• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Talguppa Express: ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನ ಕಾಲೇ ತುಂಡಾಯ್ತು!

Talguppa Express: ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನ ಕಾಲೇ ತುಂಡಾಯ್ತು!

ತಾಳಗುಪ್ಪ ರೈಲ್ವೆ ನಿಲ್ದಾಣ

ತಾಳಗುಪ್ಪ ರೈಲ್ವೆ ನಿಲ್ದಾಣ

Shivamogga News: ಸೋಮವಾರ ರಾತ್ರಿ ತಾಳಗುಪ್ಪ ಎಕ್ಸ್​ಪ್ರೆಸ್ ರೈಲನ್ನು ಹತ್ತಲು ಹೋದ ಯುವಕ ಪ್ಲಾಟ್​ಫಾರ್ಮ್​ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಇದರಿಂದ ಆತನ ಕಾಲು ರೈಲಿನ ಚಕ್ರಕ್ಕೆ ಸಿಲುಕಿ ತುಂಡಾಗಿದೆ.

  • Share this:

    ಶಿವಮೊಗ್ಗ (ಜೂನ್ 29): ಚಲಿಸುತ್ತಿದ್ದ ರೈಲನ್ನು ಹತ್ತಲು ಹೋದ ಯುವಕನ ಕಾಲು ತುಂಡಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯ ತಾಳಗುಪ್ಪದಲ್ಲಿ ನಿನ್ನೆ ರಾತ್ರಿ ನಡೆದಿದೆ. ಸೋಮವಾರ ರಾತ್ರಿ ತಾಳಗುಪ್ಪ ಎಕ್ಸ್​ಪ್ರೆಸ್ (Talguppa Express) ರೈಲನ್ನು ಹತ್ತಲು ಹೋದ ಯುವಕ ಪ್ಲಾಟ್​ಫಾರ್ಮ್​ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಇದರಿಂದ ಆತನ ಕಾಲು ರೈಲಿನ ಚಕ್ರಕ್ಕೆ ಸಿಲುಕಿ ತುಂಡಾಗಿದೆ.


    ತಾಳಗುಪ್ಪ- ಬೆಂಗಳೂರು ಮಾರ್ಗದ ರೈಲನ್ನು ಹತ್ತಲು ಮುಂದಾಗಿದ್ದ 18 ವರ್ಷದ ಯುವಕ ನವೀನ್ ಕಾಲು ಮುರಿದುಕೊಂಡಿದ್ದಾನೆ. ಸಿದ್ಧಾಪುರ ತಾಲೂಕಿನ ಕವಚೂರಿನ ನವೀನ್ ತಾಳಗುಪ್ಪದಿಂದ ಬೆಂಗಳೂರಿಗೆ ಹೋಗುವ ರೈಲಿಗೆ ಟಿಕೆಟ್ ಬುಕ್ ಮಾಡಿಸಿಕೊಂಡಿದ್ದ. ನಿನ್ನೆ ರಾತ್ರಿ ಸುಮಾರು 8.20ರ ವೇಳೆಗೆ ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ಲಾಟ್​ಫಾರ್ಮ್​ನಲ್ಲಿ ಓಡುವಾಗ ಕೆಳಗೆ ಬಿದ್ದ ಆತನ ಕಾಲು ರೈಲಿನ ಚಕ್ರಕ್ಕೆ ಸಿಲುಕಿ ತುಂಡಾಗಿ ಬಿದ್ದಿದೆ. ಮಳೆ ನೀರು ಬಿದ್ದು ಪ್ಲಾಟ್ ಫಾರ್ಮ್ ಜಾರುತ್ತಿದ್ದುದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.


    ಇದನ್ನೂ ಓದಿ: Karnataka Weather Today: ಇಂದಿನಿಂದ 3 ದಿನ ಕರ್ನಾಟಕದಲ್ಲಿ ಭಾರೀ ಮಳೆ; ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ


    ಪ್ಲಾಟ್ ಫಾರ್ಮ್ ಮೇಲೆ ಓಡಿ ಬಂದು ರೈಲನ್ನು ಹತ್ತಲು ಯತ್ನಿಸಿದ ನವೀನ್ ಕಾಲು ಜಾರಿ ಬಿದ್ದಿದ್ದಾನೆ. ಆಗ ಆತನ ಕಾಲು ರೈಲಿನ ಚಕ್ರಕ್ಕೆ ಸಿಲುಕಿಕೊಂಡಿದೆ. ನವೀನ್ ಕೈಗೆ ಕೂಡ ಗಂಭೀರ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನವೀನ್ ಒಂದು ಕಾಲನ್ನೇ ಕಳೆದುಕೊಂಡಿದ್ದಾನೆ. ಸಾಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ನವೀನ್ ಜೊತೆಗೆ ಇನ್ನೋರ್ವ ಯುವಕ ಕೂಡ ಇದ್ದು, ನವೀನ್​ಗಿಂತ ಮೊದಲೇ ರೈಲು ಹತ್ತಿದ್ದ ಆತ ತನ್ನ ಗೆಳೆಯ ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದಂತೆ ರೈಲಿನಿಂದ ಕೆಳಗೆ ಹಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

    Published by:Sushma Chakre
    First published: