• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Race For Karnataka CM: ಡಿಕೆಶಿ ದೆಹಲಿ ಪ್ರವಾಸ ದಿಢೀರ್ ರದ್ದು! ಕೊನೆ ಕ್ಷಣದಲ್ಲಿ ಅಚ್ಚರಿಯ ನಿರ್ಧಾರ ಕೈಗೊಂಡರಾ ಕೆಪಿಸಿಸಿ ಅಧ್ಯಕ್ಷ?

Race For Karnataka CM: ಡಿಕೆಶಿ ದೆಹಲಿ ಪ್ರವಾಸ ದಿಢೀರ್ ರದ್ದು! ಕೊನೆ ಕ್ಷಣದಲ್ಲಿ ಅಚ್ಚರಿಯ ನಿರ್ಧಾರ ಕೈಗೊಂಡರಾ ಕೆಪಿಸಿಸಿ ಅಧ್ಯಕ್ಷ?

ಕಾಂಗ್ರೆಸ್​ ಶಾಸಕಾಂಗ ಸಭೆ

ಕಾಂಗ್ರೆಸ್​ ಶಾಸಕಾಂಗ ಸಭೆ

ನನಗೆ ಹೊಟ್ಟೆ ಸಮಸ್ಯೆ ಆಗಿದೆ. ಡಾಕ್ಟರ್ ಒಂದು 10 ನಿಮಷ ಬರುತ್ತೇನೆ ಎಂದು ಹೇಳಿದ್ದಾರೆ. ಸ್ವಲ್ಪ ಜ್ವರ ಕೂಡ ಬಂದಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕರ್ನಾಟಕ (Karnataka) ಸಿಎಂ ಯಾರು ಆಗಲಿದ್ದಾರೆ ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಇದರ ನಡುವೆಯೇ ಸಿಎಂ ಆಯ್ಕೆ ಕುರಿತಂತೆ ನಿರ್ಧಾರ ಕೈಗೊಳ್ಳಲು ಹೈಕಮಾಂಡ್​​ಗೆ ತಿಳಿಸಿದ್ದೇವೆ ಎಂದು ಕಾಂಗ್ರೆಸ್ (Congress) ನಾಯಕರು ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಸಿದ್ದರಾಮಯ್ಯ (Siddaramaiah) ಅವರು ದೆಹಲಿಗೆ ಭೇಟಿ ನೀಡಿದ್ದಾರೆ. ಇದರ ನಡುವೆ ಇಂದು ದೆಹಲಿಗೆ (Delhi) ತೆರಳಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರ ಪ್ರವಾಸ ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೊಟ್ಟೆ ನೋವಿನ ಕಾರಣ ಡಿಕೆ ಶಿವಕುಮಾರ್ ಅವರ ಪ್ರವಾಸ ರದ್ದಾಗಿದೆ ಎನ್ನಲಾಗಿದೆ. ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಕೆ ಶಿವಕುಮಾರ್ ಅವರು, ನನಗೆ ಹೊಟ್ಟೆ ಸಮಸ್ಯೆ ಆಗಿದೆ. ಡಾಕ್ಟರ್ (Doctor) ಒಂದು 10 ನಿಮಷ ಬರುತ್ತೇನೆ ಎಂದು ಹೇಳಿದ್ದಾರೆ. ಸ್ವಲ್ಪ ಜ್ವರ ಕೂಡ ಬಂದಿದೆ. ಸ್ವಲ್ಪ ನನ್ನನ್ನೂ ಫ್ರೀ ಬಿಟ್ಟರೆ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. 


ನನಗೆ ರೆಸ್ಟ್ ಬೇಕು ನನ್ನನ್ನು ಬಿಟ್ಟು ಬಿಡಿ ಎಂದು ಡಿಕೆ ಮನವಿ


ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ನನ್ನನ್ನು ಬಂಡೆ ಅಂತಾ ನೀವು‌ ಕರೆದಿದ್ದೀರಿ. ಬಂಡೆ ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನನ್ನ ನೇಣುಗಂಬ ಆದರೂ ಮಾಡಿಕೊಳ್ಳಿ. ಜಲ್ಲಿಜಲ್ಲು, ಚಪ್ಪಡಿ ಆದರೂ ಮಾಡಿಕೊಳ್ಳಿ. ನನ್ನ ಬಳಿ ನಂಬರ್ ಇಲ್ಲ, ಅದಕ್ಕೆ ಐ ಆ್ಯಮ್ ಸಿಂಗಲ್ ಎಂದೆ. ನಾನು ಯಾರನ್ನೂ ದೆಹಲಿಗೆ ಕರೆದುಕೊಂಡು ಹೋಗಲ್ಲ. ನನಗೆ ಯಾರ ಶಾಸಕರ ಬೆಂಬಲವು ಇಲ್ಲ. ನನಗೆ ರೆಸ್ಟ್ ಬೇಕು ನನ್ನನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದಾರೆ.




ಇದನ್ನೂ ಓದಿ: Bhavani Revanna: ಎಲೆಕ್ಷನ್​​ ಮುಗಿದ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದ ಭವಾನಿ ರೇವಣ್ಣ

top videos


    ಇದಕ್ಕೂ ಮುನ್ನ ಮಾತನಾಡಿದ್ದ ಡಿಕೆ ಶಿವಕುಮಾರ್ ಅವರ ಒಂದೊಂದು ಮಾತುಗಳು ಹರಿತವಾದ ಖಡ್ಗದಂತಿತ್ತು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ತಿಲ್ಲ ಅನ್ನೋ ಸಿಟ್ಟು, ಬೇಸರ ಬಂಡೆ ಮನಸ್ಸನ್ನ ನುಚ್ಚು ನೂರು ಮಾಡಿ ಇಂಥಾ ಹೇಳಿಕೆ ಕೊಡುವಂತೆ ಮಾಡಿತ್ತು ಎನ್ನಲಾಗಿದೆ.


    ದೆಹಲಿಗೆ ಬನ್ನಿ ಅಂದಾಗ ಡಿಕೆ ಶಿವಕುಮಾರ್ ಬೆಳಗ್ಗೆ ಹೋಗಲ್ಲ ಅಂದಿದ್ದರು. ಶಾಂಘ್ರಿಲಾ ಹೋಟೆಲ್​ನಲ್ಲಿದ್ದ ನಾಯಕರನ್ನ ಭೇಟಿ ಮಾಡಿದ್ದರು. ಆಮೇಲೆ ಮಧ್ಯಾಹ್ನ ಹೋಗುತ್ತಿನೋ ಇಲ್ಲವೋ ಗೊತ್ತಿಲ್ಲ ಅಂದರು. ಕೊನೆಗೆ ಸಂಜೆ ನಂಬಿದ ದೇವರ ದರ್ಶನ ಪಡೆದುಕೊಂಡಿದ್ದರು.

    First published: