ಬೆಂಗಳೂರು (ನ.28): ರೌಡಿಶೀಟರ್ ಸೈಲೆಂಟ್ ಸುನೀಲ (Silent Sunil) ಬಿಜೆಪಿ ಪಕ್ಷಕ್ಕೆ ಸೇರಿದ ಬೆನ್ನಲ್ಲೇ ಬೆಂಗಳೂರು ನಗರದ ವೈಯಾಲಿಕಾವಲ್ ರೌಡಿಶೀಟರ್ ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿ (Fighter Ravi) ಕೂಡ ಕಮಲ ಹಿಡಿದಿದ್ದಾರೆ. ಈತ ಕ್ರಿಕೆಟ್ ಬುಕ್ಕಿಯಾಗಿದ್ದು ಅನೇಕ ಕಾನೂನು ಬಾಹಿರ ಚಟುವಟಕೆಯಲ್ಲಿ (Illegal Activity) ಭಾಗಿಯಾಗಿದ್ದಾನೆ. ಈತ ನಾಗಮಂಗಲ (Nagamangala) ಕ್ಷೇತ್ರದಿಂದ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ (Ticket) ಬಯಸಿ ಬಿಜೆಪಿ ಪಕ್ಷಕ್ಕೆ (BJP Party) ಸೇರ್ಪಡೆಯಾಗಿದ್ದಾನೆ ಎನ್ನಲಾಗಿದೆ. ರೌಡಿಶೀಟರ್ ಗಳು, ಬುಕ್ಕಿಗಳು ಬಿಜೆಪಿ ಪಕ್ಷ ಸೇರುತ್ತಿರುವುದರಿಂದ ಬಿಜೆಪಿ ಜನರಿಗೆ ಏನೂ ಸಂದೇಶ ಕೊಡಲು ಹೊರಟಿದೆ ಎಂಬುದು ಅನೇಕರ ಪ್ರಶ್ನೆಯಾಗಿದೆ.
ರೌಡಿಶೀಟರ್ ಸುನೀಲ ರಕ್ತದಾನ ಶಿಬಿರ
ಇನ್ನು ನಿನ್ನೆ ತಾನೇ ಭಾರತೀಯ ಜನತಾ ಪಕ್ಷದ ಇಬ್ಬರು ಎಂಪಿಗಳಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ ಹಾಗೂ ಶಾಸಕ ಉದಯ್ ಗರುಡಾಚಾರ್ ಸಮ್ಮುಖದಲ್ಲಿ ರೌಡಿಶೀಟರ್ ಸುನೀಲ ರಕ್ತದಾನ ಶಿಬಿರ ಮಾಡಿದ್ದಾನೆ.
BJP ನಾಯಕರ ಸಮ್ಮುಖದಲ್ಲಿ ಸೇರ್ಪಡೆ
ಇಂದು ಬುಕ್ಕಿ, ರೌಡಿಶೀಟರ್ ಫೈಟರ್ ರವಿ ಸಚಿವ ಅಶ್ವಥ್ ನಾರಾಯಣ್, ಗೋಪಾಲಯ್ಯ, ಸಿಪಿ ಯೋಗೇಶ್ವರ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ರಾಜಕೀಯ ಪ್ರವೇಶಕ್ಕೆ ಬಿಜೆಪಿ ನಾಯಕರ ಸಾಥ್
ಬೆಂಗಳೂರು ಭೂಗತ ಲೋಕದ ಮಾಜಿ ರೌಡಿ ಸೈಲೆಂಟ್ ಸುನೀಲ್ (Silent Sunil) ರಾಜಕೀಯ ಪ್ರವೇಶಕ್ಕೆ (Politics Enters) ಬಿಜೆಪಿ ನಾಯಕರು (BJP Leaders) ಶುಭಕೋರಿದರು. ಸಂಸದರಾದ ಪಿಸಿ ಮೋಹನ್ (PC Mohan), ತೇಜಸ್ವಿ ಸೂರ್ಯ (Tejaswi Surya), ಶಾಸಕರಾದ ಉದಯ್ ಗರುಡ ಚಾರ್ (MLA Uday Garudachar) ಹಾಗೂ ಎನ್ ಆರ್ ರಮೇಶ್ (NR Ramesh) ಶುಭ ಹಾರೈಸಿದರು.
ಬೃಹತ್ ರಕ್ತದಾನ ಶಿಬಿರ ಆಯೋಜನೆ
ಇಂದು ಚಾಮರಾಜಪೇಟೆಯಲ್ಲಿ (Chamarajapete) ಬೃಹತ್ ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಸೈಲೆಂಟ್ ಸುನೀಲ್ ರಾಜಕೀಯ ಪ್ರವೇಶ ಮಾಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ (MLA Zameer Ahmed Khan) ವಿರುದ್ಧ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದೆ. ಬಿಜೆಪಿ ನಾಯಕರು ಸೈಲೆಂಟ್ ಸುನೀಲ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದರು.
ಬಿಜೆಪಿ ಕಾರ್ಯಕ್ರಮದಲ್ಲಿ ಸೈಲೆಂಟ್ ಸುನೀಲ
ಇಂದು ಬಿಜೆಪಿ ನಾಯಕರು ಶಿಬಿರದಲ್ಲಿ ಭಾಗಿಯಾಗುವ ಮೂಲಕ ಸೈಲೆಂಟ್ ಸುನೀಲ್ ಚಾಮರಾಜಪೇಟೆಯ ಕಮಲ ಅಭ್ಯರ್ಥಿ ಎಂಬ ಸಂದೇಶ ನೀಡಿದ್ದಂತೆ ಮೇಲ್ನೋಟಕ್ಕೆ ಕಾಣಿಸುತ್ತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ