ಯಲಹಂಕದ ಬಿಎಸ್​​ಎಫ್ ಕ್ಯಾಂಪ್​​ನಲ್ಲಿ ಸೈನಿಕರ ವಾರ್ಷಿಕ ಕ್ರೀಡಾಕೂಟ 

ಯೋಧರು

ಯೋಧರು

ಯಲಹಂಕದ ಬಿ.ಎಸ್.ಎಫ್ ನೆಲೆಗೂ ಕಾಲಿಟ್ಟಿದ್ದ ಕೊರೋನಾ 30 ಜನರಿಗೆ ಭಾದಿಸಿತ್ತು , ದೈಹಿಕ ಸದೃಢತೆಯಿಂದ ಯಾರಿಗೂ ಏನು ತೊಂದರೆ ಆಗಿಲ್ಲ,

  • Share this:

ಯಲಹಂಕ(ನ.07): ಕೊರೋನಾದಿಂದಾಗಿ ಇಡೀ ಜಗತ್ತು ತತ್ತರಿಸಿದೆ, ವೈದ್ಯರು, ಪೊಲೀಸರು, ಡಿ.ಸಿ, ಎ.ಸಿಗಳನ್ನೂ ಬಿಟ್ಟಿಲ್ಲ. ಹಾಗೆ ದೇಶ ಕಾಯೋ ಸೈನಿಕರನ್ನೂ ಬಿಟ್ಟಿಲ್ಲ, ಅಂತಹ  ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಲು ಯಲಹಂಕ ಬಿ.ಎಸ್.ಎಫ್ ನ ಸಿಗ್ನಲ್ ಟ್ರೈನಿಂಗ್ ಸ್ಕೂಲ್ ನಲ್ಲಿ ಸೈನಿಕರಿಗಾಗಿ ವಾರ್ಷಿಕ ಕ್ರೀಡಾ ಕೂಟ ಆಯೋಜನೆ ಮಾಡಲಾಗಿತ್ತು. ಸೈನಿಕರಿಗೆ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಿಸಲು ಆಯೋಜನೆ ಮಾಡಿದ್ದ ಕ್ರೀಡೆಯಲ್ಲಿ ಸೈನಿಕರು ಉತ್ಸಾಹದಿಂದ ಭಾಗವಹಿಸಿದ್ರು. ಚಂಗನೆ ನೆಗೆದು ಚಿರತೆಯಂತೆ ಗುರಿಯತ್ತ ಮುನ್ನುಗ್ಗಿದ ಕ್ರೀಡಾಪಟುಗಳಿಗೆ ಗ್ಯಾಲರಿಯಲ್ಲಿ ಕೂತು ಪ್ರೇಕ್ಷಕರು ಹುರಿದುಂಬಿಸಿದರು. ಹಗ್ಗ ಹಿಡಿದು ಬಲ ಭೀಮರಂತೆ ಜಗ್ಗುತ್ತಿರುವ ಹುರಿಯಾಳುಗಳು ಸೆಣಸಾಡುತ್ತಿದ್ದರು.


ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕಿನ ಬಿ.ಎಸ್.ಎಫ್ ಕ್ಯಾಂಪ್ ನ ಸಿಗ್ನಲ್ ಟ್ರೈನಿಂಗ್ ಸ್ಕೂಲ್ ನ ಸೈನಿಕರ ನಡುವೆ ನಡೆದ ವಾರ್ಷಿಕ  ಕ್ರೀಡಾ ಕೂಟ ನೆರೆದಿದ್ದವರ  ಮೈ ನವಿರೇಳಿಸಿತ್ತು, ಕೊರೋನಾ ಮಹಾಮಾರಿ ಇಡೀ ಜಗತ್ತನ್ನು ಕಿತ್ತು ತಿನ್ನುತ್ತಿರುವ ಸಮಯದಲ್ಲಿ ಜಗತ್ತಿನಾದ್ಯಂತ ವೈದ್ಯರು ಲಸಿಕೆ ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.


108 ಆರೋಗ್ಯ ಸೇವೆಗೆ ಮೇಜರ್ ಸರ್ಜರಿ ಮಾಡಲು ಸಚಿವ ಡಾ.ಕೆ.ಸುಧಾಕರ್ ನಿರ್ಧಾರ


ನಮ್ಮ ಪ್ರಧಾನಿಗಳು ನೀಡಿದ ಸೂಚನೆಯಂತೆ ನಾವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಡಿದ್ದೇವೆ,  ಸೈನಿಕರ ದೈಹಿಕ ಚಟುವಟಿಕೆಯಿಂದ ಫಿಟ್ನೆಸ್​​ಗೆ ತೊಂದರೆ ಆಗದ ಹಾಗೆ ತರಬೇತಿ ಮುಂದುವರೆಸಿ ದೇಶದ ಭದ್ರತೆಗೆ ನಮ್ಮ ಕರ್ತವ್ಯ ಮುಂದುವರೆಸುತ್ತಿದ್ದೇವೆ. ಎದೆಗುಂದದ ಸೈನಿಕರ ಸ್ಥೈರ್ಯಕ್ಕಾಗಿ ಇಂತಹಾ ಕ್ರೀಡಾ ಕೂಟಗಳು ಸಹಕಾರಿ ಆಗಲಿವೆ ಎಂದು ಬಿ.ಎಸ್.ಎಫ್ ಐ‌ಜಿಪಿ ಡಾ.ಸಾಬು ಎ ಜೋಸೆಫ್ ಸಂತಸ ವ್ಯಕ್ತಪಡಿಸಿದರು.


ಇನ್ನು ಯಲಹಂಕದ ಬಿ.ಎಸ್.ಎಫ್ ನೆಲೆಗೂ ಕಾಲಿಟ್ಟಿದ್ದ ಕೊರೋನಾ 30 ಜನರಿಗೆ ಭಾದಿಸಿತ್ತು , ದೈಹಿಕ ಸದೃಢತೆಯಿಂದ ಯಾರಿಗೂ ಏನು ತೊಂದರೆ ಆಗಿಲ್ಲ, ಇನ್ನೂ ಕ್ರೀಡಾಪಟು ಬಿ.ಎಸ್.ಎಫ್ ಪೇದೆ ನೀಲೇಶ್ ಮಾತನಾಡಿ ನಮ್ಮ ದೈಹಿಕ ಮಾನಸಿಕ ಸದೃಢತೆಗಾಗಿ ಕ್ರೀಡೆ ಅತ್ಯವಶ್ಯಕ, ಇದರಲ್ಲಿ ನಾನು ಭಾಗವಹಿಸಿ ಪದಕ ಗೆದ್ದಿದ್ದು ಸಂತಸ ತಂದಿದೆ ಎಂದು ಸಂತಸ ಹಂಚಿಕೊಂಡರು.

Published by:Latha CG
First published: