• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Belagavi Politics: ಹೆಬ್ಬಾಳ್ಕರ್ ಆಯ್ತು, ಈಗ ಜೊಲ್ಲೆ; ಬಿಜೆಪಿಗೆ ಬಿಸಿತುಪ್ಪವಾದ್ರಾ ರಮೇಶ್ ಜಾರಕಿಹೊಳಿ?

Belagavi Politics: ಹೆಬ್ಬಾಳ್ಕರ್ ಆಯ್ತು, ಈಗ ಜೊಲ್ಲೆ; ಬಿಜೆಪಿಗೆ ಬಿಸಿತುಪ್ಪವಾದ್ರಾ ರಮೇಶ್ ಜಾರಕಿಹೊಳಿ?

ರಮೇಶ್ ಜಾರಕಿಹೊಳಿ, ಮಾಜಿ ಸಚಿವ

ರಮೇಶ್ ಜಾರಕಿಹೊಳಿ, ಮಾಜಿ ಸಚಿವ

ರಮೇಶ್ ಜಾರಕಿಹೊಳಿ ಅವರ ಈ ನಡೆಗೆ ಅಣ್ಣಾ ಸಾಹೇಬ್ ಜೊಲ್ಲೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಿಪ್ಪಾಣಿ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಹಸ್ತಕ್ಷೇಪಕ್ಕೆ ಜೊಲ್ಲೆ ಕುಟುಂಬ ಕಿಡಿಕಾರಿದೆ.

  • Share this:

ಬೆಳಗಾವಿ: ಇಡೀ ರಾಜ್ಯದ ರಾಜಕಾರಣ (Karnataka Politics) ಒಂದು ಕಡೆಯಾದ್ರೆ, ಬೆಳಗಾವಿ (Belagavi Politics) ರಾಜಕೀಯ ಮತ್ತೊಂದು ಕಡೆ. ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು (Assembly Constituency) ಹೊಂದಿರುವ ಬೆಳಗಾವಿಯತ್ತ ಇಡೀ ರಾಜ್ಯದ ಕಣ್ಣಿದೆ. ಯಮಕನಕರಡಿ ಕ್ಷೇತ್ರದ ಶಾಸಕರಾಗಿರುವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಅವರು ಬೆಳಗಾವಿ ಗ್ರಾಮೀಣ (Belagavi Rural) ಕ್ಷೇತ್ರದಲ್ಲಿ ಕಮಲ ಪತಾಕೆ ಹಾರಿಸಲು ಪ್ರಯತ್ನಿಸುತ್ತಿದ್ದಾರೆ. ಇದೀಗ ನಿಪ್ಪಾಣಿ (Nippani Constituency) ಕ್ಷೇತ್ರದಲ್ಲಿ ತಮ್ಮ ಆಪ್ತನನ್ನು ಚುನಾವಣೆಗೆ ನಿಲ್ಲಿಸಿ, ಜಾರಕಿಹೊಳಿ ಕುಟುಂಬದ ಸಾಮ್ರಾಜ್ಯ ವಿಸ್ತರಣೆಗೆ ಸಾಹುಕಾರ ಮುಂದಾದಂತೆ ಕಾಣಿಸುತ್ತಿದೆ.


ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಮೂವರು ಸೋದರರು ಅಧಿಕಾರದಲ್ಲಿದ್ದಾರೆ. ಇದೀಗ ತಮ್ಮ ಅತ್ಯಾಪ್ತನನ್ನು ವಿಧಾನಸಭಾ ಚುನಾವಣೆ ಗೆಲ್ಲಿಸುವ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ಹಿಡಿತವನ್ನು ಮತ್ತಷ್ಟು ಬಿಗಿಮಾಡಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಸಚಿವರು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಜಾರಕಿಹೊಳಿ ನಂತ್ರ ಜೊಲ್ಲೆ ಕುಟುಂಬ ಬೆಳಗಾವಿಯಲ್ಲಿ ಸ್ಟ್ರಾಂಗ್


ನಿಪ್ಪಾಣಿ ಕ್ಷೇತ್ರದ ಶಾಸಕಿಯಾಗಿರುವ ಶಶಿಕಲಾ ಜೊಲ್ಲೆ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಪತಿ ಅಣ್ಣಾಸಾಹೇಬ್ ಜೊಲ್ಲೆ ಸಹ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರು. ನಿಪ್ಪಾಣಿ ಮತ್ತು ಚಿಕ್ಕೋಡಿ ಭಾಗದಲ್ಲಿ ನಿಪ್ಪಾಣಿ ಕುಟುಂಬ ತನ್ನದೇ ಆದ ರಾಜಕೀಯ ಅನುಯಾಯಿಗಳನ್ನು ಹೊಂದಿದೆ.


Ramesh jarkiholi s plan to defeat shashikala Jolle mrq
ಶಶಿಕಲಾ ಜೊಲ್ಲೆ, ಸಚಿವೆ


ಜೊಲ್ಲೆ ಕುಟುಂಬ ಕಟ್ಟಿಹಾಕಲು ಸಾಹುಕಾರ ರಣತಂತ್ರ


ಈ ಹಿನ್ನೆಲೆ ಬೆಳಗಾವಿಯಲ್ಲಿ ತಮ್ಮದೇ ಪ್ರಭಾವ ಇರಬೇಕು. ಹಾಗಾಗಿ ಜೊಲ್ಲೆ ಕುಟುಂಬವನ್ನು ಕಟ್ಟಿ ಹಾಕಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರಂತೆ. ಈ ಹಿನ್ನೆಲೆ ನಿಪ್ಪಾಣಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಅತ್ಯಾಪ್ತ ಉತ್ತಮ್ ಪಾಟೀಲ್ ಅವರನ್ನು ಕಣಕ್ಕಿಳಿಸಲು ಜಾರಕಿಹೊಳಿ ಯತ್ನಿಸುತ್ತಿದ್ದಾರೆ.


ರಮೇಶ್ ಜಾರಕಿಹೊಳಿ ಅವರ ಈ ನಡೆಗೆ ಅಣ್ಣಾ ಸಾಹೇಬ್ ಜೊಲ್ಲೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಿಪ್ಪಾಣಿ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಹಸ್ತಕ್ಷೇಪಕ್ಕೆ ಜೊಲ್ಲೆ ಕುಟುಂಬ ಕಿಡಿಕಾರಿದೆ.


ಯಾರು ಈ ಉತ್ತಮ್ ಪಾಟೀಲ್?


ಉತ್ತಮ್ ಪಾಟೀಲ್ ಸ್ಥಳೀಯವಾಗಿ ರಾಜಕೀಯ ಪ್ರಾಬಲ್ಯ ಹೊಂದಿರುವ ನಾಯಕ. ನಿಪ್ಪಾಣಿಯಲ್ಲಿ ಜೈನ ಮತಗಳೇ ನಿರ್ಣಾಯಕ. ಇದರ ಜೊತೆಗೆ ಕ್ಷೇತ್ರದಲ್ಲಿ ಎರಡು ಸಕ್ಕರೆ ಕಾರ್ಖಾನೆ ಹೊಂದಿರುವ ಉತ್ತಮ್ ಪಾಟೀಲ್ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಹೀಗಾಗಿ ತಮ್ಮದೇ ಹಿಡಿತವನ್ನು ಕ್ಷೇತ್ರದಲ್ಲಿ ಹೊಂದಿದ್ದಾರೆ. ಇದರ ಜೊತೆಗೆ ಜಾರಕಿಹೊಳಿ ಅವರ ಕುಟುಂಬಕ್ಕೆ ಆಪ್ತರಾಗಿದ್ದಾರೆ.




ಕಾಂಗ್ರೆಸ್​​ನಿಂದ ಟಿಕೆಟ್ ಸಿಗುತ್ತಾ?


ಸಚಿವೆಯಾಗಿರುವ ಶಶಿಕಲಾ ಜೊಲ್ಲೆ ಈ ಬಾರಿಯೂ ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧೆ ಮಾಡೋದು ಖಚಿತ. ಉತ್ತಮ್ ಪಾಟೀಲ್ ಅವರಿಗೆ ಕಾಂಗ್ರೆಸ್​ನಿಂದ ಟಿಕೆಟ್ ಕೊಡಿಸಲು ಜಾರಕಿಹೊಳಿ ಕುಟುಂಬ ಪ್ರಯತ್ನಿಸುತ್ತಿದೆ. ಒಂದು ವೇಳೆ ಕಾಂಗ್ರೆಸ್​ನಿಂದ ಟಿಕೆಟ್ ಸಿಗದಿದ್ರೆ ಪಕ್ಷೇತರರಾಗಿ ಕಣಕ್ಕಿಳಿಸಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.


Ramesh jarkiholi s plan to defeat shashikala Jolle mrq
ರಮೇಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್


ಕಾಂಗ್ರೆಸ್ - ಬಿಜೆಪಿ ಮಧ್ಯೆ ಪ್ರತಿಮೆ ಪಾಲಿಟಿಕ್ಸ್


ಕುಂದಾನಗರಿ ಬೆಳಗಾವಿಯಲ್ಲಿ ಕಾಂಗ್ರೆಸ್ - ಬಿಜೆಪಿ ನಡುವೆ ಪ್ರತಿಮೆ ಪಾಲಿಟಿಕ್ಸ್ ತಾರಕಕ್ಕೇರಿದೆ. ರಾಜಹಂಸಗಢದಲ್ಲಿ ಶಾಸಕಿ ಲಕ್ಷ್ಮಿ ‌ಹೆಬ್ಬಾಳ್ಕರ್ ಮತ್ತೊಮ್ಮೆ ಶಿವಾಜಿ ಪ್ರತಿಮೆ ಉದ್ಘಾಟಿಸಿ, ಪ್ರಾಣ ಪ್ರತಿಷ್ಟಾಪನಾ ಪೂಜೆ ಮಾಡಿದರು. ಈ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿಗೆ ತಿರುಗೇಟು ಕೊಟ್ಟಿದ್ದಾರೆ.


ಇದನ್ನೂ ಓದಿ: Belagavi Politics: ಒಂದು ಕ್ಷೇತ್ರ, 10 ಟಿಕೆಟ್ ಆಕಾಂಕ್ಷಿಗಳು; ಅಮಿತ್ ಶಾ ಭೇಟಿಯಾದ ಬಿಜೆಪಿ ನಾಯಕಿ; ದೆಹಲಿ ಅಂಗಳ ತಲುಪಿದ ಬಿಗ್ ಫೈಟ್!


ಒಂದೆಡೆ ರಾಜಹಂಸಗಢ ಕೋಟೆಯಲ್ಲಿ ಡಿಕೆಶಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ್ರೆ, ಮತ್ತೊಂದೆಡೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಜನಸಂವಾದ ಸಮಾವೇಶ ನಡೆಸಿದ್ದಾರೆ. ಕಾರ್ಯಕ್ರಮದಲ್ಲಿ ರಮೇಶ್ ಜಾರಕಿಹೊಳಿ ಆಪ್ತ, ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನ್ನೋಳರ್ ಸೇರಿ ಹಲವರು ಭಾಗಿಯಾಗಿದ್ದರು. ಸಮಾವೇಶದಲ್ಲಿ ಜನರಿಗಾಗಿ 300 ಕೆಜಿ ಮಟನ್ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು