Hindi Budget: ಬಜೆಟ್​​​ನಲ್ಲೂ ಹಿಂದಿ ಹೇರಿಕೆ; ಕನ್ನಡಿಗರ ಆಕ್ರೋಶ!

ಕನ್ನಡ ಧ್ವಜ

ಕನ್ನಡ ಧ್ವಜ

ಸ್ವಾತಂತ್ರ ಬಂದಾಗಿನಿಂದಲೂ ಎಲ್ಲ ಕೇಂದ್ರ ಸರ್ಕಾರಗಳು ಹಿಂದಿಯ ಬೆನ್ನಿಗೆ ನಿಲ್ಲುತ್ತ ಬಂದಿವೆ. ಇದಕ್ಕೆ ಮುಖ್ಯ ಕಾರಣ ಸಂವಿಧಾನದ ವಿಧಿ 343ರಿಂದ 351ರವರೆಗೆ ಬರೆಯಲಾಗಿರುವ ಕೇಂದ್ರ ಸರ್ಕಾರದ ಭಾಷಾ ನೀತಿ. ಇದರನ್ವಯ ಇಡೀ ದೇಶದಲ್ಲಿ ಎಲ್ಲೆಡೆ ಹಿಂದಿಯನ್ನು ಸ್ಥಾಪಿಸಿ, ಭಾರತವೆಂದರೆ ಹಿಂದಿ ಎಂಬಂತೆ ಮಾರ್ಪಡಿಸುವ ಹೊಣೆಯನ್ನೇ ಕೇಂದ್ರಕ್ಕೆ ನೀಡಲಾಗಿದೆ.

ಮುಂದೆ ಓದಿ ...
  • News18
  • 4-MIN READ
  • Last Updated :
  • Share this:

ಬೆಂಗಳೂರು(ಜ.01): ಹಿಂದಿನಿಂದಲೂ ಕೇಂದ್ರ ಸರ್ಕಾರ ಆಯಾ ರಾಜ್ಯದ ಸ್ಥಳೀಯ ಸರ್ಕಾರಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಲೇ ಬಂದಿದೆ ಎಂಬ ಗಂಭೀರ ಆರೋಪ ಎದುರಿಸುತ್ತಿತ್ತು. ಇನ್ನು ಅಧಿಕಾರದಲ್ಲಿರುವ ಉತ್ತರ ಭಾರತದವರಂತೂ ತಮ್ಮ ಭಾಷೆಯನ್ನು ದಕ್ಷಿಣ ಭಾರತದ ಮೇಲೆ ಹೇರಲು ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ ಎಂಬ ಮಾತುಗಳೂ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿತ್ತು. ಕೇಂದ್ರ ಹಿಂದಿ ಪರ ನೀತಿಯಿಂದ ಸ್ಥಳೀಯ ಭಾಷೆಗಳು ಬಡವಾಗುತ್ತಿವೆ ಎಂಬ ವಾದ ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಹೀಗಿರುವಾಗ ಕೇಂದ್ರ ಬಜೆಟ್​ 2019ರಲ್ಲೂ ಇದು ಪುನರಾವರ್ತಿತವಾಗಿದೆ.

ಬ್ಯಾಂಕ್​​, ಶಿಕ್ಷಣ, ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿಯೂ ಹಿಂದಿಯದ್ದೇ ಕಾರುಬಾರು ಕಳೆದೈದು ವರ್ಷಗಳಿಂದ ಆರಂಭವಾಗಿದೆ. ಇದಲ್ಲದೇ ಸಂಸತ್​​ನಲ್ಲಿಯೂ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಆರೋಪಕ್ಕೆ ಪುಷ್ಠಿ ನೀಡುವಂತೆ, ಕೇಂದ್ರ ಬಜೆಟ್​​ ಮಂಡನೆ ವೇಳೆ ಹಿಂದಿ ಭಾಷೆ ಬಳಸಿ, ಅದರ ಮೇಲಿನ ತಮ್ಮ ವ್ಯಾಮೋಹವನ್ನು ಹಣಕಾಸು ರಾಜ್ಯ ಖಾತೆ ಸಚಿವ ಪಿಯೂಷ್​ ಗೋಯಲ್​ ತೋರಿದ್ದಾರೆ. ಸಂಸತ್​​ನಲ್ಲಿ ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರದ ನಡೆ ವಿರುದ್ಧ ಈಗಾಗಲೇ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಸ್ಥಳೀಯ ರಾಜ್ಯ ಸರ್ಕಾರಗಳು ಹೋರಾಟ ಮಾಡುತ್ತಲೇ ಇವೆ. ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳದಲ್ಲಿ ಎಷ್ಟೇ ಹಿಂದಿ ಹೇರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದರೂ ಕೇಂದ್ರ ಕ್ಯಾರೇ ಎನ್ನುತ್ತಿಲ್ಲ ಎಂಬ ಅಭಿಪ್ರಾಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ನಾವು ಎಷ್ಟೇ ಕೂಗಾಡಿದರೂ ಕೇಂದ್ರ ತನ್ನ ಪಾಡಿಗೆ ಸ್ಥಳೀಯರ ಮೇಲೆ ಹಿಂದಿ ಹೇರಿಕೆ ಬಾಣ ಬಿಡುತ್ತಲೇ ಬಂದಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ಸಾಮಾನ್ಯವಾಗಿ ಬಜೆಟ್​ ಮಂಡನೆ ಇಂಗ್ಲೀಷ್​ ಭಾಷೆಯಲ್ಲಿರುತ್ತದೆ. ಆದರೆ, ಹಣಕಾಸು ಸಚಿವರು ಮಾತ್ರ ಬಜೆಟ್​​ ಮಂಡನೆ ವೇಳೆ ಹೆಚ್ಚು ಹಿಂದಿ ಬಳಕೆ ಮಾಡಿದರು. ಆಗಾಗ ಮಧ್ಯೆ ಕಾಟಚಾರಕ್ಕೆ ಇಂಗ್ಲೀಷ್​​ ಬಳಕೆ ಮಾಡಿದಂತೆ ಭಾಸವಾಗಿದ್ದು ಸುಳ್ಳಲ್ಲ.

2001ರಿಂದ 2011ರ ವರೆಗೆ ಹಿಂದಿ ಭಾಷೆಯನ್ನು ಬಳಸುವ ಜನರ ಸಮೀಕ್ಷೆ ಬಿಡುಗಡೆಯಾಗಿತ್ತು. ಸಮೀಕ್ಷೆ ಪ್ರಕಾರ ದಕ್ಷಿಣ ಭಾರತದಲ್ಲಿ ಹಿಂದಿ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ, ಸ್ಥಳೀಯರ ನೆಲದಲ್ಲಿಯೇ ಅವರ ಭಾಷೆ ಕಡಿಮೆಯಾಗುತ್ತಿದೆ ಎಂದು ಹೇಳಿತ್ತು. ಇತ್ತೀಚೆಗಂತೂ ಹಿಂದಿ ದಕ್ಷಿಣ ಭಾರತದ ಸ್ಥಳೀಯ ಭಾಷೆಗಳಾದ, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷಿಗರ ಮೇಲೆ ದಂಡಯಾತ್ರೆ ಮಾಡುತ್ತಿದೆ ಎಂಬ ಮಾತುಗಳೂ ಕೇಳಿ ಬಂದವು. 

ದಿನೆದಿನೇ ದ್ರಾವಿಡ ಮತ್ತು ಆರ್ಯನ್​ ಬಿಕ್ಕಟ್ಟು ಮತ್ತೆ ಚರ್ಚೆಗೆ ಬರುತ್ತಿದೆ. ಹಿಂದಿ ಹೇರಿಕೆಯ ವಿರುದ್ಧ ದಕ್ಷಿಣದ ರಾಜ್ಯಗಳ ರಾಜಕೀಯ ಮುಖಂಡರು ಬಹಿರಂಗವಾಗಿ ಪ್ರತಿಭಟಿಸಿದ್ದರು. ಜತೆಗೆ ಹಿಂದಿ ಹೇರಿಕೆಯಿಂದ ಸ್ಥಳೀಯ ಭಾಷೆಗಳ ಬಳಕೆ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹಿಂದಿ ಹೇರಿಕೆ ಮತ್ತು ಇಂಗ್ಲೀಷ್​ ಪ್ರಭಾವವನ್ನು ಮೀರಿ ಸ್ಥಳೀಯ ಭಾಷೆಗಳನ್ನು ಬೆಳೆಸಬೇಕು ಎಂದು ಹೊರಟಿದ್ದಾರೆ. ಆದರೆ, ಕೇಂದ್ರ ಮಾತ್ರ ರಾಷ್ಟ್ರೀಯ ಭಾಷೆ ಎಂದು ಹೇಳುತ್ತಾ ಹಿಂದಿಯನ್ನು ಹೇರುತ್ತಲೇ ಇದೆ. ನಮ್ಮ ಭಾಷೆಯ ಅಸ್ತಿತ್ವಕ್ಕೆ ನಾವು ಪರದಾಡುವಂತಾಗಿದೆ ಎನ್ನುತ್ತಾರೆ ಕನ್ನಡ ಪರ ಹೋರಾಟಗಾರರೊಬ್ಬರು.

ಭಾರತವೂ ಭಾಷೆ, ಧರ್ಮ, ಆಚಾರ, ವಿಚಾರ, ಆಹಾರ ಹೀಗೆ ಎಲ್ಲದರಲ್ಲೂ ವೈವಿಧ್ಯತೆಯೇ ತುಂಬಿದೆ. ಈ ಕಾರಣಕ್ಕಾಗಿಯೇ ವಿವಿಧತೆಯಲ್ಲಿ ಏಕತೆಯನ್ನು ಭಾರತ ಸಾಧಿಸಿದೆ. ಆದರೆ ಈ ಎಲ್ಲ ವೈವಿಧ್ಯತೆಯನ್ನು ಪ್ರತಿನಿಧಿಸುವ ವ್ಯವಸ್ಥೆ ಎಂಬಂತಿರುವ ಕೇಂದ್ರ ಸರ್ಕಾರ ಭಾರತದ ವಿವಿಧತೆಯ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ಹೊಂದಿದೆ ಅನ್ನುವ ಪ್ರಶ್ನೆ ಈಗ ಮೇಲೆದ್ದಿದೆ. ಇದನ್ನು ಪದೇ ಪದೆ ಎತ್ತಬೇಕಾದ ಅನಿವಾರ್ಯತೆ ಹಿಂದಿಯೇತರ ಭಾಷಿಕರಿಗೆ ಒದಗಿದೆ.

ಸ್ವಾತಂತ್ರ ಬಂದಾಗಿನಿಂದಲೂ ಎಲ್ಲ ಕೇಂದ್ರ ಸರ್ಕಾರಗಳು ಹಿಂದಿಯ ಬೆನ್ನಿಗೆ ನಿಲ್ಲುತ್ತ ಬಂದಿವೆ. ಇದಕ್ಕೆ ಮುಖ್ಯ ಕಾರಣ ಸಂವಿಧಾನದ ವಿಧಿ 343ರಿಂದ 351ರವರೆಗೆ ಬರೆಯಲಾಗಿರುವ ಕೇಂದ್ರ ಸರ್ಕಾರದ ಭಾಷಾ ನೀತಿ. ಇದರನ್ವಯ ಇಡೀ ದೇಶದಲ್ಲಿ ಎಲ್ಲೆಡೆ ಹಿಂದಿಯನ್ನು ಸ್ಥಾಪಿಸಿ, ಭಾರತವೆಂದರೆ ಹಿಂದಿ ಎಂಬಂತೆ ಮಾರ್ಪಡಿಸುವ ಹೊಣೆಯನ್ನೇ ಕೇಂದ್ರಕ್ಕೆ ನೀಡಲಾಗಿದೆ. ಅದಕ್ಕಾಗಿ ಸಾವಿರಾರು ಕೋಟಿ ತೆರಿಗೆದಾರರ ಹಣವನ್ನು ವರ್ಷವೂ ಕೇಂದ್ರ ಸರ್ಕಾರ ಹಿಂದಿ ಪ್ರಚಾರಕ್ಕೆಂದೇ ಮೀಸಲಿಡುತ್ತ ಬಂದಿದೆ.

ಕೇಂದ್ರ ಹೇಗೆ ಹಿಂದಿ ಹೇರಿಕೆ ಮಾಡುತ್ತದೆ?:


  • ದಕ್ಷಿಣ ಭಾರತದಲ್ಲಿನ ಕೇಂದ್ರ ಸರ್ಕಾರಿ ಕಚೇರಿಯಲ್ಲಿ ಹಿಂದಿ ಬಳಕೆ ಕಡ್ಡಾಯ

  • ಸಿಬಿಎಸ್‌ಇ ಮತ್ತು ಕೇಂದ್ರಿಯ ವಿದ್ಯಾಲಯಗಳಲ್ಲಿ ಹತ್ತನೇ ತರಗತಿಯವರೆಗೂ ಹಿಂದಿ ಬಳಕೆ ಮಾಡಲೇಬೇಕು

  • ಪ್ರತೀ ಉನ್ನತ ಶಿಕ್ಷಣದ ಸಂಸ್ಥೆಗಳಲ್ಲಿಯೂ ಇಂಗ್ಲಿಷ್‌ ಜತೆಗೆ ಹಿಂದಿ ಇರಬೇಕು

  • ಕೇಂದ್ರ ಸರ್ಕಾರ ಕೊಡುವ ಜಾಹೀರಾತಿನಲ್ಲಿ 50% ಹಣ ಕೇವಲ ಹಿಂದಿಗೆ ಮೀಸಲಿಡಬೇಕು

  • ಒಳ್ಳೆಯ ಇಂಗ್ಲಿಷ್‌ ಪುಸ್ತಕಗಳನ್ನು ಹಿಂದಿಗೆ ಅನುವಾದಿಸುವುದನ್ನು ಉತ್ತೇಜಿಸಬೇಕು

  • ಏರ್‌ ಇಂಡಿಯಾ ವಿಮಾನ ಸಂಸ್ಥೆಯ ವೇಳಾಪಟ್ಟಿ ಹಾಗೂ ಟಿಕೆಟ್‌ ಹಿಂದಿಯಲ್ಲಿರಲಿ

  • ಹಿಂದಿ ಬಲ್ಲವರಿಗೆ ಯಾವುದೇ ಅನನುಕೂಲವಾಗದಂತೆ ರೈಲ್ವೆ ಇಲಾಖೆಯ ಟಿಕೆಟ್‌ ಮೇಲೆ ಕಡ್ಡಾಯವಾಗಿ ಹಿಂದಿ ಇರಬೇಕು

  • ಎಲ್ಲ ಪಾಸ್‌ ಪೋರ್ಟ್‌ ಕಚೇರಿಗಳಲ್ಲಿ ಹಿಂದಿಯಲ್ಲಿ ತುಂಬಲಾದ ಅರ್ಜಿಯನ್ನು ಸ್ವೀಕರಿಸಬೇಕು

  • ಯುಪಿಎಸ್ಸಿ ಪರೀಕ್ಷೆಗಳನ್ನು ಹಿಂದಿ ಮಾಧ್ಯಮದಲ್ಲಿ ಬರೆಯಬೇಕು

  • ಹಿಂದಿ ಮಾತನಾಡಲು ಬರುವ ರಾಷ್ಟ್ರಪತಿ, ಮಂತ್ರಿಗಳು ಹಿಂದಿಯಲ್ಲೇ ಮಾತನಾಡುವಂತೆ ವಿನಂತಿಸಬೇಕು

  • ಎಲ್ಲ ವಿಮಾನಗಳಲ್ಲೂ ಮೊದಲು ಹಿಂದಿ ನಂತರ ಇಂಗ್ಲಿಷಿನಲ್ಲಿ ಘೋಷಣೆಗಳನ್ನು ಮಾಡಬೇಕು.


ಸಂಸತ್​​ನಲ್ಲಿ ಹಿಂದಿ ಬಳಕೆ: ಕನ್ನಡಿಗರ ಆಕ್ರೋಶ; ಇಲ್ಲಿದೆ ಟ್ವೀಟ್ಸ್​​









First published: