ಅರಣ್ಯ ಅಭಿವೃದ್ಧಿ ನಿಗಮಕ್ಕೆ ತಾರಾ ಅನುರಾಧಾ; ಇಲ್ಲಿದೆ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ
ನಿನ್ನೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಿಎಂ ಜೊತೆ ಚರ್ಚೆ ನಡೆಸಿದ ಬೆನ್ನಲ್ಲೇ ಇಂದು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಪಟ್ಟಿ ಹೊರಬಿದ್ದಿದೆ.
ಬೆಂಗಳೂರು (ನ.24): ಇಂದು ವಿವಿಧ ನಿಗಮ ಮಂಡಳಿಗಳ ನೇಮಕಾತಿ ಮಾಡಿ ಸರ್ಕಾರ ಆದೇಶ ನೀಡಿದೆ.ತಾರಾ ಅನುರಾಧ ಸೇರಿದಂತೆ ಹಲವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಮೂಲಕ ಸಚಿವ ಸ್ಥಾನಕ್ಕೆ ಒತ್ತಡ ಹಾಕುತ್ತಿದ್ದ ಶಾಸಕರ ಸಮಾಧಾನ ಪಡಿಸುವ ತಂತ್ರ ನಡೆಸಿದ್ದಾರೆ. ವಲಸಿಗ ಬಿಜೆಪಿ ನಾಯಕರಿಗೆ ಸಿಎಂ ಸಚಿವ ಸ್ಥಾನ ನೀಡಲು ಹವಣಿಸುತ್ತಿರುವ ಸಮಯದಲ್ಲಿ ಮೂಲ ಬಿಜೆಪಿ ಶಾಸಕರು ಕೂಡ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುತ್ತಿದ್ದರು. ಈ ಹಿನ್ನಲೆ ಅವರು ಸಿಎಂ ಖಾಲಿಯಿರುವ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನಿನ್ನೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಿಎಂ ಬಿಎಸ್ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ ಬೆನ್ನಲ್ಲೇ ಇಂದು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಪಟ್ಟಿ ಹೊರಬಿದ್ದಿದೆ.
ಅರಣ್ಯ ಅಭಿವೃದ್ಧಿ ನಿಗಮಕ್ಕೆ ತಾರಾ ಅನುರಾಧಾ
ಕಾರ್ಮಿಕ ಕಲ್ಯಾಣ ಮಂಡಳಿಗೆ ಬಿ.ಸಿ.ನಾಗೇಶ್
ನಾರು ಅಭಿವೃದ್ಧಿ ಮಂಡಳಿಗೆ ಬಿ.ಕೆ.ಮಂಜುನಾಥ್
ರೇಷ್ಮೆ ಉದ್ಯಮಗಳ ನಿಗಮಕ್ಕೆ ಎಸ್ಆರ್. ಗೌಡ
ಮಾವು ಅಭಿವೃದ್ಧಿ ನಿಗಮಕ್ಕೆ ಕೆ.ವಿ.ನಾಗರಾಜ್
ರೇಷ್ಮೆ ಮಾರಾಟ ಮಂಡಳಿಗೆ ಸವಿತಾ ವಿಶ್ವನಾಥ್ ಶೆಟ್ಟಿ
ಇಂಧನ ನಿಗಮಕ್ಕೆ ಚಂದು ಪಾಟೀಲ್ ನೇಮಕ
ಕಾಡಾ ನಿಗಮ ಅಧ್ಯಕ್ಷರಾಗಿ ತಿಪ್ಪೇಸ್ವಾಮಿ ನೇಮಕ
ಜೈವಿಕ ತಂತ್ರಜ್ಞಾನ ನಿಗಮಕ್ಕೆ ಕಿರಣ್ ಕುಮಾರ್
ವಿವಿಧ ನಿಗಮಗಳಿಗೆ ಅಧ್ಯಕ್ಷರ ನೇಮಿಸಿ ಆದೇಶ
ಆದಿಜಾಂಭವ ನಿಗಮಕ್ಕೆ ಮುನಿಕೃಷ್ಣ ನೇಮಕ
ಕೇಂದ್ರ ಪರಿಹಾರ ಸಮಿತಿಗೆ ಎಂ.ರಾಮಚಂದ್ರ
ಸಫಾಯಿ ಕರ್ಮಚಾರಿ ನಿಗಮಕ್ಕೆ ಹನುಮಂತಪ್ಪ
ಅಂಬೇಡ್ಕರ್ ನಿಗಮಕ್ಕೆ ದುರ್ಯೋಧನ ಐಹೊಳೆ
ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ ನರೇಶ್ ಕುಮಾರ್
ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಗಿರೀಶ್ ಉಪ್ಪಾರ್
ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಬಾಬು ಪತ್ತಾರ್
ವಿಜಯಪುರದ ವಿಜುಗೌಡ ಪಾಟೀಲ-ರಾಜ್ಯ ಬೀಜ, ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ
ಬೀಜ ನಿಗಮಕ್ಕೆ ವಿಜುಗೌಡ ಎಸ್. ಪಾಟೀಲ ನೇಮಕ
ವಿದ್ಯುತ್ ಕಾರ್ಖಾನೆ ನಿಗಮಕ್ಕೆ ತಮ್ಮೇಶ ಗೌಡ
ಮೃಗಾಲಯ ಪ್ರಾಧಿಕಾರಕ್ಕೆ ಮಹದೇವಸ್ವಾಮಿ ನೇಮಕ
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿ.-ಎಂ.ರುದ್ರೇಶ್ ನೇಮಕ
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ