ಪಿಸಿ ಅಂತ ಕಾರಣ ಕೊಟ್ಟಿತು. ಹೀಗಾಗಿ ಅನಿವಾರ್ಯ ಕಾರಣದಿಂದ ನಾವು ಸತ್ಯಾಗ್ರಹ ಮಾಡಬೇಕಾಯಿತು. ಖಾಸಗಿ ಬಸ್ ಮಾಲೀಕರಿಗೂ ವಿನಂತಿ ಮಾಡಿದ್ದೀವಿ. ಅದರಲ್ಲಿ ಕೆಲವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಇದು ಮೀರಿ‌ ಕೆಲವರು ಹೋದ್ರೆ ನಾವು ಏನು ಮಾಡೋಕೆ ಆಗಲ್ಲ.  ಇದುವರೆಗೂ ಸರ್ಕಾರದ ಪ್ರತಿನಿಧಿಗಳು ನಮ್ಮನ್ನು ಸಂಪರ್ಕ ಮಾಡಿಲ್ಲ. ಮಾತನಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆದರೆ ನಾವು ಖಂಡಿತಾ ಹೋಗ್ತೀವಿ ಎಂದ ಅವರು, ಮಾರ್ಚ್ ತಿಂಗಳ ವೇತನ ಕೊಡಲ್ಲ ಅಂದ್ರೆ ಸಾರಿಗೆ ಇಲಾಖೆ ತಪ್ಪು ಮಾಡಿದ ಹಾಗೆ. ಇಲ್ಲಿ ಸರ್ಕಾರವೇ ಸುಪ್ರೀಂ ಅಲ್ಲ ಅದರ ಮೇಲೆ ನ್ಯಾಯಾಲಯ ಅನ್ನೋದು ಇದೆ.  ಉದ್ದೇಶಪೂರ್ವಕವಾಗಿ ದಯವಿಟ್ಟು ಕಿರುಕುಳ ಕೊಡಬೇಡಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದರು.

top videos
    First published: