• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ಮಾಸ್ಕ್ ತೆಗೀರಿ, ನಾರಾಯಣಮೂರ್ತಿ ಅಲ್ವಾ ಅಂತ ಗೊತ್ತಾಗ್ಲಿ; ಸುಧಾಮೂರ್ತಿ ನಗೆ ಚಟಾಕಿ

Karnataka Election 2023: ಮಾಸ್ಕ್ ತೆಗೀರಿ, ನಾರಾಯಣಮೂರ್ತಿ ಅಲ್ವಾ ಅಂತ ಗೊತ್ತಾಗ್ಲಿ; ಸುಧಾಮೂರ್ತಿ ನಗೆ ಚಟಾಕಿ

ಸುಧಾಮೂರ್ತಿ ನಗೆ ಚಟಾಕಿ

ಸುಧಾಮೂರ್ತಿ ನಗೆ ಚಟಾಕಿ

Karnataka Polling 2023: ಮತದಾನದ ಬಳಿಕ ಮಾಧ್ಯಮ ಕ್ಯಾಮೆರಾಗಳ ಮುಂದೆ ಶಾಯಿ ಹಚ್ಚಿದ ಬೆರಳು ತೋರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನರು ಮತದಾನ ಮಾಡಬೇಕು ಎಂದು ಕರೆ ನೀಡಿದರು .

  • News18 Kannada
  • 2-MIN READ
  • Last Updated :
  • Bangalore, India
  • Share this:

ಬೆಂಗಳೂರು: ಇನ್ಫೋಸಿಸ್ ಮುಖ್ಯಸ್ಥರಾದ ನಾರಾಯಣಮೂರ್ತಿ (Narayanamurthy) ಮತ್ತು ಸುಧಾಮೂರ್ತಿ‌ (Sudhamurthy) ಜಯನಗರ ಬಿಇಎಸ್ ಕಾಲೇಜಿನ ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತದಾನದ ಬಳಿಕ ಮಾಧ್ಯಮ ಕ್ಯಾಮೆರಾಗಳ ಮುಂದೆ ಶಾಯಿ ಹಚ್ಚಿದ ಬೆರಳು ತೋರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನರು ಮತದಾನ ಮಾಡಬೇಕು ಎಂದು ಕರೆ ನೀಡಿದರು . ಮಾಧ್ಯಮಗಳ ಜೊತೆ ಮಾತನಾಡುತ್ತಿರುವ ವೇಳೆ ನಾರಾಯಣಮೂರ್ತಿ ಅವರು ಮಾಸ್ಕ್ (Mask) ಧರಿಸಿದ್ದರು. ಮಾಸ್ಕ್ ತೆಗೀರಿ. ನಾರಾಯಣಮೂರ್ತಿ ಅಲ್ವಾ ಅಂತ ಗೊತ್ತಾಗ್ಲಿ ಎಂದು ನಗೆ ಚಟಾಕಿ ಹಾರಿಸಿದರು. ಸುಧಾಮೂರ್ತಿ ಅವರು ಹೇಳುತ್ತಿದ್ದಂತೆ ನಗುತ್ತಲೇ ನಾರಾಯಣಮೂರ್ತಿ ಅವರು ಮಾಸ್ಕ್ ತೆಗೆದರು.


ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಮತಗಟ್ಟೆ ಸಂಖ್ಯೆ 188ರಲ್ಲಿ ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ್ ಹೊರಟ್ಟಿ ಅವರು ಮತದಾನ ಮಾಡಿದರು. ಪತ್ನಿ ಮತ್ತು ಪುತ್ರನೊಂದಿಗೆ ಆಗಮಿಸಿ ಹಕ್ಕು ಚಲಾವಣೆ ಮಾಡಿದರು.


ಬಸವರಾಜ್  ಹೊರಟ್ಟಿ ಮತದಾನ


ಮತದಾನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ್ ಹೊರಟ್ಟಿ, ಇವತ್ತಿನ ವಾತಾವರಣ ನೋಡಿದ್ರೆ ಮರ್ಯಾದೆ ಇದ್ದವರು ರಾಜಕಾರಣದಲ್ಲಿ ಇರಬಾರದು. ಮತದಾರರಿಗೆ ಆಮಿಷ ಒಡ್ಡಲಾಗುತ್ತದೆ ಎಂಬ ಮಾಹಿತಿ ನನ್ನ ಕಿವಿಗೆ ಬಿದ್ದಿದೆ. ಒಂದೊಂದು ಮತಕ್ಕೆ ಐದು ಸಾವಿರ ಕೊಟ್ಟಿದ್ದಾರೆಂಬ ಸುದ್ದಿ ಕೇಳಿ ಶಾಕ್ ಆಯ್ತು ಎಂದು ಹೇಳಿದರು.


ಕೆಲವು ಮತದಾರರು ಆಮಿಷಕ್ಕೆ ಒಳಗಾಗುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಈ ರೀತಿ ಆಗಬಾರದು‌. ಆಸೆ ಆಕಾಂಕ್ಷೆಗಳಿಗೆ ಬಲಿಯಾಗದೇ ಜನರು ಅಭಿವೃದ್ಧಿ ನೋಡಿ ಮತದಾನ ಮಾಡುತ್ತಾರೆ ಅನ್ನೋ ವಿಶ್ವಾಸವಿದೆ ಎಂದರು.




ಇದನ್ನೂ ಓದಿ: Karnataka Election 2023 Voting Live: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿರುಸಿನ ಮತದಾನ, ಬೆಳ್ಳಂಬೆಳಗ್ಗೆ ವಿಐಪಿ ವೋಟಿಂಗ್


ವ್ಯವಸ್ಥೆ ಬದಲಾಗಬೇಕೆಂದ ಹೊರಟ್ಟಿ 

top videos


    ಇವತ್ತಿನ ರಾಜಕಾರಣ ಕುಲಗೆಟ್ಟು ಹೋಗಿದೆ. ಅಭಿವೃದ್ಧಿ ಆಧಾರಿತ ಚರ್ಚೆಗಳಲಾಗಲಿಲ್ಲ. ಆರೋಪ ಪ್ರತ್ಯಾರೋಪಗಳಿಗೆ ಪ್ರಚಾರ ಸೀಮಿತ ಆಯಿತು. ಇಂತಹ ವ್ಯವಸ್ಥೆ ಬದಲಾಗಬೇಕಿದೆ ಎಂದು ಬಸವರಾಜ್ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

    First published: