ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ; ನಗರದಲ್ಲಿ 48ಗಂಟೆಗಳ ಕಾಲ ನಿಷೇಧಾಜ್ಞೆ
ಸರ್ಕಾರ ಯಾವುದೇ ಕ್ಷಣದಲ್ಲಿ ಬೀಳಬಹುದು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ.

ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಗಲಾಟೆ
- News18
- Last Updated: July 23, 2019, 6:57 PM IST
ಬೆಂಗಳೂರು (ಜು.23) :ಪಕ್ಷೇತರ ಶಾಸಕರನ್ನು ಬಿಜೆಪಿ ನಾಯಕರು ಹಿಡಿದಿಟ್ಟು ಕೊಂಡಿದ್ದಾರೆ. ಅವರನ್ನು ಕರೆದೊಯ್ಯತ್ತೇವೆ ಎಂದು ಮುಂದಾದ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ನಡುವೆ ಘರ್ಷಣೆ ನಡೆದಿದ್ದು, ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರು.
ಆರ್ ಅಶೋಕ್ ರೆಸ್ ಕೋರ್ಸ್ ರಸ್ತೆಯ ಬಳಿ ಅಪಾರ್ಟ್ಮೆಂಟ್ನಲ್ಲಿ ಪಕ್ಷೇತರ ಶಾಸಕರನ್ನು ಕರೆತಂದು ಇರಿಸಿದ್ದಾರೆ. ಅವರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಐವನ್ ಡಿಸೋಜಾ ಮುಂದಾದರು. ಈ ವೇಳೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಲಾಟೆ ನಡೆಯಿತು. ಪರಿಸ್ಥಿತಿ ಉದ್ವಿಘ್ನಗೊಂಡ ಹಿನ್ನೆಲೆ ಪೊಲೀಸರು ನಗರದಾದ್ಯಂತ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ ವಿದಾಯದ ಭಾಷಣ ಮಾಡುತ್ತಿದ್ದು ಸರ್ಕಾರ ಯಾವುದೇ ಕ್ಷಣದಲ್ಲಿ ಬೀಳಬಹುದು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ.ಇದನ್ನು ಓದಿ: ಮದುವೆಯಾಗುವಾಗ ರಾಜಕೀಯಕ್ಕೆ ಬರಬಾರದು ಎಂದು ಅನಿತಾ ಷರತ್ತು ವಿಧಿಸಿದ್ದರು; ಸಿಎಂ ಕುಮಾರಸ್ವಾಮಿ
ಇಂದು ಸಂಜೆ ಆರುಗಂಟೆಯಿಂದ ಈ ನಿಷೇಧಾಜ್ಞೆ ಜಾರಿಯಾಗಿದ್ದು, ಜು.25ರ ಸಂಜೆವರೆಗೆ ಇರಲಿದೆ, ನಿಷೇಧಾಜ್ಞೆ ಜಾರಿ ಇರುವ ಹಿನ್ನೆಲೆ ಐದು ಜನಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವಂತಿಲ್ಲ. ಜೊತೆಗೆ ಎರಡು ದಿನಗಳ ಕಾಲ ಎಲ್ಲಾ ಬಾರ್, ಪಬ್, ವೈನ್ ಶಾಪ್ಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ ಅವರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಆರ್ ಅಶೋಕ್ ರೆಸ್ ಕೋರ್ಸ್ ರಸ್ತೆಯ ಬಳಿ ಅಪಾರ್ಟ್ಮೆಂಟ್ನಲ್ಲಿ ಪಕ್ಷೇತರ ಶಾಸಕರನ್ನು ಕರೆತಂದು ಇರಿಸಿದ್ದಾರೆ. ಅವರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಐವನ್ ಡಿಸೋಜಾ ಮುಂದಾದರು. ಈ ವೇಳೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಲಾಟೆ ನಡೆಯಿತು. ಪರಿಸ್ಥಿತಿ ಉದ್ವಿಘ್ನಗೊಂಡ ಹಿನ್ನೆಲೆ ಪೊಲೀಸರು ನಗರದಾದ್ಯಂತ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ ವಿದಾಯದ ಭಾಷಣ ಮಾಡುತ್ತಿದ್ದು ಸರ್ಕಾರ ಯಾವುದೇ ಕ್ಷಣದಲ್ಲಿ ಬೀಳಬಹುದು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ.ಇದನ್ನು ಓದಿ: ಮದುವೆಯಾಗುವಾಗ ರಾಜಕೀಯಕ್ಕೆ ಬರಬಾರದು ಎಂದು ಅನಿತಾ ಷರತ್ತು ವಿಧಿಸಿದ್ದರು; ಸಿಎಂ ಕುಮಾರಸ್ವಾಮಿ
ಇಂದು ಸಂಜೆ ಆರುಗಂಟೆಯಿಂದ ಈ ನಿಷೇಧಾಜ್ಞೆ ಜಾರಿಯಾಗಿದ್ದು, ಜು.25ರ ಸಂಜೆವರೆಗೆ ಇರಲಿದೆ, ನಿಷೇಧಾಜ್ಞೆ ಜಾರಿ ಇರುವ ಹಿನ್ನೆಲೆ ಐದು ಜನಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವಂತಿಲ್ಲ. ಜೊತೆಗೆ ಎರಡು ದಿನಗಳ ಕಾಲ ಎಲ್ಲಾ ಬಾರ್, ಪಬ್, ವೈನ್ ಶಾಪ್ಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ ಅವರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ತಿಳಿಸಿದ್ದಾರೆ.