• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BSP ಜೊತೆ ಮೈತ್ರಿಗೆ ಸಿದ್ದವಿದ್ದೇವು, ಮಾಯಾವತಿ ಪ್ರತಿಕ್ರಿಯಿಸಲಿಲ್ಲ: ರಾಹುಲ್ ಗಾಂಧಿ

BSP ಜೊತೆ ಮೈತ್ರಿಗೆ ಸಿದ್ದವಿದ್ದೇವು, ಮಾಯಾವತಿ ಪ್ರತಿಕ್ರಿಯಿಸಲಿಲ್ಲ: ರಾಹುಲ್ ಗಾಂಧಿ

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಮೈತ್ರಿಕೂಟ ರಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಾಯಾವತಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. ಆದರೆ ಅವರು ನನಗೆ ಯಾವುದೇ ಉತ್ತರವನ್ನು ನೀಡಲಿಲ್ಲ' ಎಂದು ಕೂಡ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

  • Share this:

ನವದೆಹಲಿ, ಏ. 9: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆದ ಘೋರ ಸೋಲಿನ ನಂತರ ಕಾಂಗ್ರೆಸ್ ಪಕ್ಷವು (Congress Party) ಉತ್ತರದ ರಾಜ್ಯದಲ್ಲಿ ನಿರ್ಣಾಯಕವಾಗಿರುವ ದಲಿತ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿರಬಹುದು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಶನಿವಾರ‌ ಚುನಾವಣೆಗೆ ಮುನ್ನವೇ ಬಿಎಸ್‌ಪಿಯ ಜೊತೆ ಮೈತ್ರಿ ಸಾಧಿಸಲು ಕಾಂಗ್ರೆಸ್‌ ಪಕ್ಷ ಪ್ರಯತ್ನ ಮಾಡಿತ್ತು. ಆದರೆ ಮಾಯಾವತಿ (Mayavati) ಅವರಿಂದ ಯಾವುದೇ ಉತ್ತರ ಬರಲಿಲ್ಲ ಎಂದು ಹೇಳಿದ್ದಾರೆ.


ಮೌನವಾಗಿದ್ದ ಮಾಯಾವತಿ
ಮಾಯಾವತಿ ಜಿ ಅವರು ಈ ಚುನಾವಣೆಯಲ್ಲಿ ಹೋರಾಡಲಿಲ್ಲ. ನಾವು ಕಾಂಗ್ರೆಸ್ ಮತ್ತು ಬಿಎಸ್ ಪಿ ಮೈತ್ರಿ ಮಾಡಿಕೊಳ್ಳುವಂತೆ ಸಂದೇಶವನ್ನು ಕಳುಹಿಸಿದ್ದೇವೆ. ಆದರೆ ಅವರು ಪ್ರತಿಕ್ರಿಯಿಸಲಿಲ್ಲ. ಹಿಂದೆ ಕಾನ್ಶಿರಾಮ್ ಜಿ ಉತ್ತರ ಪ್ರದೇಶದಲ್ಲಿ ದಲಿತರ ಪರ ಧ್ವನಿ ಎತ್ತಿದರು. ಆದರೆ ಅದು ಕಾಂಗ್ರೆಸ್ ಮೇಲೆ ಪರಿಣಾಮ ಬೀರಿತು. ಈಗ ಸಿಬಿಐ, ಇಡಿ ಮತ್ತು ಪೆಗಾಸಸ್ ಇರುವುದರಿಂದ ಈ ಬಾರಿ ಮಾಯಾವತಿ ಅವರು ದಲಿತರ ಧ್ವನಿಗಾಗಿ ಹೋರಾಡಲಿಲ್ಲ ಎಂದು ರಾಹುಲ್ ಗಾಂಧಿ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.


ಬಿಜೆಪಿಯ ಹುನ್ನಾರ
ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು ಕೆಲ ದಿನಗಳ ಹಿಂದೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದೆ. ಒಂದೇ ಒಂದು ಸ್ಥಾನಕ್ಕೆ ಸೀಮಿತವಾದ ಮಾಜಿ ಮುಖ್ಯಮಂತ್ರಿ ಮತ್ತು ದಲಿತ ನಾಯಕಿ ಮಾಯಾವತಿ ಅವರ ಪಕ್ಷದ ಸೋಲಿನ ಹಿಂದೆ ಮುಸ್ಲಿಂ ಮತದಾರರ ಮನಸ್ಸಿನಲ್ಲಿ ಬಿಜೆಪಿ ತನ್ನ ಇಮೇಜ್ ಅನ್ನು ಕಳಂಕಗೊಳಿಸಿರುವುದು ಕೂಡ ಕಾರಣ ಎಂದು ಆರೋಪಿಸಿದ್ದಾರೆ.
ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಲು ಸಿದ್ದವಿದ್ದೆವು


ಇದನ್ನು ಓದಿ:  ಅಧಿಕಾರದ ಮೇಲೆ ಆಸಕ್ತಿ ಇಲ್ಲ, ದೇಶವನ್ನು ಅರ್ಥ ಮಾಡಿಕೊಳ್ಳುವುದು ನನಗೆ ಮುಖ್ಯ: Rahul Gandhi


ಜಾತಿ ಕಳಂಕ ಕುರಿತು ರಾಹುಲ್ ಮಾತು


ಈಗ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆಯಿಂದ ಕಾಂಗ್ರೆಸ್ ತನ್ನ ಗಮನವನ್ನು ಉತ್ತರ ಪ್ರದೇಶದ ದಲಿತರತ್ತ ತಿರುಗಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಪಕ್ಷವು ಈಗ 80ರ ದಶಕದ ಮಧ್ಯಭಾಗದವರೆಗೆ ಅಸ್ತಿತ್ವದಲ್ಲಿದ್ದ ದಲಿತ, ಮುಸ್ಲಿಮರು ಮತ್ತು ಬ್ರಾಹ್ಮಣರ ಕಳೆದುಹೋದ ಮತ ಬ್ಯಾಂಕ್ ಅನ್ನು ಮರುಸೃಷ್ಟಿಸಲು ಆಶಿಸುತ್ತಿದೆ ಎನ್ನಲಾಗುತ್ತಿದೆ. 'ಮೈತ್ರಿಕೂಟ ರಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಾಯಾವತಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. ಆದರೆ ಅವರು ನನಗೆ ಯಾವುದೇ ಉತ್ತರವನ್ನು ನೀಡಲಿಲ್ಲ' ಎಂದು ಕೂಡ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಭಾರತದಲ್ಲಿ ಹಾಸಹೊಕ್ಕಾಗಿರುವ ಜಾತಿಯ ಕಳಂಕದ ಬಗ್ಗೆ ಮಾತನಾಡಿರುವ ರಾಹುಲ್ ಅವರು 'ಇಲ್ಲಿ ಪ್ರಾಣಿಗಳನ್ನು ಮುಟ್ಟ ಬಹುದು ಆದರೆ ಮನುಷ್ಯರನ್ನು ಅಲ್ಲ' ಎಂದು ಹೇಳಿದ್ದಾರೆ.


ಇದನ್ನು ಓದಿ: ಉತ್ತರ ಪ್ರದೇಶ ಸಿಎಂಒ ಟ್ವಿಟರ್ ಖಾತೆ ಹ್ಯಾಕ್, ಸಿಎಂ ಕಚೇರಿ ಖಾತೆಗೆ ಈತರ ಪ್ರೊಫೈಲ್ ಫೊಟೋ ಹಾಕೋದಾ?


ರಾಹುಲ್ ಗಾಂಧಿ ಅವರ ಹೇಳಿಕೆಗೆ ಮಾಯಾವತಿ ಅವರ ಪ್ರತಿಕ್ರಿಯೆ ಏನು ಎಂದು ಈಗ ರಾಜಕೀಯ ತಜ್ಞರು ಕಾಯುತ್ತಿದ್ದಾರೆ. ಚುನಾವಣೆಗೆ ಮುನ್ನ ಯುಪಿಯಲ್ಲಿ ಪಕ್ಷವು ‘ಕಬ್ಬಿಣದ ಕವಚ’ ಸರ್ಕಾರ ರಚಿಸಲಿದೆ ಎಂದು ಹೇಳಿ ಕೊಂಡಿದ್ದ ಬಿಎಸ್‌ಪಿ ರಾಜಕೀಯವಾಗಿ ನಿರ್ಣಾಯಕವಾದ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಒಂದು ಸ್ಥಾನವನ್ನು ಕೇವಲ ಒಂದು ಸ್ಥಾನ ಕೆಳಗೆ ಇಳಿದಿದೆ. ಮಾಯಾವತಿ ಅವರು ಉತ್ತರ ಪ್ರದೇಶದಲ್ಲಿ  ಮುಖ್ಯಮಂತ್ರಿಯಾಗಿ ನಾಲ್ಕು ಪ್ರತ್ಯೇಕ ಅವಧಿಗೆ ಸೇವೆ ಸಲ್ಲಿಸಿದ್ದರೆ, ಪ್ರಚಾರದ ಸಮಯದಲ್ಲಿ ಬಿಎಸ್‌ಪಿಯ ವಿರೋಧಾತ್ಮಕ ನಿಲುವು ಉತ್ತರ ಪ್ರದೇಶದ ಕೇಂದ್ರ ಹಂತದಿಂದ ಅದನ್ನು ಬಹುತೇಕ ತೆಗೆದು ಹಾಕಿದೆ ಎಂದು ರಾಜಕೀಯ ಪಂಡಿತರು ಹೇಳಿದ್ದಾರೆ.

top videos
    First published: