Mangaluru: ಕದ್ರಿ ದೇವಾಲಯಕ್ಕೆ ನುಗ್ಗಿದ ಮೂವರು ಅಪರಿಚಿತರು; ಮನೆ ಮಾಡಿದ ಆತಂಕ

ಕದ್ರಿ ದೇವಸ್ಥಾನ

ಕದ್ರಿ ದೇವಸ್ಥಾನ

Kadri Temple: ಮೂವರ ಅಪರಿಚಿತರ ಆಗಮನದಿಂದ ಕದ್ರಿ ದೇವಾಲಯದ ವ್ಯಾಪ್ತಿಯಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.

  • News18 Kannada
  • 5-MIN READ
  • Last Updated :
  • Dakshina Kannada, India
  • Share this:

ಮಂಗಳೂರು: ಕದ್ರಿ ಮಂಜುನಾಥನ ದೇವಸ್ಥಾನಕ್ಕೆ (Kadri Temple) ಅಪರಿಚಿತರು ನುಗ್ಗಿರುವ ಘಟನೆ ನಡೆದಿದೆ. ಬೈಕ್​ನಲ್ಲಿ ದೇವಸ್ಥಾನಕ್ಕೆ ನುಗ್ಗಿದ ಮೂವರನ್ನು ಹಿಡಿದು ಸ್ಥಳೀಯರು ಪೊಲೀಸರ (Police) ವಶಕ್ಕೆ ನೀಡಲಾಗಿದೆ. ಅಸೈಗೋಳಿ ನಿವಾಸಿ ಹಸನ್ ಶಾಹಿನ್‌, ಜಾಫರ್, ಫಾರೂಕ್ ಎಂಬವರನ್ನು ಪೊಲೀಸರಿಗೆ ವಶಕ್ಕೆ ನೀಡಲಾಗಿದೆ. ಮೂವರನ್ನು ಕದ್ರಿ ಪೊಲೀಸ್ ಠಾಣೆಯಲ್ಲಿ (Kadri Police Stattion) ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇತ್ತ ದೇವಸ್ಥಾನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಹಿಂದೆ ಶಂಕಿತ ಉಗ್ರ ಶಾರಿಕ್ (Shariq) ಕದ್ರಿ ದೇವಸ್ಥಾನವನ್ನು ಟಾರ್ಗೆಟ್ ಮಾಡಿದ್ದನು.


ಈ ಹಿನ್ನೆಲೆ ಮೂವರ ಅಪರಿಚಿತರ ಆಗಮನದಿಂದ ಕದ್ರಿ ದೇವಾಲಯದ ವ್ಯಾಪ್ತಿಯಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.


ಕದ್ರಿ ಮಂಜುನಾಥ ದೇವಸ್ಥಾನ ಶಿವನಿಗೆ ಅರ್ಪಿತವಾದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು 10 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.




ಬಸ್​​ಗಳ ನಡುವೆ ಮುಖಾಮುಖಿ ಡಿಕ್ಕಿ


ಎರಡು ಬಸ್​ಗಳ (Bus) ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಕಾರಣ 70ಕ್ಕೂ ಹೆಚ್ಚು ಮಂದಿ ಗಾಯಗೊಂಡು, ಮೂವರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ (Shivamogga) ತಾಲೂಕಿನ ಚೊರಡಿ ಗ್ರಾಮದ ಕುಮದ್ವತಿ ಸೇತುವೆ ಬಳಿ ನಡೆದಿದೆ.


ಇದನ್ನೂ ಓದಿ:  Mangaluru Cooker Bomb: ಈ 6 ಸ್ಥಳಗಳನ್ನು ಟಾರ್ಗೆಟ್ ಮಾಡಿದ್ನಾ ರಾಕ್ಷಸ ಶಾರೀಕ್?


ಶ್ರೀನಿವಾಸ ಬಸ್ ಹಾಗೂ ಕಾಳಪ್ಪ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.


top videos



    ಡಿಕ್ಕಿ ರಭಸಕ್ಕೆ ಎರಡು ಬಸ್​​ಗಳ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು (Police) ಗಾಯಗೊಂಡಿರುವವರನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ (Hospital) ದಾಖಲಿಸುವ ಕಾರ್ಯ ಮಾಡುತ್ತಿದ್ದಾರೆ.

    First published: