Karnataka CM: ಸ್ವಲ್ಪ ಸಮಯ ಕೊಡಿ: ರಾಹುಲ್ ಗಾಂಧಿ-ಡಿಕೆಶಿ ಸಂಧಾನ ವಿಫಲ

ಡಿಕೆ ಶಿವಕುಮಾರ್/ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್/ ರಾಹುಲ್ ಗಾಂಧಿ

ರಾಹುಲ್ ಗಾಂಧಿ ಅವರ  2:3 ಸೂತ್ರ ಒಪ್ಪಿಕೊಳ್ಳದ ಡಿಕೆ ಶಿವಕುಮಾರ್ ಸ್ಪಲ್ಪ ಸಮಯ ಕೊಡಿ ಎಂದು ಅಸಮಾಧಾನದಿಂದ ಹೊರ ಬಂದಿದ್ದಾರೆ ಎಂದು ತಿಳಿದು ಬಂದಿದೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahu Gandhi) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ನಡುವಿನ ಸಂಧಾನ ವಿಫಲವಾಗಿದೆ ಎಂದು ತಿಳಿದು ಬಂದಿದೆ. ಇಂದು ಸೋನಿಯಾ ಗಾಂಧಿ ನಿವಾಸಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದರು.  ರಾಹುಲ್ ಗಾಂಧಿ ಅವರ  2:3 ಸೂತ್ರ ಒಪ್ಪಿಕೊಳ್ಳದ ಡಿಕೆ ಶಿವಕುಮಾರ್ ಸ್ಪಲ್ಪ ಸಮಯ ಕೊಡಿ ಎಂದು ಅಸಮಾಧಾನದಿಂದ ಹೊರ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ಡಿಕೆ ಶಿವಕುಮಾರ್ ಅಭಿಮಾನಿಗಳು ಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲ ಅಭಿಮಾನಿಗಳು ಕಣ್ಣೀರು ಸಹ ಹಾಕುತ್ತಿದ್ದಾರೆ. 


ಸಂಧಾನ ವಿಫಲವಾದ ಹಿನ್ನೆಲೆ ರಾಹುಲ್ ಗಾಂಧಿ, ಡಿಕೆ ಶಿವಕುಮಾರ್, ಡಿಕೆ ಸುರೇಶ್ ಎಲ್ಲರೂ ಮಲ್ಲಿಕಾರ್ಜುನನ ಖರ್ಗೆ ನಿವಾಸಕ್ಕೆ ತೆರಳಿದ್ದಾರೆ.


ನಾಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನಕ್ಕೆ ಸಿದ್ಧತೆ ನಡೆಯಲಿದೆ. ನಾಳೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಾತ್ರ ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.




ಸದ್ಯ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ದೆಹಲಿಯಲ್ಲಿದ್ರೂ ಪರಸ್ಪರ ಮುಖಾಮುಖಿಯಾಗಿಲ್ಲ. ಮಲ್ಲಿಕಾರ್ಜುನ ಖರ್ಗೆ ನಿವಾಸದಿಂದ ಸಿದ್ದರಾಮಯ್ಯ ಹೊರ ಬಂದ ನಂತರವೇ ಪಕ್ಷದ ಅಧ್ಯಕ್ಷರ ಭೇಟಿಗೆ ಡಿಕೆಶಿ ತೆರಳಿದ್ದರು.


ಇದನ್ನೂ ಓದಿ:  Karnataka Election: ಸೋತ ಬಳಿಕ ನನ್ನ ಹಣ ನನಗೆ ಕೊಡಿ ಎಂದ ಕೆಜಿಎಫ್ ಬಾಬು


ಡಿಕೆಶಿ ಬೆಂಬಲಿಗರ ಆಗ್ರಹ


top videos




    First published: