• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಆರ್​ಆರ್​ ನಗರ ಉಪಚುನಾವಣೆ; ಮತಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗೆ 3 ಹಂತದ ಭದ್ರತೆ

ಆರ್​ಆರ್​ ನಗರ ಉಪಚುನಾವಣೆ; ಮತಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗೆ 3 ಹಂತದ ಭದ್ರತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರ್​ಆರ್ ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿರುವ ಸ್ಟ್ರಾಂಗ್ ರೂಂ ಬಳಿ ಮೂರು ಪಾಳಿಯಂತೆ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಪ್ರತಿ ಪಾಳಿಗೆ 150 ಪೊಲೀಸರ ನಿಯೋಜನೆ ಮಾಡಲಾಗಿದೆ.

  • Share this:

ಬೆಂಗಳೂರು (ನ. 4): ಆರ್​ಆರ್ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ನಿನ್ನೆ ಉಪಚುನಾವಣೆ ನಡೆದಿದೆ. ನ. 10ಕ್ಕೆ ಫಲಿತಾಂಶವೂ ಹೊರಬೀಳಲಿದೆ. ಆರ್​ಆರ್​ ನಗರದಲ್ಲಿ ಮತಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಮೂರು ಹಂತಗಳಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಸ್ಟ್ರಾಂಗ್ ರೂಂ ಸುತ್ತ ಹಾಗೂ ದ್ವಾರದ ಬಳಿ ಸಿಎಪಿಎಫ್​ ಸಿಬ್ಬಂದಿಯನ್ನು ಕಾವಲಿರಿಸಲಾಗಿದೆ. ಎರಡನೇ ಹಂತದಲ್ಲಿ ನಗರ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಹೊರ ಆವರಣದಲ್ಲಿ ಕೆಎಸ್ಆರ್​ಪಿ ತುಕಡಿಯಿಂದ ಭದ್ರತೆ ಒದಗಿಸಲಾಗಿದೆ.


ಸ್ಟ್ರಾಂಗ್ ರೂಂ ಬಳಿ ಮೂರು ಪಾಳಿಯಂತೆ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಪ್ರತಿ ಪಾಳಿಗೆ 150 ಪೊಲೀಸರ ನಿಯೋಜನೆ ಮಾಡಲಾಗಿದೆ. ಓರ್ವ ಎಸಿಪಿ, ಮೂವರು ಇನ್​ಸ್ಪೆಕ್ಟರ್ ನೇತೃತ್ವದಲ್ಲಿ ಬಂದೋಬಸ್ತ್ ವಹಿಸಲಾಗಿದೆ. ಆರ್​ಆರ್ ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿರುವ ಸ್ಟ್ರಾಂಗ್ ರೂಂ ಹಾಗೂ ಶಾಲೆಯ ಸುತ್ತ ಸಿಸಿಟಿವಿಗಳ ಅಳವಡಿಕೆ ಮಾಡಲಾಗಿದೆ. ಪ್ರತಿಯೊಂದನ್ನು ಸಿಸಿಟಿವಿಗಳ ಮೂಲಕ ಮಾನಿಟರ್ ಮಾಡಲಾಗುತ್ತಿದೆ.


ಇದನ್ನೂ ಓದಿ: ಚಿಕ್ಕಮಗಳೂರು; ಅಕ್ರಮ ಸಂಬಂಧ ಹೊಂದಿದ್ದ ಗಂಡನ ಒತ್ತಾಯಕ್ಕೆ ಹೆಂಡತಿ ಆತ್ಮಹತ್ಯೆ


ಸ್ಟ್ರಾಂಗ್​ ರೂಂಗೆ ಪೊಲೀಸರು ಮತ್ತು ಚುನಾವಣಾ ಅಧಿಕಾರಿಗಳು ಹೊರತುಪಡಿಸಿ ಬೇರೆಯವರಿಗೆ ಶಾಲೆ ಪ್ರವೇಶ ನಿರ್ಬಂಧಿಸಲಾಗಿದೆ. ಶಾಲೆಯ ಬಳಿ ಬರುವ ಪ್ರತಿ ವಾಹನ ಹಾಗೂ ಪ್ರತಿಯೊಬ್ಬರನ್ನು ಪರಿಶೀಲನೆ ನಡೆಸಿ ಬಿಡಲಾಗುತ್ತಿದೆ. ನಿನ್ನೆ ಆರ್​ಆರ್​​ ನಗರದಲ್ಲಿ ಶೇ. 45.24ರಷ್ಟು ಮತದಾನ ನಡೆದಿದೆ. ಶಿರಾದಲ್ಲಿ ಶೇ. 82.31ರಷ್ಟು ಮತದಾನ ನಡೆದಿದೆ.


ಆರ್​ಆರ್​ ನಗರದಲ್ಲಿ ಕಾಂಗ್ರೆಸ್ ಶಾಸಕ ಮುನಿರತ್ನ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಿದ್ದರಿಂದ ಆ ತೆರವಾದ ಸ್ಥಾನಕ್ಕೆ ನಿನ್ನೆ ಉಪಚುನಾವಣೆ ನಡೆಸಲಾಗಿದೆ. ಆರ್​ಆರ್​ ನಗರದಲ್ಲಿ 678 ಮತಗಟ್ಟೆಗಳಲ್ಲಿ ನಿನ್ನೆ ಮತದಾನ ನಡೆದಿದೆ. ಸೆಲೆಬ್ರಿಟಿಗಳು, ಚುನಾವಣಾ ಅಭ್ಯರ್ಥಿಗಳು, ಗಣ್ಯರು ಸೇರಿದಂತೆ ಹಲವರು ಕೊರೋನಾ ಭೀತಿಯ ನಡುವೆಯೂ ನಿನ್ನೆ ಮತದಾನ ಮಾಡಿದ್ದಾರೆ. ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಕುಸುಮಾ, ಬಿಜೆಪಿಯಿಂದ ಮುನಿರತ್ನ ಹಾಗೂ ಜೆಡಿಎಸ್​ನಿಂದ ಕೃಷ್ಣಮೂರ್ತಿ ಸ್ಪರ್ಧಿಸಿದ್ದರು.

Published by:Sushma Chakre
First published: