ಶಿವಮೊಗ್ಗ: ವಿಧಾನಸಭಾ ಚುನಾವಣೆ (Assembly Election) ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತಮಿಳು (Tamil) ಭಾಷಿಗ ಮತದಾರರ ಮೇಲೆ ಕಣ್ಣೀರಿಟ್ಟಿರುವ ಬಿಜೆಪಿ (BJP), ಶಿವಮೊಗ್ಗ (Shivamogga) ನಗರ ಹಾಗೂ ಭದ್ರಾವತಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ತಮಿಳು ಮತದಾರರನ್ನು ಸೆಳೆಯಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಎನ್ಇಎಸ್ ನಲ್ಲಿ ತಮಿಳು ಭಾಷಿಗರ ಸಮಾವೇಶ ಆಯೋಜನೆ ಮಾಡಲಾಗಿತ್ತು. ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ (Annamalai) ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಆರಂಭದಲ್ಲಿ ತಮಿಳು ನಾಡಗೀತೆ ಹಾಕಿದ್ದರು. ಕೂಡಲೇ ಎಚ್ಚೆತ್ತುಕೊಂಡ ಈಶ್ವರಪ್ಪ ಅವರು ತಮಿಳು ನಾಡಗೀತೆಯನ್ನು ನಿಲ್ಲಿಸಿದ್ದಾರೆ. ಆ ಬಳಿಕ ಕಾರ್ಯಕ್ರಮದಲ್ಲಿದ್ದ ಜನರಿಗೆ ನಾಡಗೀತೆ ಹಾಡಲು ಅವಕಾಶ ನೀಡಿದ್ದರು. ಆದರೆ ಯಾರು ನಾಡಗೀತೆ (State Song) ಹಾಡಲು ಮುಂದಾಗದ ಕಾರಣ, ಕನ್ನಡ ನಾಡಗೀತೆಯನ್ನೇ ಹಾಕಿಸಿದ್ದಾರೆ.
ತಮಿಳುನಾಡಿನಲ್ಲಿ ನಾಲ್ಕು ಬಿಜೆಪಿ ಶಾಸಕರು ಆಗಲು ಅಣ್ಣಾಮಲೈ ಕಾರಣ
ಕಾರ್ಯಕ್ರಮದಲ್ಲಿ ಮಾತನಾಡಿದ ಈಶ್ವರಪ್ಪ ಅವರು, ರೌಡಿಗಳಿಗೆ ಅಣ್ಣಾಮಲೈ ಸಿಂಹಸ್ವಪ್ನ ಆಗಿದ್ದವರು. ಹೀಗಾಗಿ ಅವರನ್ನು ಕರ್ನಾಟಕದ ಸಿಂಗಂ ಅಂತಾರೆ, ಅಂತಹ ಸಿಂಹ ಇವತ್ತು ಚನ್ನಬಸಪ್ಪ ಅವರನ್ನು ಗೆಲ್ಲಿಸಲು ಬಂದಿದ್ದಾರೆ.
ಕರ್ನಾಟಕ, ತಮಿಳುನಾಡಿನ ಪ್ರೀತಿಪಾತ್ರರು ಅಣ್ಣಾಮಲೈ, ಅವರಂತೆ ಇರಬೇಕು ಅಂತ ಅಧಿಕಾರಿಗಳು ಬಯಸುತ್ತಾರೆ. ಒಂದೂ ಕ್ಷೇತ್ರ ಇಲ್ಲದ ತಮಿಳುನಾಡಿನಲ್ಲಿ ನಾಲ್ಕು ಬಿಜೆಪಿ ಶಾಸಕರು ಆಗಲು ಅಣ್ಣಾಮಲೈ ಕಾರಣ, ಇದು ಕನ್ನಡ-ತಮಿಳು ಸಂಗಮ. ಅರ್ಧ ಭಾರತ ಇಲ್ಲಿ ಕಾಣುತ್ತಿದೆ. ಬಿಜೆಪಿ ಗೆಲ್ಲಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕು ಎಂದು ಕರೆ ನೀಡಿದರು.
ಚನ್ನಬಸಪ್ಪ ಗೆದ್ದರೆ ನಾನೇ ಗೆದ್ದಂತೆ
ಅಲ್ಲದೇ, ಚನ್ನಬಸಪ್ಪ ಗೆದ್ದರೆ ನಾನೇ ಗೆದ್ದಂತೆ. ಅದಕ್ಕಾಗಿ ನಾನು ನಿಮ್ಮಲ್ಲಿ ವಿನಂತಿಸಿಕೊಳ್ತೇನೆ. ಬೆಳಗ್ಗೆ ನರೇಂದ್ರ ಮೋದಿಯವರು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಕಳೆದ ನನಗೆ 46,000 ಮತಗಳಿಂದ ಗೆಲ್ಲಿಸಿದ್ದಾರೆ. ಈ ಬಾರಿ ಬಿಜೆಪಿಯನ್ನು 60 ಸಾವಿರ ಮತಗಳಿಂದ ಗೆಲ್ಲಿಸಬೇಕು ಎಂದು ತಿಳಿಸಿದರು.
ಆ ಬಳಿಕ ಮಾತನಾಡಿದ ಅಣ್ಣಾಮಲೈ ಅವರು, ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಈಶ್ವರಪ್ಪ 50 ವರ್ಷ ಕೆಲಸ ಮಾಡಿದ್ದಾರೆ. ನನಗೆ ಅಂತಹ ಜವಾಬ್ದಾರಿ ನನಗೆ ತಮಿಳುನಾಡಿನಲ್ಲಿ ಸಿಕ್ಕಿದೆ. ಹೀಗಾಗಿ ಅವರ ಮೇಲೆ ನನಗೆ ಪ್ರೀತಿ. ಅವರೊಬ್ಬ ಎಲ್ಲರಿಗೂ ಮಾದರಿಯಾಗಿ ಪಕ್ಷದ ಭೀಷ್ಮ ಪಿತಾಮಹ ಆಗಿದ್ದಾರೆ. ಎರಡೂ ರಾಜ್ಯಗಳು ರಾಮಸೇತುವಾಗಿ ಸಂಪರ್ಕದಲ್ಲಿದೆ. ಈಶ್ವರಪ್ಪ ಸದಾ ಮಧುರೈ ದೇಗುಲಕ್ಕೆ ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಓಂಶಕ್ತಿ ದೇಗುಲಕ್ಕೆ ಭಕ್ತರನ್ನು ಕಳಿಸುವ ಕೆಲಸ ಮಾಡುತ್ತಿದ್ದಾರೆ.
ಡಬಲ್ ಇಂಜಿನ್ ಸರ್ಕಾರ ಇದ್ದರೆ ಅಭಿವೃದ್ಧಿ ವೇಗ ಜಾಸ್ತಿ
ನಿವೃತ್ತಿ ಪತ್ರ ಬರೆಯುವ ಮೂಲಕ ಈಶ್ವರಪ್ಪ ಮಾದರಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಕೊಡುವ ಮತ ಈಶ್ವರಪ್ಪ ಅವರಿಗೆ ಕೊಟ್ಟಂತೆ. ಈಶ್ವರಪ್ಪ ಅವರಿಗೆ ಗೌರವ ಕೊಟ್ಟಂತೆ, ಈಶ್ವರಪ್ಪ ಯಡಿಯೂರಪ್ಪ ಜೋಡೆತ್ತು ಇದ್ದಂತೆ. ಇದೇ ಮೊದಲ ಬಾರಿಗೆ ಅವರಿಬ್ಬರೂ ಸ್ಪರ್ಧಿಸುತ್ತಿಲ್ಲ. ಬಿಜೆಪಿಗೆ ಪೂರ್ಣ ಬಹುಮತ ತರಲು ಅವರಿಬ್ಬರೂ ಹೋರಾಡುತ್ತಿದ್ದಾರೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರವಾದ್ದರೆ, ಕಾಂಗ್ರೆಸ್ ರಿವರ್ಸ್ ಇಂಜಿನ್ ಸರ್ಕಾರವಾಗಿದೆ. ಪ್ರಧಾನಿ ಮೋದಿ ಕರೆ ಮಾಡಿ ಅವರನ್ನು ಮಾತನಾಡಿಸಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲೂ ಕರೆ ಮಾಡಿದ್ದಾರೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ