ಬೆಂಗಳೂರು (ಜ. 12): ಕಳೆದ ನಾಲ್ಕು ವರ್ಷಗಳಿಂದ ಪರಪ್ಪನ ಆಗ್ರಹಾರ ಜೈಲಲ್ಲಿರುವ ದಿ. ಜಯಲಲಿತಾ ಆಪ್ತೆ ಚಿನ್ನಮ್ಮ ಆಲಿಯಸ್ ಶಶಿಕಲಾ ಇನ್ನ ಎರಡೇ ವಾರದಲ್ಲಿ ಬಿಡುಗಡೆ ಆಗಲಿದ್ದಾರೆ. ಈ ನಡುವೆ ಅವರಿಗೆ ಭವ್ಯ ಸ್ವಾಗತ ಕೋರಲು ತಮಿಳುನಾಡಿನಲ್ಲಿ ಭರ್ಜರಿ ಸಿದ್ಧತೆ ಕೂಡ ನಡೆದಿದೆ. ವಿಧಾನಸಭಾ ಚುನಾವಣೆ ಹಿನ್ನಲೆ ಶಶಿಕಲಾ ರಾಜಕೀಯ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಈ ಹಿನ್ನಲೆ ಈಗಾಗಲೇ ಭರದ ಸಿದ್ಧತೆ ನಡೆದಿದೆ. ಇನ್ನು ಶಶಿಕಲಾಗಿಂತ ಮುಂಚೆ ಆಕೆಯ ಸಹಚರ ಸುಧಾಕರನ್ ಬಿಡುಗಡೆಯಾಗಬೇಕಿತ್ತು. ಆದರೆ, ಹತ್ತು ಕೋಟಿ ದಂಡ ಪಾವತಿ ಮಾಡದ ಹಿನ್ನಲೆ ಸುಧಾಕರನ್ ಕೂಡ ಶಶಿಕಲಾ ಜೊತೆ ಬಿಡುಗಡೆ ಮಾಡಲು ತಂತ್ರ ರೂಪಿಸಿದ್ದಾರೆ. ಸುಧಾಕರನ್ ಗೆ ಇದೇ ತಿಂಗಳ 14 ರ ಒಳಗೆ ಬಿಡುಗಡೆಗೆ ಅವಕಾಶವಿತ್ತು. ಹತ್ತುಕೋಟಿ ದಂಡ ಕಟ್ಟಿದ್ದರೆ ಇಷ್ಟರಲ್ಲಾಗಲೇ ಸುಧಾಕರನ್ ಬಿಡುಗಡೆಯಾಗುತ್ತಿದ್ದರು ಆದರೆ ಇನ್ನು ದಂಡದ ಹಣ ಪಾವತಿ ಮಾಡಿಸದೆ ಒಟ್ಟಿಗೆ ಬಿಡುಗಡೆಯಾಗಲು ಜೈಲಲ್ಲೇ ತಂತ್ರಹೆಣೆಯಲಾಗಿದೆ. .ಈ ಮೂಲಕ ಶಶಿಕಲಾ , ಸುಧಾಕರನ್, ಇಳವರಿಸಿ ಜೈಲಿನಿಂದ ಒಟ್ಟಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಪರಪ್ಪನ ಅಗ್ರಹಾರದಿಂದ ತಮಿಳುನಾಡಿವರೆಗೂ ಚಿನ್ನಮ್ಮರಿಗೆ ಅದ್ದೂರಿ ಮೆರವಣಿಗೆಗೆ ಸಿದ್ದತೆ ನಡೆಸಲಾಗಿದೆ. ಶಶಿಕಲಾ ಬಿಡುಗಡೆ ದಿನ ಜೈಲಿನ ಬಳಿ ಒಂದು ಲಕ್ಷ ಮಂದಿ ಜಮಾವಣೆ ನಿರೀಕ್ಷೆ ಇದೆ. ಐದು ಸಾವಿರಕ್ಕೂ ಹೆಚ್ಚು ವಾಹನಗಳು ತಮಿಳುನಾಡಿನಿಂದ ಪರಪ್ಪನ ಅಗ್ರಹಾರ ಜೈಲಿನ ಬಳಿ ಬರುವ ಸಾಧ್ಯತೆ ಇದೆ. ಈ ಮೂಲಕ ರಾಜಕೀಯ ಬೆಳವಣಿಗೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಈ ಮೂಲಕ ಶಶಿಕಾ ಶಕ್ತಿ ಪ್ರದರ್ಶಿಸುವ ಪ್ರಯತ್ನ ನಡೆಸಲಾಗಿದೆ.
ಇದನ್ನು ಓದಿ: ಮುಂಬೈನಲ್ಲಿ ಮಜ್ನುನ ಭೇಟಿಯಾದ ರಶ್ಮಿಕಾ ಮಂದಣ್ಣ
ಈ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ರವಾನೆಯಾಗಿದ್ದು, ಬಿಗಿ ಭದ್ರತೆಯೊಂದಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
1997 ರಲ್ಲಿ ಬೆಳಕಿಗೆ ಬಂದ ಜಯಲಲಿತಾ ಅಕ್ರಮ ಹಣ ಸಂಪಾದನೆ ಪ್ರಕರಣದಲ್ಲಿ ಎರಡು ಬಾರಿ ಶಶಿಕಲಾ ಬಂಧನಕ್ಕೆ ಒಳಗಾಗಿದ್ದಾರೆ. 1997ರಲ್ಲಿ ಮೊದಲ ಬಾರಿ ಇವರನ್ನು ಬಂಧಿಸಲಾಗಿತ್ತು. ಇದಾದ ನಂತರ ಪುನಃ 2014 ರಲ್ಲಿ ಮತ್ತೆಬಂಧಿಸಿ ಕೊನೆಗೆ ಕೇಸ್ ಟ್ರಾಯಲ್ ನಡೆದು ಕೋರ್ಟ್ ಶಿಕ್ಷೆಯನ್ನು ಘೋಷಿಸಿತ್ತು. ಬಳಿಕ ಕೋರ್ಟ್ ಶಶಿಕಲಾಗೆ 4 ವರ್ಷ ಜೈಲು 10 ಕೋಟಿ ದಂಡ ವಿಧಿಸಿತ್ತು. 2017 ಜೈಲು ಸೇರಿದ ಶಶಿಕಲಾ 17 ದಿನಗಳು ಪೆರೋಲ್ ಹೋಗಿದ್ದು, ಅದರಲ್ಲಿ ಗಂಡನಿಗೆ ಆರೋಗ್ಯ ಸಮಸ್ಯೆ ಸರಿಯಿಲ್ಲ ಅಂತಾ 5 ದಿನ ಹೋಗಿದ್ದರು. ಬಳಿಕ ಗಂಡ ನಟರಾಜನ್ ಸಾವನ್ನಪ್ಪಿದ ದಿನ 12 ದಿನ ಪೆರೋಲ್ ಪಡೆದಿದ್ದರು. ಈಗ ನಾಲ್ಕು ವರ್ಷ ಶಿಕ್ಷೆ ಪೂರೈಸಿರುವ ಅವರು ಜ. 27ರಂದು ಬಿಡುಗಡೆಯಾಗಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ