• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನವೇ ಅಂದರ್ ಆದ ಕುಣಿಗಲ್ ಗಿರಿ!

ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನವೇ ಅಂದರ್ ಆದ ಕುಣಿಗಲ್ ಗಿರಿ!

ಕುಣಿಗಲ್ ಗಿರಿ

ಕುಣಿಗಲ್ ಗಿರಿ

ಸದ್ಯ ಕುಣಿಗಲ್ ಗಿರಿ ಸೇರಿದಂತೆ ಲಕ್ಷ್ಮಣ್ @ಸುಳಿ , ಸೈಕೋ ವಿಶ್ವನಾಥ್ ಬಂಧನವಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಚುನಾವಣೆಗೆ ತಯಾರಿ ನಡೆಸಿ, ನಾಮಿನೇಷನ್ ಹಾಕುವ ದಿನದ ಹಿಂದಿನ ರಾತ್ರಿಯೇ ಬಂಧನವಾಗಿರುವುದು ಸಹ ಆಶ್ಚರ್ಯಕ್ಕೆ ಕಾರಣವಾಗಿದೆ.

  • Share this:

ಬೆಂಗಳೂರು: ಆತ  ಕುಖ್ಯಾತ ರೌಡಿ ಶೀಟರ್‌. ಅಂದುಕೊಂಡಂತೆ ಆಗಿದಿದ್ದರೆ ಇವತ್ತು ಆತ ಗ್ರಾಮ ಪಂಚಾಯಿತಿ ಎಲೆಕ್ಷನ್ ಗೆ ನಾಮಿನೇಷನ್ ಹಾಕುತ್ತಿದ್ದ. ಆದರೆ ಅದೃಷ್ಟ ಕೈಕೊಟ್ಟು ಒಂದು ತಿಂಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾನೆ. ಆತ ಬೇರ್ಯಾರು ಅಲ್ಲಾ, ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿ.


ಅಪರಾಧ ಚಟುವಟಿಕೆಗಳಲ್ಲಿ ಸದಾ ಸಕ್ರಿಯನಾಗಿರುತ್ತಿದ್ದ ಗಿರಿ ಇತ್ತೀಚೆಗೆ ತಾನು ಯಾವುದೇ ಅಪರಾಧದಲ್ಲಿ ತೊಡಗಿಲ್ಲ ಅಂತೇಳಿ ಕುಣಿಗಲ್ ನಲ್ಲಿ ಉಳಿದುಕೊಂಡಿದ್ದ‌‌. ಆದರೆ ಕುಣಿಗಲ್ ನಲ್ಲಿ ಇದ್ದರೂ ಬೆಂಗಳೂರು ಕ್ರೈಂ ನಲ್ಲಿ  ಮಾತ್ರ  ಸಕ್ರಿಯನಾಗಿದ್ದ. ಹೀಗೆ ಕಳೆದ ತಿಂಗಳು 7  ರಂದು ಸುಮನಹಳ್ಳಿ ಬಳಿ‌ ಡ್ರೈವರ್ ಮಂಜುನಾಥ್ ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿದ್ದರಿಂದ ಕೊಲೆಯಾಗಿದೆ ಎಂದು ಸ್ವತಃ ಮೃತನ ತಂದೆ ಶ್ರೀನಿವಾಸ್ ದೂರು ಕೂಡ ಕೊಟ್ಟಿದ್ದರು.


ಇದನ್ನು ಓದಿ: ಕರ್ನಾಟಕದ ಕಾಶ್ಮೀರ ಕೊಡಗಿಗೆ ತಟ್ಟಿದ ಬುರೇವಿ ಚಂಡಮಾರುತ; ಭಾರೀ ಗಾಳಿಗೆ ನೆಲಕಚ್ಚಿದ ನೂರಾರು ಎಕರೆ ಭತ್ತ, ಕಾಫಿ ಬೆಳೆ


ಪ್ರಕರಣ ಬೆನ್ನತ್ತಿ ಹೋದ ಲಕ್ಷ್ಮಣ ಉರುಫ್ ಸುಳಿ ಸಿಕ್ಕಿಬಿದ್ದಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಕುಣಿಗಲ್ ಗಿರಿಯನ್ನು ನೆನ್ನೆ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಗಿರಿ ಇಂದು ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಗ್ರಾಮ ಪಂಚಾಯ್ತಿಯಲ್ಲಿ ನಾಮಪತ್ರ ಸಲ್ಲಿಸಬೇಕಿತ್ತು. ಹೌದು, ಗ್ರಾಮ ಪಂಚಾಯತ್ ಎಲೆಕ್ಷನ್ ಗೆ ಸ್ಪರ್ಧಿಸಲು ಮುಂದಾಗಿದ್ದ ಗಿರಿ ಇಂದು ನಾಮಿನೇಷನ್ ಫೈಲ್ ಮಾಡಬೇಕಿತ್ತು. ಇದಕ್ಕಾಗಿ ಆತ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದ. ಊರಲ್ಲಿ ಜೊತೆಗಾರಿಗೆಲ್ಲಾ ಬೇಕಾದನ್ನು ಕೊಡಿಸುತ್ತಿದ್ದ. ಆಗಲೇ ಪ್ರಚಾರವೂ ನಡೆದಿತ್ತು. ಹೀಗಿರುವಾಗಲೇ ಕುಣಿಗಲ್ ಗಿರಿ ಕೊಲೆ ಪ್ರಕರಣದಲ್ಲಿ ಈಗ ಕಂಬಿ ಎಣಿಸುತ್ತಿದ್ದಾನೆ.


ಇನ್ನು ಎಲೆಕ್ಷನ್ ವಿಚಾರಕ್ಕೋ ಅಥವಾ ಅಭಿಮಾನಕ್ಕೋ ಸಾಮಾಜಿಕ ಜಾಲತಾಣದಲ್ಲಿ ಗಿರಿಯನ್ನು‌ ಹೊಗಳಿ ಒಂದಷ್ಟು  ವಿಡಿಯೋಗಳನ್ನು ಸಹ ಮಾಡಿ ಸಹಚರರು ಹರಿಬಿಟ್ಟಿದ್ದಾರೆ. ಸದ್ಯ ಕುಣಿಗಲ್ ಗಿರಿ ಸೇರಿದಂತೆ ಲಕ್ಷ್ಮಣ್ @ಸುಳಿ , ಸೈಕೋ ವಿಶ್ವನಾಥ್ ಬಂಧನವಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಚುನಾವಣೆಗೆ ತಯಾರಿ ನಡೆಸಿ, ನಾಮಿನೇಷನ್ ಹಾಕುವ ದಿನದ ಹಿಂದಿನ ರಾತ್ರಿಯೇ ಬಂಧನವಾಗಿರುವುದು ಸಹ ಆಶ್ಚರ್ಯಕ್ಕೆ ಕಾರಣವಾಗಿದೆ.

Published by:HR Ramesh
First published: