• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramesh Jarkiholi: CD ಕೇಸ್​​ನ CBIಗೆ ವಹಿಸಬೇಕೆಂದು ಒತ್ತಡ; ಅಮಿತ್ ಶಾ ಭೇಟಿಗೆ ಮುಂದಾದ ರಮೇಶ್ ಜಾರಕಿಹೊಳಿ

Ramesh Jarkiholi: CD ಕೇಸ್​​ನ CBIಗೆ ವಹಿಸಬೇಕೆಂದು ಒತ್ತಡ; ಅಮಿತ್ ಶಾ ಭೇಟಿಗೆ ಮುಂದಾದ ರಮೇಶ್ ಜಾರಕಿಹೊಳಿ

ರಮೇಶ್​ ಜಾರಕಿಹೊಳಿ, ಮಾಜಿ ಸಚಿವ

ರಮೇಶ್​ ಜಾರಕಿಹೊಳಿ, ಮಾಜಿ ಸಚಿವ

ರಮೇಶ್ ಜಾರಕಿಹೊಳಿ ಅವರು ಸಿ.ಡಿ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಮನವಿ ಮಾಡಲು ಅಮಿತ್ ಶಾ ಅವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆದರೆ ಬಾಲಚಂದ್ರ ಜಾರಕಿಹೊಳಿ, ಪ್ರಕರಣವನ್ನು ಇಲ್ಲಿಗೆ ಕೈಬಿಡಿ ಎಂದು ಸಲಹೆ ನೀಡಿದ್ದಾರೆ. ಇತ್ತ ಕಾಂಗ್ರೆಸ್​, ರಮೇಶ್ ಜಾರಕಿಹೊಳಿ ವಿರುದ್ಧ ಕಾನೂನು ಸಮರ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಿ.ಡಿ ಸಮರ (Karnataka CD Scandal) ಜೋರಾಗುತ್ತಿದೆ. ಪ್ರಕರಣವನ್ನ ಸಿಬಿಐಗೆ (CBI) ನೀಡುವಂತೆ ರಮೇಶ್ ಜಾರಕಿಹೊಳಿ (Ramesh Jarkiholi) ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಆರಗ ಜ್ಞಾನೇಂದ್ರ ಅವರಿಗೆ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra ) ಭರವಸೆ ಕೊಟ್ಟಿದ್ದಾರಂತೆ. ಇದರ ನಡುವೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗುತ್ತಿದ್ದಾರೆ. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭೇಟಿಗೆ ಸಮಯ ಕೇಳಿದ್ದಾರಂತೆ.


ಇಂದು ಅಮಿತ್ ಶಾ ಭೇಟಿ ಸಾಧ್ಯತೆ!


ಇಂದು ರಾತ್ರಿ ರಮೇಶ್ ಜಾರಕಿಹೊಳಿ ಅವರು ಅಮಿತ್​ ಶಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ, ಈ ವೇಳೆ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್​ ಜೊತೆ ಅವರು ಹಾಜರಿರುವ ಸಾಧ್ಯತೆ ಇದೆ. ಅಮಿತ್ ಶಾ ಭೇಟಿ ವೇಳೆ ತಾವು ಸಂಗ್ರಹಿಸಿರುವ ಮಾಹಿತಿಯ ಬಗ್ಗೆ ಗೃಹ ಸಚಿವರಿಗೆ ತಿಳಿಸಿ ಸಿ.ಡಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ರಮೇಶ್ ಜಾರಕಿಹೊಳಿ ಮನವಿ ಮಾಡಲಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಒತ್ತಾಯ ಮಾಡಲಿದ್ದಾರೆ ಎನ್ನಲಾಗಿದೆ.




ಇದನ್ನೂ ಓದಿ: Ramesh Jarkiholi: 120 ದಾಖಲೆ ಇದೆ, ರಿಲೀಸ್ ಮಾಡಲ್ಲ: ಡಿಕೆಶಿ ವಿರುದ್ಧ ಗುಡುಗುತ್ತಲೇ ಕಾಂಗ್ರೆಸ್​ನ ವಿಷ ಕನ್ಯೆ ಬಗ್ಗೆ ಪ್ರಸ್ತಾಪಿಸಿದ ರಮೇಶ್ ಜಾರಕಿಹೊಳಿ!


ರಮೇಶ್​ ಜಾರಕಿಹೊಳಿ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ


ಇತ್ತ ರಮೇಶ್​ ಜಾರಕಿಹೊಳಿ ಅವರು ಸಿ.ಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಡಿದ್ದೆದ್ದರುವ ಕಾಂಗ್ರೆಸ್​​, ಡಿಕೆ ಶಿವಕುಮಾರ್ ವಿರುದ್ಧ ನಿರಂತರವಾಗಿ ಸುಳ್ಳು ಆರೋಪ, ನಿಂದನೆ, ದೋಷಾರೋಪಣೆ ಹಾಗೂ ಅವರ ಪ್ರಸಿದ್ಧಿ ಘಾಸಿಗೊಳಿಸಲು ಸುಳ್ಳು ಹಾಗೂ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿರುವ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಶೀಘ್ರವೇ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುತ್ತದೆ. ಆ ಮೂಲಕ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಾಂಗ್ರೆಸ್​ ವಕ್ತಾರ ಸಂಕೇತ ಏಣಗಿ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ.


ಸಂಕೇತ ಏಣಗಿ ಟ್ವೀಟ್


ಪ್ರಕರಣವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಬಾಲಚಂದ್ರ ಜಾರಕಿಹೊಳಿ ಮನವಿ


ಸಿಡಿ ಕೇಸ್ ಸಿಬಿಐಗೆ ಕೊಡಲು ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಆದರೆ, ಬಾಲಚಂದ್ರ ಜಾರಕಿಹೊಳಿ ಕೇಸ್ ಇಲ್ಲಿಗೇ ಬಿಟ್ಟುಬಿಡಿ ಅಂತಿದ್ದಾರೆ. ಇನ್ನೂ ಡ್ಯಾಮೇಜ್ ಮಾಡಿಕೊಳ್ಳೋದು ಬೇಡ. ಸಿಡಿ ವಿಚಾರದಲ್ಲಿ 3 ಕುಟುಂಬಗಳಿಗೆ ಕೆಟ್ಟ ಹೆಸರು ಬಂದಿದೆ. ಆದ್ದರಿಂದ ರಮೇಶ್ ಜೊತೆ ಮಾತನಾಡುತ್ತೇನೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.


ಬೆಳಗಾವಿಯ ಅರಬಾವಿಯಲ್ಲಿ ನ್ಯೂಸ್18 ಕನ್ನಡಕ್ಕೆ ಜೊತೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ನನ್ನ ಅಭಿಪ್ರಾಯ ವೈಯಕ್ತಿಕ ಟೀಕೆ ಮಾಡುವುದು ಬೇಡ, ಪ್ರಕರಣ ಇಲ್ಲಿಗೆ ಬಿಟ್ಟು ಬಿಡಿ. ಆರೋಪ ಪ್ರತ್ಯಾರೋಪದಿಂದ ಮೂರು ಕುಟುಂಬಗಳಿಗೆ ಹಾನಿಯಾಗುತ್ತದೆ. ಹಿಂದೆ ಅನೇಕರು ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ. ಇದನ್ನು ಮುಂದುವರಿಸಬೇಡಿ. ರಮೇಶ ಜಾರಕಿಹೊಳಿ ಕೆಟ್ಟ ಸಮಯದಲ್ಲಿ ಘಟನೆ ನಡೆದಿದೆ. ಹಣೆಬಹರವನ್ನು ಯಾರು ಬದಲು ಮಾಡೋಕೆ ಆಗಲ್ಲ.


ಇದನ್ನೂ ಓದಿ: DK Shivakumar: ಬಚ್ಚಲು ಮನೆಯಿಂದ ನೀರು ತಂದೆವೋ, KRS ನೀರು ತಂದೆವೋ ಒಟ್ಟಿನಲ್ಲಿ ಕೋಲಾರಕ್ಕೆ ನೀರು ಕೊಟ್ಟಿದ್ದೇವೆ; ಡಿಕೆ ಶಿವಕುಮಾರ್


ಮೂರು ಜನ ತಿಳುವಳಿಕೆ ಉಳ್ಳವರಿದ್ದಾರೆ. ಇದನ್ನು ಮುಂದುವರಿಸದೇ ಇಲ್ಲಿಗೆ ಬಿಡಬೇಕಾಗಿ ವಿನಂತಿ ಮಾಡ್ತೀನಿ. ಚುನಾವಣೆ ಸಂದರ್ಭದಲ್ಲಿ ಆರೋಪ ಪ್ರತ್ಯಾರೋಪ ಬೇಡ. ರಾಜಕೀಯಗಾಗಿ ಹೋರಾಟ ಮಾಡೋಣಾ ಅಂತ ನನ್ನ ಮನವಿ. ಇದರಿಂದ ಮೂರು ಕುಟುಂಬಗಳಿಗೆ ಡ್ಯಾಮೇಜ್​ ಆಗುತ್ತಿದೆ. ರಮೇಶ ಜಾರಕಿಹೊಳಿ ನನಗೆ ಸಿಕ್ಕಿಲ್ಲ, ಸಿಕ್ಕರೆ ಅವರೊಟ್ಟಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.


ಸಿಡಿ ವಿಚಾರದ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ. ಸದಾನಂದಗೌಡರ ಸಿಡಿ ಕೂಡ ಇದೆ. ಅದನ್ನು ಸದಾನಂದ ಗೌಡರಿಗೆ ಕೇಳಿದೆ. ಆದರೆ, ಅವರು ಹೀ.. ಹೀ.. ಅಂತ ನಗ್ತಾರೆ.. ಯಾಕಂದ್ರೆ ನಗೋದೆ ಅವರ ಕೆಲಸ ಎಂದು ಇಬ್ರಾಹಿಂ ಹೇಳಿದ್ದಾರೆ.

Published by:Sumanth SN
First published: